AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಸಂಸ್ಕೃತಿ ಎತ್ತಿ ತೋರಿಸುವ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆ.. ಹೊಲಗಳಲ್ಲಿ ರೈತರ ಸಂಭ್ರಮ

ರೈತರ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ಸಡಗರ ಸಂಭ್ರಮದಿಂದ ಜನರು ಆಚರಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ.

ಆಹಾರ ಸಂಸ್ಕೃತಿ ಎತ್ತಿ ತೋರಿಸುವ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆ.. ಹೊಲಗಳಲ್ಲಿ ರೈತರ ಸಂಭ್ರಮ
ಎಳ್ಳು ಅಮಾವಾಸ್ಯೆ ಹಬ್ಬದ ಸಡಗರ
shruti hegde
| Edited By: |

Updated on: Jan 13, 2021 | 10:20 PM

Share

ಬೀದರ್: ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ರೈತರು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ಜನರು ತೊಡಗಿದ್ದಾರೆ.

ನಗರವಾಸಿಗಳು ಹಬ್ಬದಲ್ಲಿ ಭಾಗಿ: ಹಳ್ಳಿಯ ಜನರು ಹೊಲದಲ್ಲಿ ಕೂತು ಕಾಳಿನ ಬಜ್ಜಿ, ರೊಟ್ಟಿ ಸೇರಿದಂತೆ ದೇಶಿ ಊಟದ ರುಚಿಯನ್ನು ಸವಿದು ಹಬ್ಬ ಸಂಭ್ರಮಿಸಿರುವುದರ ಜೊತೆಗೆ, ನಗರ ನಿವಾಸಿಗಳು ಒಂದು ದಿನದ ದೇಶಿ ಹಬ್ಬಕ್ಕೆ ಸಾಕ್ಷಿಯಾಗಿದ್ದರು. ಹೊಲದಲ್ಲಿ ಖಡಕ್ ರೊಟ್ಟಿ, ಕೆನೆ ಮೊಸರು, ಕಡುಬು, ಎಣ್ಣೆಗಾಯಿ ಬದನೆಕಾಯಿ ಪಲ್ಯ, ಹಸಿ ಟೊಮೊಟೊ, ಹಸಿ ಮೆಣಸಿನಕಾಯಿ ಮತ್ತು ಹಸಿ ಈರುಳ್ಳಿ ಚಟ್ನಿ, ಅಗಸೆ, ಶೇಂಗಾ ಚಟ್ನಿಪುಡಿ, ಅವರೆಕಾಳು, ಹೆಸರು, ಶೇಂಗಾ ಹೋಳಿಗೆ, ಸಜ್ಜಕ ಹೋಳಿಗೆ , ಬೇಳೆ ಹೋಳಿಗೆ ಹೀಗೆ ವಿವಿಧ ರೀತಿಯ ಅಡುಗೆ ಸಿದ್ಧಗೊಂಡಿತ್ತು.

ಸಾಂಪ್ರದಾಯಿಕ ಹಬ್ಬ: ಜೋಳದ ಕಿಚಡಿಗೆ ಎಲ್ಲ ಅಡುಗೆ ಮಿಶ್ರಣ ಮಾಡಿ ‘ಹರಿಗೋ ಮುರಿಗೋ’ ಎಂದೆನ್ನುತ್ತಾ (ಚರಗ ಚೆಲ್ಲುವರು) ಹೊಲದ ನಾಲ್ಕು ದಿಕ್ಕಿಗೆ ಸಿಂಪಡಿಸುತ್ತಾರೆ. ಆ ದಿನ ಹೊಲದಲ್ಲಿಯ ಗ್ರಾಮದೇವತೆ ಲಕ್ಷ್ಮಿಗೆ ಹೊಸ ಹೊದಿಕೆ ತೊಡಿಸಿ ಉಡಿ ತುಂಬುತ್ತಾರೆ. ನಮ್ಮನ್ನು ಸಲಹು ತಾಯಿ, ಹಗಲಿರುಳು ನಿನ್ನ ಹೊಲದಲ್ಲಿ ದುಡಿಯುವ ಮಕ್ಕಳನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ.

ಒಂದು ಸಮುದಾಯಕ್ಕೆಂದು ಸೀಮಿತವಲ್ಲ: ಈ ಹಬ್ಬ ಯಾವುದೇ ಒಂದು ಸಮುದಾಯಕ್ಕೆಂದು ಸೀಮಿತವಾಗಿಲ್ಲ. ಈ ದಿನ ಹೊಲದಲ್ಲಿ ಬಂದು ಹಬ್ಬ ಮಾಡುವುದರಿಂದ ಲಕ್ಷ್ಮಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ರೈತರದ್ದು. ಡಿಸೆಂಬರ್ ಜನವರಿ ತಿಂಗಳಲ್ಲಿ ರೈತನ ಮುಂಗಾರು ಬೆಳೆಯ ಕಟಾವು ಸಂದರ್ಭ. ಹಿಂಗಾರು ಬೆಳೆಗೆ ಮೊಳಕೆ ಸಂದರ್ಭ ಈ ಹಬ್ಬ ರೈತನಲ್ಲಿ ಸಂತಸ, ಹೊಸ ಹುಮ್ಮಸ್ಸು ಮೂಡಿಸುತ್ತದೆ.

ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರಲು ಪರಿಸರ ಸ್ನೇಹಿ ಮಣ್ಣಿನ ಮಡಿಕೆ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ