Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಸಂಸ್ಕೃತಿ ಎತ್ತಿ ತೋರಿಸುವ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆ.. ಹೊಲಗಳಲ್ಲಿ ರೈತರ ಸಂಭ್ರಮ

ರೈತರ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ಸಡಗರ ಸಂಭ್ರಮದಿಂದ ಜನರು ಆಚರಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ.

ಆಹಾರ ಸಂಸ್ಕೃತಿ ಎತ್ತಿ ತೋರಿಸುವ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆ.. ಹೊಲಗಳಲ್ಲಿ ರೈತರ ಸಂಭ್ರಮ
ಎಳ್ಳು ಅಮಾವಾಸ್ಯೆ ಹಬ್ಬದ ಸಡಗರ
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2021 | 10:20 PM

ಬೀದರ್: ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ರೈತರು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ಜನರು ತೊಡಗಿದ್ದಾರೆ.

ನಗರವಾಸಿಗಳು ಹಬ್ಬದಲ್ಲಿ ಭಾಗಿ: ಹಳ್ಳಿಯ ಜನರು ಹೊಲದಲ್ಲಿ ಕೂತು ಕಾಳಿನ ಬಜ್ಜಿ, ರೊಟ್ಟಿ ಸೇರಿದಂತೆ ದೇಶಿ ಊಟದ ರುಚಿಯನ್ನು ಸವಿದು ಹಬ್ಬ ಸಂಭ್ರಮಿಸಿರುವುದರ ಜೊತೆಗೆ, ನಗರ ನಿವಾಸಿಗಳು ಒಂದು ದಿನದ ದೇಶಿ ಹಬ್ಬಕ್ಕೆ ಸಾಕ್ಷಿಯಾಗಿದ್ದರು. ಹೊಲದಲ್ಲಿ ಖಡಕ್ ರೊಟ್ಟಿ, ಕೆನೆ ಮೊಸರು, ಕಡುಬು, ಎಣ್ಣೆಗಾಯಿ ಬದನೆಕಾಯಿ ಪಲ್ಯ, ಹಸಿ ಟೊಮೊಟೊ, ಹಸಿ ಮೆಣಸಿನಕಾಯಿ ಮತ್ತು ಹಸಿ ಈರುಳ್ಳಿ ಚಟ್ನಿ, ಅಗಸೆ, ಶೇಂಗಾ ಚಟ್ನಿಪುಡಿ, ಅವರೆಕಾಳು, ಹೆಸರು, ಶೇಂಗಾ ಹೋಳಿಗೆ, ಸಜ್ಜಕ ಹೋಳಿಗೆ , ಬೇಳೆ ಹೋಳಿಗೆ ಹೀಗೆ ವಿವಿಧ ರೀತಿಯ ಅಡುಗೆ ಸಿದ್ಧಗೊಂಡಿತ್ತು.

ಸಾಂಪ್ರದಾಯಿಕ ಹಬ್ಬ: ಜೋಳದ ಕಿಚಡಿಗೆ ಎಲ್ಲ ಅಡುಗೆ ಮಿಶ್ರಣ ಮಾಡಿ ‘ಹರಿಗೋ ಮುರಿಗೋ’ ಎಂದೆನ್ನುತ್ತಾ (ಚರಗ ಚೆಲ್ಲುವರು) ಹೊಲದ ನಾಲ್ಕು ದಿಕ್ಕಿಗೆ ಸಿಂಪಡಿಸುತ್ತಾರೆ. ಆ ದಿನ ಹೊಲದಲ್ಲಿಯ ಗ್ರಾಮದೇವತೆ ಲಕ್ಷ್ಮಿಗೆ ಹೊಸ ಹೊದಿಕೆ ತೊಡಿಸಿ ಉಡಿ ತುಂಬುತ್ತಾರೆ. ನಮ್ಮನ್ನು ಸಲಹು ತಾಯಿ, ಹಗಲಿರುಳು ನಿನ್ನ ಹೊಲದಲ್ಲಿ ದುಡಿಯುವ ಮಕ್ಕಳನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ.

ಒಂದು ಸಮುದಾಯಕ್ಕೆಂದು ಸೀಮಿತವಲ್ಲ: ಈ ಹಬ್ಬ ಯಾವುದೇ ಒಂದು ಸಮುದಾಯಕ್ಕೆಂದು ಸೀಮಿತವಾಗಿಲ್ಲ. ಈ ದಿನ ಹೊಲದಲ್ಲಿ ಬಂದು ಹಬ್ಬ ಮಾಡುವುದರಿಂದ ಲಕ್ಷ್ಮಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ರೈತರದ್ದು. ಡಿಸೆಂಬರ್ ಜನವರಿ ತಿಂಗಳಲ್ಲಿ ರೈತನ ಮುಂಗಾರು ಬೆಳೆಯ ಕಟಾವು ಸಂದರ್ಭ. ಹಿಂಗಾರು ಬೆಳೆಗೆ ಮೊಳಕೆ ಸಂದರ್ಭ ಈ ಹಬ್ಬ ರೈತನಲ್ಲಿ ಸಂತಸ, ಹೊಸ ಹುಮ್ಮಸ್ಸು ಮೂಡಿಸುತ್ತದೆ.

ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರಲು ಪರಿಸರ ಸ್ನೇಹಿ ಮಣ್ಣಿನ ಮಡಿಕೆ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ