ಮಂಡ್ಯ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆದಿದೆ ನಕಲಿ ನೋಟಿನ ಹಾವಳಿ!

ಮಂಡ್ಯ: ಸಕ್ಕರೆ ನಗರಿ ಎಂದೇ ಖ್ಯಾತಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಖೋಟಾ ನೋಟುಗಳ ಹಾವಳಿ ತಲೆದೂರಿದೆ. ದಂಧೆಕೋರರಿಗೆ ಅಮಾಯಕ ವೃದ್ಧರೇ ಟಾರ್ಗೆಟ್ ಆಗಿದ್ದು, ಹಣದ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ವೃದ್ಧ ಮಂಚಯ್ಯ ಎಂಬುವರಿಗೆ ಕಲರ್ ಜೆರಾಕ್ಸ್ ನೋಟು ಕೊಟ್ಟು ದಂಧೆಕೋರರು ಕುರಿ ಕೊಂಡೊಯ್ದಿದ್ದಾರೆ. ಮಂಚಯ್ಯ ಗ್ರಾಮದ ಬಳಿ ಒಬ್ಬನೇ ಕುರಿ ಮೇಯಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಕುರಿಯನ್ನು ಕೊಂಡುಕೊಳ್ಳುವುದಾಗಿ ಹೇಳಿದ್ದಾರೆ. 3 ಸಾವಿರ ಬೆಲೆ ಬಾಳುವ ಕುರಿಗೆ 5 ಸಾವಿರ […]

ಮಂಡ್ಯ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆದಿದೆ ನಕಲಿ ನೋಟಿನ ಹಾವಳಿ!
ಸಾಧು ಶ್ರೀನಾಥ್​

Updated on: Jan 27, 2020 | 6:52 PM

ಮಂಡ್ಯ: ಸಕ್ಕರೆ ನಗರಿ ಎಂದೇ ಖ್ಯಾತಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಖೋಟಾ ನೋಟುಗಳ ಹಾವಳಿ ತಲೆದೂರಿದೆ. ದಂಧೆಕೋರರಿಗೆ ಅಮಾಯಕ ವೃದ್ಧರೇ ಟಾರ್ಗೆಟ್ ಆಗಿದ್ದು, ಹಣದ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ವೃದ್ಧ ಮಂಚಯ್ಯ ಎಂಬುವರಿಗೆ ಕಲರ್ ಜೆರಾಕ್ಸ್ ನೋಟು ಕೊಟ್ಟು ದಂಧೆಕೋರರು ಕುರಿ ಕೊಂಡೊಯ್ದಿದ್ದಾರೆ.

ಮಂಚಯ್ಯ ಗ್ರಾಮದ ಬಳಿ ಒಬ್ಬನೇ ಕುರಿ ಮೇಯಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಕುರಿಯನ್ನು ಕೊಂಡುಕೊಳ್ಳುವುದಾಗಿ ಹೇಳಿದ್ದಾರೆ. 3 ಸಾವಿರ ಬೆಲೆ ಬಾಳುವ ಕುರಿಗೆ 5 ಸಾವಿರ ರೂಪಾಯಿ ಕೊಟ್ಟು ಕೊಂಡೊಯ್ದಿದ್ದಾರೆ. ನೋಟುಗಳ ಬಗ್ಗೆ ಅನುಮಾನ ಬಂದು ಚೆಕ್ ಮಾಡಿದಾಗ ಜೆರಾಕ್ಸ್ ನೋಟು ಎಂಬುದು ಪತ್ತೆಯಾಗಿದೆ.

500 ರೂ. ಮುಖಬೆಲೆಯ 10 ಕಲರ್ ಜೆರಾಕ್ಸ್ ನೋಟುಗಳನ್ನ ನೀಡಿ ಕುರಿಗಾಹಿ ಮಂಚಯ್ಯಗೆ ವಂಚಿಸಿದ್ದಾರೆ. ಇತ್ತ ಕುರಿಯೂ ಇಲ್ಲದೆ, ಅತ್ತ ಹಣವೂ ಇಲ್ಲದ ಸ್ಥಿತಿ ವೃದ್ಧ ಮಂಚಯ್ಯನವರದ್ದಾಗಿದೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



Published On - 3:03 pm, Mon, 27 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us