AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕನ ಸಾವು: ಮೈಮೇಲಿನ ಗಾಯದ ಗುರುತು ಬೇರೆಯೇ ಕಥೆ ಹೇಳುತ್ತಿದೆ ಏನದು?

ಮಂಡ್ಯದ ಸಾದತ್ ನಗರದ ರೂಹಿತ್ ಪಾಷಾ (21) ಮೃತನಾಗಿದ್ದು,ಈತನ ಮೈ ಮೇಲಿನ ಗಾಯದ ಗುರುತಿನಿಂದ ಇದು ಸಹಜವಾದ ಸಾವಲ್ಲ ಕೊಲೆ ಎಂದು ಶಂಕಿಸಲಾಗಿದೆ.

ಯುವಕನ ಸಾವು: ಮೈಮೇಲಿನ ಗಾಯದ ಗುರುತು ಬೇರೆಯೇ ಕಥೆ ಹೇಳುತ್ತಿದೆ ಏನದು?
ಪ್ರಾತಿನಿಧಿಕ ಚಿತ್ರ
preethi shettigar
| Edited By: |

Updated on: Dec 20, 2020 | 7:10 PM

Share

ಮಂಡ್ಯ: ಪ್ಲ್ಯಾಸ್ಟಿಕ್​ ಲೋಡ್​ ಮಾಡುವ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದಲ್ಲಿ ನಡೆದಿದೆ.

ಮಂಡ್ಯದ ಸಾದತ್ ನಗರದ ರೂಹಿತ್ ಪಾಷಾ (21) ಮೃತನಾಗಿದ್ದು, ಈತನ ಮೈ ಮೇಲೆ ಗಾಯದ ಗುರುತು ಕಂಡು ಬಂದ ಕಾರಣ ಇದು ಸಹಜವಾದ ಸಾವಲ್ಲ ಕೊಲೆ ಎಂದು ಶಂಕಿಸಲಾಗಿದೆ.

ಮಾಲೀಕ ಹಾಗೂ ಜೊತೆಗಾರರ ನಡುವೆ ಜಗಳ ನಡೆದು ಆತನನ್ನ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಎಸ್​ಪಿ ಪರಶುರಾಮ್​ಗೆ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. ಸದ್ಯ ಕಿರಗಾವಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಗುಡ್ಡ ಕುಸಿತ, ಓರ್ವ ಸಾವು