Maryada Hatya: ವಿಜಯಪುರದಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ತಿರುವು; ಯುವಕನ ತಾಯಿ ಬಿಚ್ಚಿಟ್ಟರು ಮಹತ್ವದ ಸುಳಿವು
Vijayapura: ಯವತಿ ದಾವಲಭೀ ತಂಬಗಿಯ ತಂದೆ ಬಂದಗಿಸಾಬ್, ಸಹೋದರ ದಾವಲ್ಪಟೇಲ್, ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್ ಎಂಬುವರು ಹತ್ಯೆ ಬಳಿಕ ಪರಾರಿಯಾಗಿದ್ದಾರೆ. ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ನಡೆದಿದ್ದ ಪ್ರೇಮಿಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ. ಈ ವಿಷಯವಾಗಿ, ಹತ್ಯೆಯಾದ ಯುವಕನ ತಾಯಿ ಮಲ್ಲಮ್ಮ ಟಿವಿ9 ಜೊತೆ ಮಾತನಾಡಿದ್ದಾರೆ. ಸಲಾದಹಳ್ಳಿಯಲ್ಲಿ ಪ್ರೇಮಿಗಳ ಕೊಚ್ಚಿ ಕೊಲೆ ಮಾಡಿರುವ ಪ್ರಕರಣದಲ್ಲಿ ಯುವಕನ ತಾಯಿ ಮತ್ತು ಸಹೋದರ ಕಲ್ಯಾಣಕುಮಾರ್ ಎದುರೇ ಆ ಪ್ರೇಮಿಗಳಿಬ್ಬರ ಹತ್ಯೆಯಾಗಿದೆ ಎಂದು ಯುವಕನ ತಾಯಿ ಮಲ್ಲಮ್ಮ ಹೇಳಿದ್ದಾರೆ.
ಯುವಕನ ತಾಯಿ ಟಿವಿ9 ಗೆ ಹೇಳಿದ್ದಿಷ್ಟು: ಪ್ರೀತಿ ಮಾಡಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೊದಲು ಪ್ರೇಮಿಗಳನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಯುವತಿಯ ತಂದೆ ಮತ್ತು ಸಂಬಂಧಿಕರು ಹಲ್ಲೆ ಮಾಡಿದವರು. ಈ ವೇಳೆ ಕೊಲೆ ಮಾಡದಂತೆ ತಾಯಿ ಬೇಡಿಕೊಂಡಿದ್ದರಂತೆ. ಇಬ್ಬರಿಗೂ ಬುದ್ಧಿ ಮಾತು ಹೇಳೋಣ ಎಂದಿದ್ದರಂತೆ. ಯುವಕನ ತಾಯಿಯ ಆ ಮಾತುಗಳನ್ನು ಕೇಳದೆ ಪ್ರೇಮಿಗಳ ಕೊಲೆ ಮಾಡಲಾಗಿದೆ.
ಯುವತಿಯ ತಂದೆಯೇ ಚಾಕು, ಚೂರಿಯನ್ನ ತಂದಿದ್ದ. ಪ್ರೇಮಿಗಳಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಯಿತು. ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಯುವತಿಯ ತಂದೆ ಬಂದಗಿಸಾಬ್ ತಂಬದ್ ಮತ್ತು ಯುವತಿಯ ಸಹೋದರ ದಾವಲ್ ಈ ಕುಕೃತ್ಯವೆಸಗಿದ್ದಾರೆ.
ಯುವತಿ ಸಂಬಂಧಿಕರಿಂದಲೇ ಪ್ರೇಮಿಗಳ ಬರ್ಬರ ಹತ್ಯೆ ನಡೆದಿದೆ. ಯುವಕನ ತಾಯಿಯ ಎದುರೇ ಹತ್ಯೆ ನಡೆದಿದ್ದು, ಭೀಕರ ಹತ್ಯೆಯ ದೃಶ್ಯ ಕಂಡು ಮಲ್ಲಮ್ಮ ಬೆಚ್ಚಿಬಿದ್ದಿದ್ದಾರೆ.
ಏನಿದು ಘಟನೆ: ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯ ಹೊರ ಭಾಗದಲ್ಲಿ ಬಸವರಾಜ್ ಬಡಿಗೇರ್ ಹಾಗೂ ದಾವಲಭೀ ತಂಬಗಿ ಎಂಬಿಬ್ಬರು ಪ್ರೇಮಿಗಳ ಕೊಲೆ ನಡೆದಿತ್ತು. ಯುವತಿಯ ತಂದೆ ಬಂದಗಿಸಾಬ್ ತಂಬದ್ ಹಾಗೂ ಇತರರ ವಿರುದ್ಧ ಕೊಲೆ ಆರೋಪ ಕೆಳಿಬಂದಿದೆ.
ಯವತಿ ದಾವಲಭೀ ತಂಬಗಿಯ ತಂದೆ ಬಂದಗಿಸಾಬ್, ಸಹೋದರ ದಾವಲ್ಪಟೇಲ್, ಅಳಿಯರಾದ ಲಾಳೆಸಾಬ್, ಅಲ್ಲಾಪಟೇಲ್ ರಫೀಕ್ ಎಂಬುವರು ಹತ್ಯೆ ಬಳಿಕ ಪರಾರಿಯಾಗಿದ್ದಾರೆ. ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಯುವತಿ; ಪೋಷಕರಿಂದ ಮರ್ಯಾದಾ ಹತ್ಯೆ ಶಂಕೆ
(Maryada Hatya in vijayapura district murdered youth mother mallamma narrates incident)
Published On - 3:47 pm, Wed, 23 June 21