ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ
ಮುಖ್ಯಾಂಶಗಳು
- ವಿದ್ಯುತ್ ಖಾಸಗೀಕರಣ ವಿಚಾರದಲ್ಲಿ ಆತಂಕ ಬೇಡ
- 2003ರಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಖಾಸಗೀಕರಣಕ್ಕೆ ತಿದ್ದುಪಡಿ ತಂದರು
- ಶಿವಮೊಗ್ಗದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿಕೆ
ಶಿವಮೊಗ್ಗದಲ್ಲಿಂದು ಇಂಧನ ಸಚಿವ ಕೆ ಜೆ ಜಾರ್ಜ್ ಕೂಡಾ ಮಾತನಾಡಿದ್ದು, ವಿದ್ಯುತ್ ಖಾಸಗೀಕರಣ ವಿಚಾರದಲ್ಲಿ ಆತಂಕ ಬೇಡ. 2003ರಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಖಾಸಗೀಕರಣಕ್ಕೆ ತಿದ್ದುಪಡಿ ತಂದರು. ಆದ್ರೆ ಇಷ್ಟರೊಳಗೆ ಕರ್ನಾಟಕದಲ್ಲಿ ಆಗಿಲ್ಲ. ಈಗ ಮತ್ತೆ ವಿದ್ಯುತ್ ಖಾಸಗೀಕರಣಕ್ಕೆ KERCಗೆ ಪ್ರಸ್ತಾವನೆಸಲ್ಲಿಸಿದಾರೆ. ನಮ್ಮ ವಿದ್ಯುತ್ ನಿಗಮಗಳಿಗೆ ಅಬ್ಜೆಕ್ಷನ್ ಫೈಲ್ ಮಾಡಲು ಹೇಳಿದ್ದೇವೆ. ಫೈನಲ್ ಆರ್ಡರ್ ಬಂದಮೇಲೆ ನಾವು ಏನ್ ಮಾಡ್ಬೇಕು ಯೋಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ, (ಜೂನ್ 30): ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಈ ಸಂಬಂಧ ಈಗಾಗಲೇ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನೊಬ್ಬನೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದೀಗ ಶಿವಮೊಗ್ಗದಲ್ಲಿಂದು ಇಂಧನ ಸಚಿವ ಕೆ ಜೆ ಜಾರ್ಜ್ ಕೂಡಾ ಮಾತನಾಡಿದ್ದು, ವಿದ್ಯುತ್ ಖಾಸಗೀಕರಣ ವಿಚಾರದಲ್ಲಿ ಆತಂಕ ಬೇಡ. 2003ರಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಖಾಸಗೀಕರಣಕ್ಕೆ ತಿದ್ದುಪಡಿ ತಂದರು. ಆದ್ರೆ ಇಷ್ಟರೊಳಗೆ ಕರ್ನಾಟಕದಲ್ಲಿ ಆಗಿಲ್ಲ. ಈಗ ಮತ್ತೆ ವಿದ್ಯುತ್ ಖಾಸಗೀಕರಣಕ್ಕೆ KERCಗೆ ಪ್ರಸ್ತಾವನೆಸಲ್ಲಿಸಿದಾರೆ. ನಮ್ಮ ವಿದ್ಯುತ್ ನಿಗಮಗಳಿಗೆ ಅಬ್ಜೆಕ್ಷನ್ ಫೈಲ್ ಮಾಡಲು ಹೇಳಿದ್ದೇವೆ. ಫೈನಲ್ ಆರ್ಡರ್ ಬಂದಮೇಲೆ ನಾವು ಏನ್ ಮಾಡ್ಬೇಕು ಯೋಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
