AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ನಲ್ಲಿ ಆನ್​ಲೈನ್​ ವ್ಯವಹಾರ ಸ್ಥಗಿತಗೊಳಿಸಲು ಮೊಬೈಲ್ ಅಂಗಡಿ ಮಾಲೀಕರ ಸಂಘದಿಂದ ಸರ್ಕಾರಕ್ಕೆ ಆಗ್ರಹ

ಈಗ ಏನಿದ್ದರೂ ಸ್ಮಾರ್ಟ್ ಫೋನ್​ಗಳ ಜಮಾನ. ಒಂದು ಸ್ಮಾರ್ಟ್ ಫೋನ್ ಕಿಸೆಯಲ್ಲಿ ಇದ್ದರೆ ಸಾಕು ನಮ್ಮ ಬಹುತೇಕ ಕೆಲಸಗಳು ಆಗಿ ಬಿಡುತ್ತವೆ. ಈ ಸ್ಮಾರ್ಟ್ ಫೋನ್​ಗಳ ವ್ಯವಹಾರ ನಡೆಸುವ ಮೂರುವರೆ ಸಾವಿರಕ್ಕೂ ಅಧಿಕ ಶೋ ರೂಮ್​ಗಳು ರಾಜ್ಯದಲ್ಲಿವೆ. ಕೇವಲ ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಅಧಿಕ ಮೊಬೈಲ್ ಮಳಿಗೆಗಳು ಇವೆ.

ಲಾಕ್​ಡೌನ್​ನಲ್ಲಿ ಆನ್​ಲೈನ್​ ವ್ಯವಹಾರ ಸ್ಥಗಿತಗೊಳಿಸಲು ಮೊಬೈಲ್ ಅಂಗಡಿ ಮಾಲೀಕರ ಸಂಘದಿಂದ ಸರ್ಕಾರಕ್ಕೆ ಆಗ್ರಹ
ಮುಚ್ಚಿರುವ ಅಂಗಡಿಗಳು
sandhya thejappa
|

Updated on:Apr 29, 2021 | 2:56 PM

Share

ಉಡುಪಿ: ಕೊರೊನಾ ಸೋಂಕಿನ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊವಿಡ್ ವಿರುದ್ಧ ಹೋರಾಡಲು ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂನ ಜಾರಿಗೊಳಿಸಿದೆ. ಕಟ್ಟು ನಿಟ್ಟಿನ ನಿಯಮದಿಂದ ಬಹುತೇಕ ಎಲ್ಲವೂ ಬಂದ್ ಆಗಿವೆ. ಈ ಸಾಲಿಗೆ ಮೊಬೈಲ್ ಅಂಗಡಿಗಳು ಸೇರಿವೆ. ಲಾಕ್​ಡೌನ್​ ಕಾರಣಕ್ಕಾಗಿ ಮೊಬೈಲ್ ಅಂಗಡಿಗಳು ಮುಚ್ಚಿದರು ಕೂಡ ಆನ್​ಲೈನ್​ ಸಂಸ್ಥೆಗಳು ವ್ಯವಹಾರ ಮುಂದುವರಿಸಿರುವುದು ಮೊಬೈಲ್ ವ್ಯಾಪಾರಸ್ಥರ ಸಿಟ್ಟಿಗೆ ಕಾರಣವಾಗಿದೆ.

ಈಗ ಏನಿದ್ದರೂ ಸ್ಮಾರ್ಟ್ ಫೋನ್​ಗಳ ಜಮಾನ. ಒಂದು ಸ್ಮಾರ್ಟ್ ಫೋನ್ ಕಿಸೆಯಲ್ಲಿ ಇದ್ದರೆ ಸಾಕು ನಮ್ಮ ಬಹುತೇಕ ಕೆಲಸಗಳು ಆಗಿ ಬಿಡುತ್ತವೆ. ಈ ಸ್ಮಾರ್ಟ್ ಫೋನ್​ಗಳ ವ್ಯವಹಾರ ನಡೆಸುವ ಮೂರುವರೆ ಸಾವಿರಕ್ಕೂ ಅಧಿಕ ಶೋ ರೂಮ್​ಗಳು ರಾಜ್ಯದಲ್ಲಿವೆ. ಕೇವಲ ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಅಧಿಕ ಮೊಬೈಲ್ ಮಳಿಗೆಗಳು ಇವೆ. ಮೊಬೈಲ್ ಮಾರಾಟ ಮೊಬೈಲ್ ಆಕ್ಸೆಸರಿಸ್​ಗಳು ಮೊಬೈಲ್ ರಿಚಾರ್ಜ್ ಹೀಗೆ ಅನೇಕ ವಿಭಾಗಗಳಲ್ಲಿ ಜನರು ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಐದರಿಂದ ಆರು ಸಾವಿರ ಜನರು ಮೊಬೈಲ್ ಉದ್ಯಮವನ್ನೇ ನಂಬಿಕೊಂಡಿದ್ದು, ಇದೀಗ ಲಾಕ್​ಡೌನ್ ಪರಿಣಾಮವಾಗಿ ಉದ್ಯಮ ಕುಸಿದು ಹೋಗಿದೆ. ಆದರೆ ಆನ್​ಲೈನ್​ ಮೂಲಕ ಮೊಬೈಲ್ ವ್ಯಾಪಾರ ಬಾರಿ ಭರಾಟೆಯಿಂದ ಮುಂದುವರೆದಿದೆ.

ರಾಜ್ಯಾದ್ಯಂತ ಮೊಬೈಲ್ ಅಂಗಡಿಗಳನ್ನು ಮುಚ್ಚಿದ್ದರೂ ಕೂಡ ಆನ್​ಲೈನ್​ ಮೂಲಕ ಜನ ಮೊಬೈಲ್ ಖರೀದಿ ಮಾಡುತ್ತಿದ್ದಾರೆ. ಜನರು ಆರ್ಡರ್ ಮಾಡಿದ ಮೊಬೈಲ್​ಗಳನ್ನು ವಿತರಿಸಲು ಡೆಲಿವರಿ ಬಾಯ್ಗ​ಳು ಮನೆ ಮನೆಗೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವ ಯುವಕರಿಂದ ಸೋಂಕು ಹರಡುವುದಿಲ್ವಾ ಎಂದು ಮೊಬೈಲ್ ಅಂಗಡಿ ಮಾಲೀಕರು ಪ್ರಶ್ನಿಸುತ್ತಿದ್ದಾರೆ. ಕಳೆದ ಬಾರಿ ಲಾಕ್​ಡೌನ್​ ಆದ ಸಮಯದಲ್ಲಿ ಆನ್​ಲೈನ್​ ವ್ಯವಹಾರಗಳಿಗೂ ಕಡಿವಾಣ ಹಾಕಲಾಗಿತ್ತು. ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿರುವ ಮಹಾರಾಷ್ಟ್ರ, ಗುಜರಾತ್, ದೆಹಲಿ ಮೊದಲಾದ ಕಡೆಗಳಲ್ಲಿ ಆನ್​ಲೈನ್​ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿಯೂ ಆನ್​ಲೈನ್​ ಉದ್ಯಮವನ್ನು ಸ್ಥಗಿತಗೊಳಿಸಬೇಕೆಂದು ಮೊಬೈಲ್ ಅಂಗಡಿ ಮಾಲೀಕರ ಸಂಘ ಸರಕಾರಕ್ಕೆ ಆಗ್ರಹಿಸಿದೆ.

ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಆದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸ ಮಾಡಿದೆ. ಸ್ಥಳೀಯ ಅಂಗಡಿಗಳನ್ನು ಮುಚ್ಚಿ ಆನ್​ಲೈನ್​ನಲ್ಲಿ ವ್ಯವಹಾರಕ್ಕೆ ಅವಕಾಶ ನೀಡಿದೆ. ಇದರಿಂದ ಸಣ್ಣ ವ್ಯಾಪಾರಿಗಳು ತೀರಾ ನಷ್ಟವನ್ನು ಅನುಭವಿಸುತ್ತಿವೆ. ಅಂಗಡಿಗಳನ್ನು ಮುಚ್ಚಿಸುವ ಜೊತೆಗೆ ಆನ್​ಲೈನ್​ ವ್ಯವಹಾರಕ್ಕೆ ಅವಕಾಶ ನೀಡುವ ಮೂಲಕ ವಿದೇಶಿ ಕಂಪನಿಗಳಿಗೆ ಪರೋಕ್ಷವಾಗಿ ಸಹಾಯಮಾಡುತ್ತಿದೆ. ಕಳೆದ ಬಾರಿ ಎಲ್ಲವೂ ಬಂದ್ ಆಗಿತ್ತು. ಆದರೆ ಈ ಬಾರಿ ಸಣ್ಣ ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯಲ್ಲಿ ಲಾಕ್​ಡೌನ್​ ಜಾರಿಯಾಗಿದೆ. ಇದರಿಂದ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಅಂಗಡಿ ಮಾಲೀಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ

ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ಖಾಸಗಿ ಆಸ್ಪತ್ರೆಗಳಿಂದ ರೆಮ್​ಡೆಸಿವರ್​ಗೆ ಅನಗತ್ಯ ಬೇಡಿಕೆ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ

ಜೀವನದಲ್ಲಿ ಜಿಗುಪ್ಸೆ ಬಂದಿದೆ; ವೈಷ್ಣವಿ ಮುಂದೆ ಅಳಲು ತೋಡಿಕೊಂಡ ಮಂಜು

(Mobile Store Owners Association is urging the government to shut down online business at Lockdown)

Published On - 2:38 pm, Thu, 29 April 21

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ