
ಬೆಂಗಳೂರು: ಇಡೀ ಡಿಜೆ ಹಳ್ಳಿ ನಿನ್ನೆ ರಾತ್ರಿ ನಡೆದ ಗಲಭೆಯ ಸುಳಿಯಲ್ಲಿದ್ದಾಗ ಅದೇ ಏರಿಯಾದಲ್ಲಿ ಒಂದು ಮೆಚ್ಚುಗೆಗೆ ಪಾತ್ರವಾಗುವ ಸಂಗತಿಯೊಂದು ಬೆಳಕಿಗೆ ಬಂದಿದೆ.
ದುಷ್ಕೃತ್ಯ ತಡೆದಿದ್ದು ಬರೋಬ್ಬರಿ 100 ಮುಸ್ಲಿಂ ಯುವಕರ ಮಾನವ ಸರಪಳಿ
ಇಡೀ ರಾತ್ರಿ.. ಹನುಮನ ರಕ್ಷಣೆಗೆ ಅಕ್ಷರಶಃ ನಿಂತುಬಿಟ್ಟರು
ಗಲಭೆಕೋರರ ಉದ್ದೇಶವನ್ನ ಅರಿತ ಈ ಯುವಕರು ಕೂಡಲೇ ದೇವಸ್ಥಾನದತ್ತ ತೆರಳಿ ಪುಂಡರನ್ನು ಅಲ್ಲಿಂದ ಓಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಡೀ ರಾತ್ರಿ ದೇಗುಲದ ಮುಂದೆ ಮಾನವ ಸರಪಳಿ ರಚಿಸಿ ಹನುಮನ ರಕ್ಷಣೆಗೆ ನಿಂತರು. ಆಂಜನೇಯನ ರಕ್ಷಣೆಗೆ ನಿಂತ ಯುವಕರ ಕಾರ್ಯದ ವಿಡಿಯೋ ಇದೀಗ ಬೆಳಕಿಗೆ ಬಂದು ಸಖತ್ ವೈರಲ್ ಆಗಿದೆ. ಒಟ್ನಲ್ಲಿ, ಪ್ರಸಿದ್ಧ ಕವಿ ಮಹಮ್ಮದ್ ಇಕ್ಬಾಲ್ರ ಸಾರೆ ಜಹಾಂಸೆ ಅಚ್ಛಾ ಕವನದ ಸಾಲಿನಂತೆ ‘‘ಬೋಧಿಸುವುದಿಲ್ಲ ಧರ್ಮ ಮಾನವರ ನಡುವೆ ದ್ವೇಷ. ಭಾರತೀಯ ಸುತರು ನಾವು, ಭಾರತವು ನಮ್ಮ ದೇಶ’’ ಎಂದು ಈ ಯುವಕರು ತಮ್ಮ ನಡೆ-ನುಡಿಯ ಮುಖಾಂತರ ತೋರಿಸಿಕೊಟ್ಟಿದ್ದಾರೆ.
Published On - 6:34 pm, Wed, 12 August 20