ಹುಲಿ ಉಗುರು ವಿವಾದ: ಸಂತೋಷ್ ನೇರವಾಗಿ ಬಿಗ್ ಬಾಸ್ ಮನೆಗೆ ಹೋದರೆ ಸಂತೋಷ ದ್ವಿಗುಣಗೊಳ್ಳುತ್ತದೆ: ಮಂಜುಳಾ ದೇವಿ, ವರ್ತೂರು ಸಂತೋಷ್ ಅಮ್ಮ

ಅದು ಅವನಿಷ್ಟ ಎಂದು ಹೇಳುವ ಮಂಜುಳಾ, ಅವನು ಮನೆಗೆ ಬಂದರೆ ಸಂತೋಷ, ಆದರೆ ಅವನು ಬಿಗ್ ಬಾಸ್ ಮನೆಗೆ ಹೋದರೆ ಎರಡು ಪಟ್ಟು ಸಂತೋಷವಾಗುತ್ತದೆ ಅನ್ನುತ್ತಾರೆ. ಅವನ ಜನಪ್ರಿಯತೆ ಈಗ ಹೆಚ್ಚಿರುವುದರಿಂದ ಬಿಗ್ ಬಾಸ್ ಗೆ ವಾಪಸ್ಸು ಹೋಗಿ ಗೆದ್ದು ಬರಲಿ ಎಂದು ಮಂಜುಳಾ ಬಯಸುತ್ತಾರೆ.

ಹುಲಿ ಉಗುರು ವಿವಾದ: ಸಂತೋಷ್ ನೇರವಾಗಿ ಬಿಗ್ ಬಾಸ್ ಮನೆಗೆ ಹೋದರೆ ಸಂತೋಷ ದ್ವಿಗುಣಗೊಳ್ಳುತ್ತದೆ: ಮಂಜುಳಾ ದೇವಿ, ವರ್ತೂರು ಸಂತೋಷ್ ಅಮ್ಮ
|

Updated on: Oct 27, 2023 | 6:02 PM

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ (varthur Santosh) ಅವರ ಅಮ್ಮ ಮಂಜುಳಾ ದೇವಿಯವರ (Manjula Devi) ಸಂತೋಷಕ್ಕೆ ಪಾರವಿಲ್ಲ ಮಾರಾಯ್ರೇ. ಯಾಕಾಗಬೇಡ? ಹುಲಿ ಉಗುರು ಪೆಂಡೆಂಟ್ (tiger claw pendant) ಧರಿಸಿದ್ದ ಕಾರಣಕ್ಕಾಗಿ ನ್ಯಾಯಾಲಯ ಅವರನ್ನು 14-ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು, ಇವತ್ತು ಅವರಿಗೆ ಷರತ್ತು ಬದ್ಧ ಜಾಮೀನು ಒದಗಿಸಲಾಗಿದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿರುವ ಮಂಜುಳಾ ತಮ್ಮ ಮಗ ಜನರ ಪ್ರೀತಿ ಹಾಗೂ ಬೆಂಬಲದಿಂದ ಜೈಲಿನಿಂದ ಹೊರಬರುತ್ತಿದ್ದಾನೆ ಅಂತ ಹೇಳಿದರು. ಅದು ಸರಿ ಸಂತೋಷ್ ಮನೆಗ ಬರುತ್ತಾರಾ ಅಥವಾ ಅಲ್ಲಿಂದಲೇ ಬಿಗ್ ಬಾಸ್ ಮನೆಗೆ ಹೋಗ್ತಾರಾ? ಅದು ಅವನಿಷ್ಟ ಎಂದು ಹೇಳುವ ಮಂಜುಳಾ, ಅವನು ಮನೆಗೆ ಬಂದರೆ ಸಂತೋಷ, ಆದರೆ ಅವನು ಬಿಗ್ ಬಾಸ್ ಮನೆಗೆ ಹೋದರೆ ಎರಡು ಪಟ್ಟು ಸಂತೋಷವಾಗುತ್ತದೆ ಅನ್ನುತ್ತಾರೆ. ಅವನ ಜನಪ್ರಿಯತೆ ಈಗ ಹೆಚ್ಚಿರುವುದರಿಂದ ಬಿಗ್ ಬಾಸ್ ಗೆ ವಾಪಸ್ಸು ಹೋಗಿ ಗೆದ್ದು ಬರಲಿ ಎಂದು ಮಂಜುಳಾ ಬಯಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us