AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಸಮಾಗಮ :ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ

Guru Parampara: ಶ್ರೀಗಳು ಅವಧೂತ ಪರಂಪರೆಯು ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ ವಿಶಿಷ್ಟವಾಗಿದ್ದು ಭಕ್ತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಹಿಂದಿನಿಂದಲೂ ಉತ್ತಮವಾದಂತಹ ಸ್ಪಂದನೆ ನೀಡುತ್ತಿದೆ. ಮೈಸೂರಿನ ಅರ್ಜುನ ಅವಧೂತ ಗುರುಗಳು ಉತ್ತಮವಾದಂತಹ ಕೆಲಸ ಕಾರ್ಯಗಳ ಮೂಲಕ ಜನರಿಗೆ ಯಾವುದೆ ಜಾತಿ ಮತದ ಬೇಧವಿಲ್ಲದೆ, ಅವರ ಕಷ್ಟಗಳನ್ನು ನಿವಾರಿಸುವಲ್ಲಿ ಶ್ರಮಿಸುತ್ತಿದ್ದಾರೆ -ಸುತ್ತೂರು ಶ್ರೀಗಳ ಮಾತು

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಸಮಾಗಮ :ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಅಪರೂಪದ ಸಮಾಗಮ -ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ
TV9 Web
| Updated By: ಸಾಧು ಶ್ರೀನಾಥ್​

Updated on:Apr 14, 2022 | 4:17 PM

Share

ಮೈಸೂರಿನ ಸೋನಾರ್ ಬೀದಿ ಅಪರೂಪದ ಮಿಲನಕ್ಕೆ ಸಾಕ್ಷಿಯಾಗಿತ್ತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Suttur Mutt Shivarathri Deshikendra Swamiji) ಹಾಗೂ ಅವಧೂತ ಪರಂಪರೆಯ ಶ್ರೀ ಅರ್ಜುನ ಅವಧೂತ (Arjuna Avadhoota) ಗುರುಗಳನ್ನು ಭೇಟಿ ಮಾಡಿ (Guru Parampara) ಲೋಕ ಕಲ್ಯಾಣ ವಿಶೇಷ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತ್ರಿವಿಧ ದಾಸೋಹದ ಮೂಲಕ ಜಗತ್ತಿನಾದ್ಯಂತ ಭಕ್ತಗಣವನ್ನು ಹೊಂದಿರುವ ಸುತ್ತೂರು ಶ್ರೀಗಳು ಮೈಸೂರಿನ ಸೋನಾರ್ ಬೀದಿಯಲ್ಲಿರುವ ಅವಧೂತ ಅರ್ಜುನ ಗುರುಗಳ ನಿವಾಸಕ್ಕೆ ಆಗಮಿಸಿದ್ದರು. ಸುತ್ತೂರು ಶ್ರೀಗಳ ಆಗಮನದಿಂದಾಗಿ ಸೋನಾರ್ ಬೀದಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಇಡೀ ಬೀದಿ ತಳಿರು ತೋರಣಗಳಿಂದ ಅಲಂಕೃತವಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತಿತ್ತು. ರಂಗೋಲಿಗಳ ಚಿತ್ತಾರ ಆಕರ್ಷಕವಾಗಿತ್ತು. ಅವಧೂತ ಅರ್ಜುನರ ನಿವಾಸಕ್ಕೆ ಆಗಮಿಸಿದ ಸುತ್ತೂರ ಶ್ರೀಗಳಿಗೆ ಮುತೈದೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಸುತ್ತೂರು ಶ್ರೀಗಳನ್ನು ಸೋನಾರ್ ಬೀದಿಯಿಂದ ಮನೆಯವರೆಗೂ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ಶ್ರೀಗಳು ನಡೆದು ಬರುವ ಹಾದಿಯಲ್ಲಿ ಪುಷ್ಪವರ್ಷ ಮಾಡಲಾಯಿತು. ಮನೆಗೆ ಬಂದ ಸುತ್ತೂರು ಶ್ರೀಗಳಿಗೆ ಆರತಿ ಮಾಡಿ ಮನೆಯ ಒಳಗಡೆಗೆ ಸ್ವಾಗತಿಸಲಾಯಿತು. ಮನೆಯಲ್ಲಿದ್ದ ಶ್ರೀ ಸಾಯಿಬಾಬಾ ಮೂರ್ತಿ, ವೆಂಕಟಾಚಲ ಅವಧೂತರ ಪ್ರತಿಮೆ, ದತ್ತಾತ್ರೇಯ ಸ್ವಾಮಿ ಹಾಗೂ ಚಾಮುಂಡೇಶ್ವರಿ ವಿಗ್ರಹಕ್ಕೆ ಸುತ್ತೂರು ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಇದಾದ ನಂತರ ಸುತ್ತೂರು ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಅವಧೂತ ಅರ್ಜುನ ಗುರುಗಳು ತಾವೇ ಸ್ವತಃ ಸುತ್ತೂರು ಶ್ರೀಗಳ ಪಾದಗಳಿಗೆ ಅರಿಶಿನ ಕುಂಕುಮ ಗಂಧವನ್ನು ಲೇಪಿಸಿ, ವಿವಿಧ ಪುಷ್ಪಗಳನ್ನು ಇಟ್ಟು ಪಾದಪೂಜೆ ಮಾಡಿದರು. ಫಲ ತಾಂಬೂಲಗಳನ್ನು ಅರ್ಪಿಸಿ ಗುರುಪರಂಪರೆಗೆ ಗೌರವ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಸಭಾ ಕಾರ್ಯಕ್ರಮ ಪಾದಪೂಜೆ ನಂತರ ಮನೆಯ ಬಳಿಯೇ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಎಲ್ ನಾಗೇಂದ್ರ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಹಿರಿಯ ಐಪಿಎಸ್ ಅಧಿಕಾರಿ ಡಾ ಎ ಎನ್ ಪ್ರಕಾಶ್ ಗೌಡ, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ ಎಸ್ ವಿದ್ಯಾಶಂಕರ್ ಸೇರಿ ನೂರಾರು ಗುರುಬಂಧುಗಳು ಭಾಗಿಯಾಗಿದ್ದರು. ಇದೇ ವೇಳೆ ಸುತ್ತೂರು ಶ್ರೀಗಳು ಸುಮಾರು ಒಂದು ಗಂಟೆಗಳ ಕಾಲ ಆಶೀರ್ವಚನ ನೀಡಿದರು.

ಸುತ್ತೂರು ಶ್ರೀಗಳ ಮಾತು ಶ್ರೀಗಳು ಅವಧೂತ ಪರಂಪರೆಯು ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ ವಿಶಿಷ್ಟವಾಗಿದ್ದು ಭಕ್ತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಹಿಂದಿನಿಂದಲೂ ಉತ್ತಮವಾದಂತಹ ಸ್ಪಂದನೆ ನೀಡುತ್ತಿದೆ. ಮೈಸೂರಿನ ಅರ್ಜುನ ಅವಧೂತ ಗುರುಗಳು ಉತ್ತಮವಾದಂತಹ ಕೆಲಸ ಕಾರ್ಯಗಳ ಮೂಲಕ ಜನರಿಗೆ ಯಾವುದೆ ಜಾತಿ ಮತದ ಬೇಧವಿಲ್ಲದೆ, ಅವರ ಕಷ್ಟಗಳನ್ನು ನಿವಾರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲೂ ಸಹ ಇದೇ ರೀತಿಯ ಆಧ್ಯಾತ್ಮ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರನ್ನ ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಲಿ. ಆ ಮೂಲಕ ನೊಂದು ಬಂದ ಜನರ ಕಷ್ಟ ನಿವಾರಣೆಯಾಗಿ ಉತ್ತಮವಾದಂತಹ ಸಮಾಜ ನಿರ್ಮಾಣವಾಗಲಿ.

ಶ್ರೀ ಅರ್ಜುನ ಅವಧೂತ ಮಾತು ಸುತ್ತೂರು ಶ್ರೀಗಳು ನಮ್ಮ ಮನೆಗೆ, ಬಡಾವಣೆಗೆ ಬಂದಿದ್ದು ಶಿವನೇ ಬಂದಂತೆ ಆಗಿದೆ. ಶ್ರೀಗಳ ಸೇವೆ ಅಪಾರ. ಅವರ ಸರಿ ಸಮ ಕೂರುವಷ್ಟು ನಾನು ದೊಡ್ಡವನಲ್ಲ.‌ ನಮ್ಮ ಸಂಸ್ಕೃತಿ ಪರಂಪರೆಗೆ ಶ್ರೀಗಳ ಕೊಡುಗೆ ಅಪಾರ. ಸುತ್ತೂರು ಶ್ರೀಗಳ ಆಗಮನದ ಜೊತೆ ವರುಣನ ಆಗಮನವೂ ಆಗಿದೆ. ಪ್ರಕೃತಿಯೂ ಖುಷಿಯಾಗಿ ಅಭಿಷೇಕ ಮಾಡಿದೆ. ಮುಂದೆಯೂ ಗುರುಗಳ‌ ಮಾರ್ಗದರ್ಶನ ಕೃಪೆ ಸದಾ ನಮ್ಮ ಮೇಲಿರಲಿ.

ಲೋಕಕಲ್ಯಾಣಕ್ಕಾಗಿ ನಡೆದ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ಈ ಇಬ್ಬರು ಗುರುಗಳ ಸಮ್ಮಿಲನ ಕಂಡು ಪುನೀತರಾದರು. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಗಳು ಮತ್ತಷ್ಟು ನಡೆಯಲಿ ಎಂದು ಎಲ್ಲರೂ ಮನದುಂಬಿ ಹಾರೈಸಿದರು. -ರಾಮ್, ಟಿವಿ9, ಮೈಸೂರು

Published On - 4:17 pm, Thu, 14 April 22

ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?