ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!? ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು. ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ […]

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Oct 20, 2020 | 10:24 AM

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!?

ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು.

ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ ಕೊರೊನಾಗೆ ಪರಿಣಾಮಕಾರಿ ಮೆಡಿಸಿನ್ ಅಲ್ಲ ಅಂತಾ ತಕ್ಷನವೇ ಪ್ರೂವ್ ಆಗಿಬಿಟ್ಟಿದೆ. ಈ ಮಧ್ಯೆ, ಮಹಾಮಾರಿಗೆ ಪ್ಲಾಸ್ಮಾ ಥೆರಪಿ ದಿವ್ಯ ಔಷಧ ಎನ್ನಲಾಯ್ತು. ಉಹುಃ! ಅದೂ ಈಗ ಅಷ್ಟೊಂದು ಪರಿಣಾಮಕಾರಿ ಅಲ್ಲವಂತೆ! ICMR ನವರೇ ಪ್ಲಾಸ್ಮಾ ಕೊರೊನಾಗೆ ಪರಿಣಾಮಕಾರಿಯಲ್ಲ ಎಂದಿದ್ದಾರೆ

ಹಾಗಿದ್ರೆ ಮಹಾಮಾರಿ ಕೊರೊನಾದಿಂದ ಕಾಪಾಡೋಕೆ ಸೂಕ್ತ ಔಷಧಿಯೇ ಇಲ್ಲವಾ? ಈ ಔಷಧಿಗಳು ನಮ್ಮನ್ನ ಕಾಪಾಡುತ್ತವೆ ಅನ್ನೋ ನಂಬಿಕೆ ಏನಾಯ್ತು? ಹಾಗಾದ್ರೆ ಕೊರೊನಾದಿಂದ ನಮ್ಮನ್ನ ರಕ್ಷಿಸೋವರು ಯಾರು? ಯಾರೂ ಅಲ್ಲ.. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಅಷ್ಟೇ..! ಇದು ಕಟು ವಾಸ್ತವ. ಹೀಗಾಗಿ ಇನ್ಮುಂದೆ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಅಂತಿದ್ದಾರೆ ತಜ್ಞರು.

Published On - 10:23 am, Tue, 20 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us