AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ: ಬೆಚ್ಚಿಬೀಳಿಸುತ್ತಿದೆ ಸಂಪತ್ ಮತ್ತು ಆರೋಪಿಗಳ ಮೊಬೈಲ್​ ಕಾಲ್ ಡಿಟೇಲ್ಸ್​

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಕೇಸ್​ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಗಲಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್‌ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸುಳಿವು ಸಿಕ್ಕಿದೆ. ಸಂಪತ್‌ರಾಜ್ ಮತ್ತು ಆರೋಪಿಗಳ ಕರೆ ವಿವರ ಬಹಿರಂಗಗೊಂಡಿದೆ. ಘಟನೆ ದಿನ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್‌ರಾಜ್ ದೂರವಾಣಿ […]

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ: ಬೆಚ್ಚಿಬೀಳಿಸುತ್ತಿದೆ ಸಂಪತ್ ಮತ್ತು ಆರೋಪಿಗಳ ಮೊಬೈಲ್​ ಕಾಲ್ ಡಿಟೇಲ್ಸ್​
ಆಯೇಷಾ ಬಾನು
|

Updated on: Oct 20, 2020 | 10:05 AM

Share

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಕೇಸ್​ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಗಲಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್‌ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸುಳಿವು ಸಿಕ್ಕಿದೆ. ಸಂಪತ್‌ರಾಜ್ ಮತ್ತು ಆರೋಪಿಗಳ ಕರೆ ವಿವರ ಬಹಿರಂಗಗೊಂಡಿದೆ.

ಘಟನೆ ದಿನ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್‌ರಾಜ್ ದೂರವಾಣಿ ಸಂಪರ್ಕದಲ್ಲಿದ್ದರು. ಇದೇ ಆರೋಪಿಗಳು ಘಟನಾ ಸ್ಥಳದಲ್ಲಿದ್ದದ್ದು ಎಂದು ಟವರ್ ಲೊಕೇಶನ್ ಮೂಲಕ ಸಾಬೀತಾಗಿದೆ.

ಕಾಲ್ ಡಿಟೇಲ್ಸ್ ಹೀಗಿದೆ. ಕಾಲ್ 1:- ಸಂಪತ್​ ರಾಜ್ ಗಲಭೆ ದಿನ ಸಂಜೆ 6.50ಕ್ಕೆ ಮೊದಲ ಕರೆ ಮಾಡಿದ್ದಾರೆ. ಕಾರು ​ಚಾಲಕನ ಜತೆ 66 ಸೆಕೆಂಡ್​ ಮಾತನಾಡಿದ್ದಾರೆ. ಕಾಲ್ 2 :- ಸಂಜೆ 7.8ಕ್ಕೆ ಅದೇ ಕಾರು ಚಾಲಕ ಸಂತೋಷ್​ಗೆ ಕರೆ ಮಾಡಿದ್ದಾನೆ. ಚಾಲಕ ಹಾಗೂ ಸಂತೋಷ್​ ಮಧ್ಯೆ 148 ಸೆಕೆಂಡ್​ ಮಾತುಕತೆ ನಡೆದಿದೆ. ಕಾಲ್ 3 :- ಬಳಿಕ 7.17ಕ್ಕೆ ಮುಜಾಹಿದ್​ ಪಾಷಾಗೆ ಸಂತೋಷ್​ ಕರೆ. ಮುಜಾಹಿದ್​ ಪಾಷಾ ಜತೆ ಸಂತೋಷ್​ 53 ಸೆಕೆಂಡ್​ ಮಾತು. ಕಾಲ್ 4 :- 7.49ಕ್ಕೆ ಮತ್ತೆ ಚಾಲಕನಿಗೆ ಕರೆ ಮಾಡಿದ್ದ ಸಂಪತ್​ ರಾಜ್​. ಚಾಲಕನ ಜೊತೆ ಮತ್ತೆ 59 ಸೆಕೆಂಡ್​ ಸಂಪತ್​ ರಾಜ್ ಮಾತು. ಕಾಲ್ 5 :- 7.53ಕ್ಕೆ ಯಾಸಿನ್​ ಜಾಕೀರ್​ಗೆ ಶಫಿ ಉಲ್ಲಾ ಕರೆ. ಯಾಸೀನ್​ ಜತೆ 47 ಸೆಕೆಂಡ್​ ಮಾತಾಡಿದ್ದ ಶಫಿ ಉಲ್ಲಾ. ಕಾಲ್ 6 :- ಬಳಿಕ ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ. ಇವರಿಬ್ಬರು 25 ಸೆಕೆಂಡ್​ ಮಾತನಾಡಿದ್ದಾರೆ. ಕರೆ ನಂ. 7: ಬಳಿಕ ಶಫಿ ಉಲ್ಲಾಗೆ ಜಾಕೀರ್​ ಕರೆ ಮಾಡಿದ್ದ. ಜಾಕೀರ್​ ಜತೆ ಮಾತಾಡಿ ವಾಜಿದ್​ಗೆ ಶಫಿ ಉಲ್ಲಾ ಕರೆ ಈ ಮೂವರ ಮಧ್ಯೆ ಎರಡೆರಡು ಬಾರಿ ಪದೇ ಪದೇ ಕರೆ. ಕಾಲ್ 8 :- ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್​ಗೆ ಕರೆ. ಇಬ್ಬರೂ ಮಾತಾಡಿದ ಒಂದೇ ನಿಮಿಷದ ಬಳಿಕ ಸಂಪತ್​ಗೆ ಕರೆ ಮಾಡಿದ್ದಾರೆ. 59 ಸೆಕೆಂಡ್​ ಸಂಪತ್​ ರಾಜ್​ ಜೊತೆ ಶಫಿ ಉಲ್ಲಾ ಮಾತನಾಡಿದ್ದಾನೆ. ಬಳಿಕ ಶಫಿ ಉಲ್ಲಾ, ವಾಜಿದ್, ಜಾಕೀರ್​​ ಮಧ್ಯೆ ಮತ್ತೆ ಮಾತುಕತೆ ನಡೆದಿದೆ. ಕಾಲ್ 9 :- ರಾತ್ರಿ ಎಂಟೂವರೆ ಬಳಿಕ ಜಾಕೀರ್​ಗೆ ಮೂರು ಕರೆ ರಾತ್ರಿ 8.48 ರಿಂದ 9:09 ರ ನಡುವೆ ಮೂರು ಬಾರಿ ಜಾಕೀರ್​ಗೆ ಕರೆ ಮಾಡಿ ಸಂಪತ್​ ರಾಜ್ 149 ಸೆಕೆಂಡ್ ಮಾತಾಡಿದ್ದರು. ರಾತ್ರಿ 9.9ಕ್ಕೆ 56 ಸೆಕೆಂಡ್​ ಮಾತನಾಡಿದ್ದಾರೆ.

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ