AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ: ಬೆಚ್ಚಿಬೀಳಿಸುತ್ತಿದೆ ಸಂಪತ್ ಮತ್ತು ಆರೋಪಿಗಳ ಮೊಬೈಲ್​ ಕಾಲ್ ಡಿಟೇಲ್ಸ್​

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಕೇಸ್​ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಗಲಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್‌ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸುಳಿವು ಸಿಕ್ಕಿದೆ. ಸಂಪತ್‌ರಾಜ್ ಮತ್ತು ಆರೋಪಿಗಳ ಕರೆ ವಿವರ ಬಹಿರಂಗಗೊಂಡಿದೆ. ಘಟನೆ ದಿನ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್‌ರಾಜ್ ದೂರವಾಣಿ […]

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ: ಬೆಚ್ಚಿಬೀಳಿಸುತ್ತಿದೆ ಸಂಪತ್ ಮತ್ತು ಆರೋಪಿಗಳ ಮೊಬೈಲ್​ ಕಾಲ್ ಡಿಟೇಲ್ಸ್​
ಆಯೇಷಾ ಬಾನು
|

Updated on: Oct 20, 2020 | 10:05 AM

Share

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಕೇಸ್​ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಗಲಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್‌ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸುಳಿವು ಸಿಕ್ಕಿದೆ. ಸಂಪತ್‌ರಾಜ್ ಮತ್ತು ಆರೋಪಿಗಳ ಕರೆ ವಿವರ ಬಹಿರಂಗಗೊಂಡಿದೆ.

ಘಟನೆ ದಿನ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್‌ರಾಜ್ ದೂರವಾಣಿ ಸಂಪರ್ಕದಲ್ಲಿದ್ದರು. ಇದೇ ಆರೋಪಿಗಳು ಘಟನಾ ಸ್ಥಳದಲ್ಲಿದ್ದದ್ದು ಎಂದು ಟವರ್ ಲೊಕೇಶನ್ ಮೂಲಕ ಸಾಬೀತಾಗಿದೆ.

ಕಾಲ್ ಡಿಟೇಲ್ಸ್ ಹೀಗಿದೆ. ಕಾಲ್ 1:- ಸಂಪತ್​ ರಾಜ್ ಗಲಭೆ ದಿನ ಸಂಜೆ 6.50ಕ್ಕೆ ಮೊದಲ ಕರೆ ಮಾಡಿದ್ದಾರೆ. ಕಾರು ​ಚಾಲಕನ ಜತೆ 66 ಸೆಕೆಂಡ್​ ಮಾತನಾಡಿದ್ದಾರೆ. ಕಾಲ್ 2 :- ಸಂಜೆ 7.8ಕ್ಕೆ ಅದೇ ಕಾರು ಚಾಲಕ ಸಂತೋಷ್​ಗೆ ಕರೆ ಮಾಡಿದ್ದಾನೆ. ಚಾಲಕ ಹಾಗೂ ಸಂತೋಷ್​ ಮಧ್ಯೆ 148 ಸೆಕೆಂಡ್​ ಮಾತುಕತೆ ನಡೆದಿದೆ. ಕಾಲ್ 3 :- ಬಳಿಕ 7.17ಕ್ಕೆ ಮುಜಾಹಿದ್​ ಪಾಷಾಗೆ ಸಂತೋಷ್​ ಕರೆ. ಮುಜಾಹಿದ್​ ಪಾಷಾ ಜತೆ ಸಂತೋಷ್​ 53 ಸೆಕೆಂಡ್​ ಮಾತು. ಕಾಲ್ 4 :- 7.49ಕ್ಕೆ ಮತ್ತೆ ಚಾಲಕನಿಗೆ ಕರೆ ಮಾಡಿದ್ದ ಸಂಪತ್​ ರಾಜ್​. ಚಾಲಕನ ಜೊತೆ ಮತ್ತೆ 59 ಸೆಕೆಂಡ್​ ಸಂಪತ್​ ರಾಜ್ ಮಾತು. ಕಾಲ್ 5 :- 7.53ಕ್ಕೆ ಯಾಸಿನ್​ ಜಾಕೀರ್​ಗೆ ಶಫಿ ಉಲ್ಲಾ ಕರೆ. ಯಾಸೀನ್​ ಜತೆ 47 ಸೆಕೆಂಡ್​ ಮಾತಾಡಿದ್ದ ಶಫಿ ಉಲ್ಲಾ. ಕಾಲ್ 6 :- ಬಳಿಕ ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ. ಇವರಿಬ್ಬರು 25 ಸೆಕೆಂಡ್​ ಮಾತನಾಡಿದ್ದಾರೆ. ಕರೆ ನಂ. 7: ಬಳಿಕ ಶಫಿ ಉಲ್ಲಾಗೆ ಜಾಕೀರ್​ ಕರೆ ಮಾಡಿದ್ದ. ಜಾಕೀರ್​ ಜತೆ ಮಾತಾಡಿ ವಾಜಿದ್​ಗೆ ಶಫಿ ಉಲ್ಲಾ ಕರೆ ಈ ಮೂವರ ಮಧ್ಯೆ ಎರಡೆರಡು ಬಾರಿ ಪದೇ ಪದೇ ಕರೆ. ಕಾಲ್ 8 :- ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್​ಗೆ ಕರೆ. ಇಬ್ಬರೂ ಮಾತಾಡಿದ ಒಂದೇ ನಿಮಿಷದ ಬಳಿಕ ಸಂಪತ್​ಗೆ ಕರೆ ಮಾಡಿದ್ದಾರೆ. 59 ಸೆಕೆಂಡ್​ ಸಂಪತ್​ ರಾಜ್​ ಜೊತೆ ಶಫಿ ಉಲ್ಲಾ ಮಾತನಾಡಿದ್ದಾನೆ. ಬಳಿಕ ಶಫಿ ಉಲ್ಲಾ, ವಾಜಿದ್, ಜಾಕೀರ್​​ ಮಧ್ಯೆ ಮತ್ತೆ ಮಾತುಕತೆ ನಡೆದಿದೆ. ಕಾಲ್ 9 :- ರಾತ್ರಿ ಎಂಟೂವರೆ ಬಳಿಕ ಜಾಕೀರ್​ಗೆ ಮೂರು ಕರೆ ರಾತ್ರಿ 8.48 ರಿಂದ 9:09 ರ ನಡುವೆ ಮೂರು ಬಾರಿ ಜಾಕೀರ್​ಗೆ ಕರೆ ಮಾಡಿ ಸಂಪತ್​ ರಾಜ್ 149 ಸೆಕೆಂಡ್ ಮಾತಾಡಿದ್ದರು. ರಾತ್ರಿ 9.9ಕ್ಕೆ 56 ಸೆಕೆಂಡ್​ ಮಾತನಾಡಿದ್ದಾರೆ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ