AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವಾರಿಯರ್ಸ್​ಗಿಲ್ಲ ಅನುಕೂಲ, ಕಷ್ಟ ಹೇಳಿಕೊಂಡು ಕಣ್ಣೀರಾದ ನರ್ಸ್

ಬೆಂಗಳೂರು: ಕೊರೊನಾ ವೈರಸ್​ನ ಕಟ್ಟಿ ಹಾಕಲು ಮೆಡಿಕಲ್ ವಾರಿಯರ್ಸ್​ ಸತತ ಪ್ರಯತ್ನದಲ್ಲಿದ್ದಾರೆ. ತಮ್ಮ ಮನೆ-ಮಠ ಏನನ್ನೂ ಚಿಂತಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅಂತಹ ಮೆಡಿಕಲ್ ವಾರಿಯರ್ಸ್​ಗೆ ಸರ್ಕಾರ ಯಾವುದೇ ರೀತಿಯ ಅನುಕೂಲಗಳನ್ನು ನೀಡುತ್ತಿಲ್ಲ. ಕೊರೊನಾ ಸೇನಾನಿಗಳ ಈ ದುಃಸ್ಥಿತಿ ಬಯಲಿಗೆ ಬಂದಿದೆ. ಆರೋಗ್ಯ ಇಲಾಖೆಯ ಲೋಪ ಬಿಚ್ಚಿಟ್ಟ ನರ್ಸ್, ಟಿವಿ9 ವಾಹಿನಿಯ ವಾಹನದಲ್ಲೇ ಡ್ರಾಪ್: ಮಂಗಮ್ಮನಪಾಳ್ಯದ ಮದೀನಾ ನಗರದಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ಆರೋಗ್ಯ ಇಲಾಖೆ ಅವ್ಯವಸ್ಥೆ ನೆನೆದು ಕಣ್ಣೀರಾಕಿದ್ದಾರೆ. ನಮಗೆ ಕಿಟ್ ಇಲ್ಲ. […]

ಕೊರೊನಾ ವಾರಿಯರ್ಸ್​ಗಿಲ್ಲ ಅನುಕೂಲ, ಕಷ್ಟ ಹೇಳಿಕೊಂಡು ಕಣ್ಣೀರಾದ ನರ್ಸ್
ಸಾಧು ಶ್ರೀನಾಥ್​
|

Updated on:May 15, 2020 | 12:22 PM

Share

ಬೆಂಗಳೂರು: ಕೊರೊನಾ ವೈರಸ್​ನ ಕಟ್ಟಿ ಹಾಕಲು ಮೆಡಿಕಲ್ ವಾರಿಯರ್ಸ್​ ಸತತ ಪ್ರಯತ್ನದಲ್ಲಿದ್ದಾರೆ. ತಮ್ಮ ಮನೆ-ಮಠ ಏನನ್ನೂ ಚಿಂತಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅಂತಹ ಮೆಡಿಕಲ್ ವಾರಿಯರ್ಸ್​ಗೆ ಸರ್ಕಾರ ಯಾವುದೇ ರೀತಿಯ ಅನುಕೂಲಗಳನ್ನು ನೀಡುತ್ತಿಲ್ಲ. ಕೊರೊನಾ ಸೇನಾನಿಗಳ ಈ ದುಃಸ್ಥಿತಿ ಬಯಲಿಗೆ ಬಂದಿದೆ.

ಆರೋಗ್ಯ ಇಲಾಖೆಯ ಲೋಪ ಬಿಚ್ಚಿಟ್ಟ ನರ್ಸ್, ಟಿವಿ9 ವಾಹಿನಿಯ ವಾಹನದಲ್ಲೇ ಡ್ರಾಪ್: ಮಂಗಮ್ಮನಪಾಳ್ಯದ ಮದೀನಾ ನಗರದಲ್ಲಿ ಕೆಲಸ ಮಾಡುವ ನರ್ಸ್ ಒಬ್ಬರು ಆರೋಗ್ಯ ಇಲಾಖೆ ಅವ್ಯವಸ್ಥೆ ನೆನೆದು ಕಣ್ಣೀರಾಕಿದ್ದಾರೆ. ನಮಗೆ ಕಿಟ್ ಇಲ್ಲ. ಮಾಸ್ಕ್ ಕೊಟ್ಟು 4 ದಿನ ಆಗಿದೆ ಎಂದು ಆರೋಗ್ಯ ಇಲಾಖೆಯ ಲೋಪವನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ರಾತ್ರಿ ವೇಳೆಯೂ ಮಹಿಳಾ ಸಿಬ್ಬಂದಿ ಕೆಲಸ ಮಾಡ್ಬೇಕು. ಅವರಿಗೆ ಯಾವುದೇ ಭದ್ರತೆ ನೀಡಿಲ್ಲ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ ನರ್ಸ್​ನನ್ನು ಅಧಿಕಾರಿಗಳು ಕರೆ ಮಾಡಿ ಮಂಗಮ್ಮನಪಾಳ್ಯದಲ್ಲಿ ಸೋಂಕಿನ ಶಂಕೆ ಇದೆ. ಹೋಗಿ ಸಂಪರ್ಕಿತರ ಮಾಹಿತಿ ತಗೊಂಡು ಬನ್ನಿ ಎಂದಿದ್ದಾರೆ. ಆದರೆ ನರ್ಸ್​ಗೆ ಯಾವುದೇ ಭದ್ರತೆ ನೀಡಿಲ್ಲ. ರಾತ್ರಿ 9 ಗಂಟೆಯಾದ್ರು ಮನೆಗೆ ಹೋಗಲು ವಾಹನ ಕೂಡ ಸಿಗದೆ ಟಿವಿ9 ವಾಹಿನಿಯ ವಾಹನದಲ್ಲೇ ಡ್ರಾಪ್ ಮಾಡಲಾಗಿದೆ.

ಸರ್ವೆ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ಕೊಡಲ್ಲ: ಜೀವ ಉಳಿಸುವ ಕೆಲಸ ಮಾಡುತ್ತಿರುವವರ ಜೀವನದ ಜೊತೆ ಅಧಿಕಾರಿಗಳು ಆಟ ಆಡ್ತಿದ್ದಾರೆ. ಇಲ್ಲಿ ಇವರು ಕಷ್ಟಪಟ್ಟು ಡೇಟಾ ಕಲೆಕ್ಟ್ ಮಾಡಿದರೆ.. ಅಲ್ಲಿ ಎಸಿ ರೂಮಲ್ಲಿದ್ದು ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ. ಸರ್ಕಾರ ಪಿಪಿಇ ಕಿಟ್​ಗೆ ಕೋಟಿ ಕೋಟಿ ಖರ್ಚು ಮಾಡುತ್ತೆ. ಆದ್ರೆ ಸೋಂಕಿತರಿರೋ ಏರಿಯಾಗೆ ಹೋಗೋರಿಗೆ, ಅಲ್ಲಿ ಸರ್ವೆ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ಕೊಡಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಯಾರಿಗೂ ಬೇಡ. ರಾತ್ರಿ 9 ಗಂಟೆ ಆದ್ರೂ ಒಬ್ಬರೇ ಹೋಗಬೇಕು. ಸೋಂಕಿತರ ಮನೆ ಬಳಿ ಹೋಗಿ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ಕೊಡಬೇಕು. ರಾತ್ರಿ ವಾಪಸ್ ಹೋಗೋಕೆ ವಾಹನ ವ್ಯವಸ್ಥೆಯೂ ಇಲ್ಲ ಎಂದು ಆರೋಗ್ಯ ಇಲಾಖೆ ವಿರುದ್ಧ ನರ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 10:54 am, Fri, 15 May 20

Follow Us
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ