ಕೋಣಗಳಿಗೆ ಹೊಡೆಯಬಾರದು, ಮೂಗುದಾರ ಹಾಕಬಾರದು: ಕಂಬಳದ ಮೇಲೆ ಕರಿಛಾಯೆ
ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ. ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ […]
ಸಾಧು ಶ್ರೀನಾಥ್
Updated on:
Nov 20, 2019 | 4:02 PM
ಉಡುಪಿ: ವಿಶ್ವ ಪ್ರಸಿದ್ಧ ಕೋಣಗಳ ರೇಸ್ ಕಂಬಳ, ಕರಾವಳಿಯಲ್ಲಿ ನಡೆಯೋ ಜಾನಪದ ಕ್ರೀಡೆ. ಕರಾವಳಿಗರನ್ನ ರೋಮಾಂಚನಗೊಳಿಸೋ ಆಟ. ಆದ್ರೆ ಕಳೆದ ಕೆಲ ವರ್ಷಗಳಿಂದ ಕಂಬಳದ ಮೇಲೆ ಕರಿಛಾಯೆ ಆವರಿಸಿದೆ. ಪ್ರಾಣಿ ದಯಾ ಸಂಘವಾದ ‘ಪೇಟಾ’ದವರು ಕಾನೂನು ಹೋರಾಟ ಆರಂಭಿಸಿದ ನಂತ್ರ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದೆ.
ಒಂದು ವರ್ಷ ಕಂಬಳ ನಡೆದ್ರೆ, ಮತ್ತೊಂದು ವರ್ಷ ನಡೆಯಲ್ಲ. ಕಳೆದ ವರ್ಷ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಕಂಬಳ ನಡೆದಿತ್ತು. ಆದ್ರೆ ಕೆಲವೊಂದು ಕಂಬಳದಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ ಮುಂದಿಟ್ಟುಕೊಂಡು ಪೇಟಾದವರು ಈ ಬಾರಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಮೂಡಬಿದರೆ, ವಾಮಂಜೂರು, ಬಾರಾಡಿ ಮತ್ತು ಕೂಳೂರಿನಲ್ಲಿ ನಡೆದ ಕಂಬಳದಲ್ಲಿ ನಿಯಮಬಾಹಿರವಾಗಿ ವರ್ತಿಸಲಾಗಿದೆ ಅಂತ ಆರೋಪಿಸಿ ಕಂಬಳಕ್ಕೆ ತಡೆ ತರಲು ಪೇಟಾ ಮುಂದಾಗಿದೆ. ಇದು ಕಂಬಳ ಪ್ರೇಮಿಗಳ ನೋವಿಗೆ ಕಾರಣವಾಗಿದೆ.
ಕಂಬಳ ನಡೆಸಲು ಅನೇಕ ನಿಯಮಾವಳಿಗಳಿವೆ. ಕೋಣಗಳಿಗೆ ಹೊಡೆಯಬಾರ್ದು, ಮೂಗುದಾರ ಹಾಕಬಾರ್ದು, 100 ಮೀಟರ್ಗಿಂತ ಹೆಚ್ಚು ಓಡಿಸಬಾರ್ದು, ಹೆಚ್ಚಿನ ಉಷ್ಣಾಂಶವಿದ್ರೆ ಕಂಬಳ ನಡೆಸಬಾರ್ದು ಅನ್ನೋ ಹತ್ತು ಹಲವು ಕಂಡೀಷನ್ಗಳಿವೆ. ಆದ್ರೆ ಮಾಹಿತಿ ಕೊರತೆಯಿಂದ ಕೋಣಗಳ ಮಾಲೀಕರು ಸಣ್ಣಪುಟ್ಟ ತಪ್ಪು ಮಾಡಿದ್ದಾರೆ. ಇದರ ವಿಡಿಯೋ ಮಾಡಿರೋ ಪೇಟಾ ಸಂಘಟನೆಯವರು ಕಂಬಳಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದ್ದಾರೆ. ಇದ್ರಿಂದ ನವೆಂಬರ್ ಅಂತ್ಯಕ್ಕೆ ಆರಂಭವಾಗಬೇಕಿದ್ದ ಕಂಬಳದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕಂಬಳ ಒಂದು ಆರಾಧನಾ ಕಲೆ. ದೈವಗಳ ಆರಾಧನೆ ಭಾಗವಾಗಿ ಕೋಣಗಳನ್ನ ಓಡಿಸುವುದು ಪದ್ದತಿ. ಕ್ರಮೇಣ ಇದಕ್ಕೆ ಸ್ಪರ್ಧೆಯ ಸ್ವರೂಪ ಬಂದಿದ್ದು, ಕಂಬಳದ ಕಾಲಮಾನ ಮತ್ತು ನಂಬಿಕೆಗಳನ್ನ ಕೋರ್ಟ್ ಮುಂದೆ ನಿರೂಪಿಸುವ ಬಹುದೊಡ್ಡ ಸವಾಲು ಎದುರಾಗಿದೆ.
Published On - 3:51 pm, Wed, 20 November 19
sadhu srinath
ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ!
ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು