AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಫ್​ಐ ಕಾರ್ಯಕರ್ತರಿಗೆ ಮಿತ್ತೂರಿನಲ್ಲಿ ಶಸ್ತ್ರಾಸ್ತ್ರ ತರಬೇತಿ; ಎನ್​ಐಎ ವಿಶೇಷ ನ್ಯಾಯಾಲಯದಿಂದ ಪಿಎಫ್​ಐ ಪ್ರಕರಣ ವರ್ಗಾವಣೆ

ಕಮ್ಯನಿಟಿ ಹಾಲ್​ನಲ್ಲಿ ಪಿಸ್ತೂಲ್ ಹಾಗೂ ಬಂದೂಕುಗಳ ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿ ಅವುಗಳ ಬಳಕೆ ಹೇಗೆ ಎಂಬುದನ್ನು ವಿವರಿಸಲಾಗಿತ್ತು.

ಪಿಎಫ್​ಐ ಕಾರ್ಯಕರ್ತರಿಗೆ ಮಿತ್ತೂರಿನಲ್ಲಿ ಶಸ್ತ್ರಾಸ್ತ್ರ ತರಬೇತಿ; ಎನ್​ಐಎ ವಿಶೇಷ ನ್ಯಾಯಾಲಯದಿಂದ ಪಿಎಫ್​ಐ ಪ್ರಕರಣ ವರ್ಗಾವಣೆ
ಪಿಎಫ್ಐ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 03, 2022 | 3:14 PM

ಮಂಗಳೂರು / ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಸಂಘಟನೆಯ ಆಯ್ದ ಕೆಲ ಕಾರ್ಯಕರ್ತರಿಗೆ ಬಂಟ್ವಾಳ ತಾಲ್ಲೂಕಿನ ಮಿತ್ತೂರಿನಲ್ಲಿ ಬಂದೂಕು ಮತ್ತು ಪಿಸ್ತೂಲ್​ಗಳ ಬಗ್ಗೆ ‘ಓರಲ್ ಟ್ರೇನಿಂಗ್’ ನೀಡಲಾಗಿತ್ತು ಎನ್ನುವ ಸಂಗತಿ ಇದೀಗ ಬಹಿರಂಗಗೊಂಡಿದೆ. ಮಿತ್ತೂರಿನ ಫ್ರೀಡಂ ಕಮ್ಯನಿಟಿ ಹಾಲ್​ನಲ್ಲಿ ಪಿಸ್ತೂಲ್ ಹಾಗೂ ಬಂದೂಕುಗಳ ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿ ಅವುಗಳ ಬಳಕೆ ಹೇಗೆ ಎಂಬುದನ್ನು ವಿವರಿಸಲಾಗಿತ್ತು. ಅಲ್ಲಿ ಬಂದೂಕು ಬಳಕೆಯ ತರಬೇತಿ ಕೊಡುತ್ತಿರಲಿಲ್ಲ. ಮಿತ್ತೂರಿನಲ್ಲಿ ಓರಲ್ ಕ್ಲಾಸ್ ಪಡೆದ ಅಭ್ಯರ್ಥಿಗಳಿಗೆ ಕೇರಳದ ನಿಗೂಢ ಸ್ಥಳದಲ್ಲಿ ಬಂದೂಕು ಬಳಕೆಯ ತರಬೇತಿ ನೀಡಲಾಗಿತ್ತು ಎಂದು ‘ಟಿವಿ9’ಗೆ ಎನ್​ಐಎ ಉನ್ನತ ಮೂಲಗಳು ಹೇಳಿವೆ.

ಸತ್ಯಮಂಗಲ ಅರಣ್ಯದ ಸಂಬಂಧ

ಬಂಧಿತ ಪಿಎಫ್​ಐ ಕಾರ್ಯಕರ್ತರ ವಿಚಾರಣೆ ಪ್ರಗತಿಯಲ್ಲಿದ್ದು, ಈ ವೇಳೆ ಹೊಸದೊಂದು ಸಂಗತಿ ಬೆಳಕಿಗೆ ಬಂದಿದೆ. ಕೇರಳ‌, ಮಂಗಳೂರು ಮತ್ತು ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಪೊಲೀಸರಿಗೆ ಸಿಕ್ಕ ಒಂದು ಫೋಟೊ ತನಿಖೆಯಲ್ಲಿ ಹಲವು ತಿರುವುಗಳಿಗೆ ಕಾರಣವಾಗಿದೆ. ಬಂಧಿತರ ಮೊಬೈಲ್​ನಲ್ಲಿದ್ದ ಫೋಟೊದಲ್ಲಿದ್ದ ಸ್ಥಳದ ಬಗ್ಗೆ ಪೊಲೀಸರು ಹೆಚ್ಚು ಗಮನ ಕೊಟ್ಟಿದ್ದರು. ತನಿಖೆ ವೇಳೆ ಇಬ್ಬರು ಆರೋಪಿಗಳು ಬಾಯ್ಬಿಟ್ಟ ನಂತರ ರಾತ್ರೋರಾತ್ರಿ ಮಹಜರಿಗೆ‌ ಕರೆದೊಯ್ದರು. ಈ ಫೋಟೊದಲ್ಲಿ ಪಿಎಫ್​ಐನ 20 ಮಂದಿ ಕ್ರಿಕೆಟ್ ಆಡಿದ್ದ ವಿವರಗಳಿದ್ದವು. ಆರಂಭದಲ್ಲಿ ಮಂಗಳೂರಿನ ಜಾಗ ಎಂದು ಹೇಳಲಾಗಿತ್ತು, ನಂತರ ಸತ್ಯಮಂಗಲ ಅರಣ್ಯ ಎಂಬುದು ತಿಳಿದುಬಂತು. ಸತ್ಯಮಂಗಲ ಅರಣ್ಯದಲ್ಲಿ ‘ಕೇಡರ್’ ಎಂಬ ಹೆಸರಿನಲ್ಲಿ ಯುವಕರಿಗೆ ವಿಶೇಷ ತರಬೇತಿ ನಡೆಯುತ್ತಿತ್ತು.

ತೀವ್ರಗೊಂಡ ವಿಚಾರಣೆ

ರಿಟ್ರೀವ್ ರಿಪೋರ್ಟ್ ಮುಂದಿಟ್ಟು ವಿಚಾರಣೆ ಮಾಡಿದರೂ ಆರೋಪಿಗಳು ಬಾಯಿಬಿಡುತ್ತಿಲ್ಲ. ಹೇಳಿಕೆಗೆ ಸಹಿಯನ್ನೂ ಹಾಕುತ್ತಿಲ್ಲ. ಇನ್​ಸ್ಪೆಕ್ಟರ್ ದರ್ಜೆಯ ಒಬ್ಬ ಅಧಿಕಾರಿಗೆ ಇಬ್ಬರು ಆರೋಪಿಗಳ ವಿಚಾರಣೆ ನಡೆಸುವ ಹೊಣೆಗಾರಿಕೆ ನೀಡಲಾಗಿದೆ. ಕೆ.ಜೆ.ಹಳ್ಳಿ, ಬೈಯಪ್ಪನಹಳ್ಳಿ, ಗೋವಿಂದಪುರ, ಪುಲಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್, ಜೆ.ಬಿ.ನಗರ, ರಾಮಮೂರ್ತಿ ನಗರ, ಅಮೃತಹಳ್ಳಿ, ಆಡುಗೋಡಿ ಠಾಣೆಯ ಇನ್​ಸ್ಪೆಕ್ಟರ್​ಗಳಿಗೆ ತನಿಖೆಯ ಹೊಣೆ ಒಪ್ಪಿಸಲಾಗಿದೆ.

ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ

ಬೆಂಗಳೂರಿನಲ್ಲಿ 15 ಪಿಎಫ್​ಐ ಮುಖಂಡರ ವಿಚಾರಣೆಯನ್ನು ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಬಂಧಿತ ಪಿಎಫ್ಐ ಕಾರ್ಯಕರ್ತರ ವಿರುದ್ಧ ಯುಪಿಪಿಎ ಕಾಯ್ದೆಯ (UNLAWFUL ACTIVITIES (PREVENTION) ACT – UAPA) ಅನ್ವಯ ಪ್ರಕರಣ ದಾಖಲಿಸಲು ಬೆಂಗಳೂರು ಪೊಲೀಸರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಲು ಸಮ್ಮತಿಸಿತು. ಅಕ್ಟೋಬರ್ 6ಕ್ಕೆ ಎನ್​ಐಎ ನ್ಯಾಯಾಲಯದಲ್ಲಿಯೇ ವಿಚಾರಣೆಗೆ ಆರೋಪಿಗಳನ್ನು ಹಾಜರುಪಡಿಸಬೇಕು ಎಂದು ಎಸಿಎಂಎಂ ನ್ಯಾಯಾಲಯವು ಆದೇಶ ಮಾಡಿದೆ.

ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ