TV9 Kannada Digital Live: ಪಿಎಸ್​ಐ ಸ್ಕ್ಯಾಮ್-ಸರಕಾರದ ಮುಂದೆ ದಾರಿ ಯಾವುದು? ಟಿವಿ9 ಡಿಜಿಟಲ್ ಲೈವ್ ಚರ್ಚೆ

| Updated By: ಸಾಧು ಶ್ರೀನಾಥ್​

Updated on: May 02, 2022 | 6:44 PM

PSI Recruitment Scam: ಪಿಎಸ್ಐ ನೇಮಕ ಕುರಿತಾದ ಸ್ಕ್ಯಾಮ್ ಹೊರಬಂದ ನಂತರ ಸರಕಾರ ಪಿಎಸ್ಐ ಪರೀಕ್ಷೆಯ ಫಲಿತಾಂಶವನ್ನು ರದ್ದುಗೊಳಿಸಿತು. ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ಸರಕಾರದ ಕ್ರಮವನ್ನು ಟೀಕಿಸಿ, ಆಯ್ಕೆಪಟ್ಟಿಯನ್ನು ರದ್ದು ಗೊಳಿಸಬಾರದು ಎಂದು ಹೇಳಿದ್ದಾರೆ. ಇದು ಸರಿಯೇ?

ಇತ್ತೀಚೆಗೆ ನಡೆದಿರುವ ಪೊಲೀಸ್​ ಸಬ್ ಇನ್ಸ್​ ಪೆಕ್ಟರ್​ ನಡೆದಿರುವ ಪರೀಕ್ಷಾ ಅಕ್ರಮ ವ್ಯಾಪಕವಾಗಿದ್ದು (PSI Exam Scandal), ರಾಜಕೀಯ ವಲಯದಲ್ಲಿ ವ್ಯಾಪಕ ಬಿರುಗಾಳಿ ಬೀಸಿದೆ. ಒಂದು ಕಡೆ ನೊಂದ ಅಭ್ಯರ್ಥಿಗಳು ಮತ್ತೊಂದು ಕಡೆ ತಿಂದುಂಡಿರುವ ಅಕ್ರಮ ಆರೋಪಿಗಳು ಹಾಗೂ ರಾಜಕಾರಣಿಗಳ ಮಧ್ಯೆ ಪ್ರಕರಣ ಮರು ಪರೀಕ್ಷೆ ನಡೆಸಿ, ಅರ್ಹ-ನೊಂದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ ಯತ್ನ ನಡೆದಿದೆ (PSI Re Exam). ಆದರೆ ಇದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಅಪಸ್ವರ ಎತ್ತಿದೆ. ಕೆಲವು ಸ್ವಾಗತಿಸಿವೆ.

ಪಿಎಸ್ಐ ನೇಮಕ ಕುರಿತಾದ ಸ್ಕ್ಯಾಮ್ (PSI Recruitment Scam) ಹೊರಬಂದ ನಂತರ ಸರಕಾರ ಪಿಎಸ್ಐ ಪರೀಕ್ಷೆಯ ಫಲಿತಾಂಶವನ್ನು ರದ್ದುಗೊಳಿಸಿತು. ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ಸರಕಾರದ ಕ್ರಮವನ್ನು ಟೀಕಿಸಿ, ಆಯ್ಕೆಪಟ್ಟಿಯನ್ನು ರದ್ದು ಗೊಳಿಸಬಾರದು ಎಂದು ಹೇಳಿದ್ದಾರೆ. ಇದು ಸರಿಯೇ? ಸರಕಾರದ ಮುಂದೆ ಬೇರೆ ದಾರಿ ಇದೆಯೇ? ಈ ವಿಚಾರವನ್ನು ಡಿಜಿಟಲ್ ಲೈವ್ ನಲ್ಲಿ ಚರ್ಚಿಸೋಣ. ಆ್ಯಂಕರ್​ ಹರಿಪ್ರಸಾದ್​ ಈ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV9 Kannada Digital Live)

ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. 

ಇದೂ ವೀಕ್ಷಿಸಿ:
ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ಸಂಪುಟ ಪ್ರಸವ ನಿಜವಾ, ಸುಳ್ಳಾ!? -ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಇದೂ ವೀಕ್ಷಿಸಿ:
ಸಚಿವ ಕೆಎಸ್ ಈಶ್ವರಪ್ಪ ನಿರ್ಗಮನ, ರಾಜ್ಯ ಬಿಜೆಪಿಯಲ್ಲಿ ಮುಂದಿನ ಪರ್ವ ಏನು? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

Published On - 3:39 pm, Mon, 2 May 22

Follow us on