AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೇಟ್ ಸಿನಿಮಾ ಶೈಲಿಯಂತೆ ಗೂಡ್ಸ್ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುವುದು ಅಂದಿನಿಂದಲೂ ನಡೆಯುತ್ತಾ ಬಂದಿದೆಯಂತೆ – ಆರ್​ಟಿಪಿಎಸ್​ ಅಧಿಕಾರಿ ಮಾತು

ಅಲ್ಲಿ ಥೇಟ್ ಸಿನಿ ಸ್ಟೈಲ್​​ನಲ್ಲಿ ಅಕ್ರಮ ನಡೀತಿರೊ ಸುದ್ದಿ ಕೇಳಿ ಅಧಿಕಾರಿ ವರ್ಗವೇ ಬೆಚ್ಚಿ ಬಿದ್ದಿದೆ. ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡೊ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿರೊ ಆ ಚಿನ್ನದಂತಹ ವಸ್ತುವನ್ನೇ ಅಕ್ರಮ ಸಾಗಾಟ ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು.. ಅದು ಆರ್​ಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ.. ಹಾಗೆಯೇ ಅದರ ಜೊತೆಗೇ ಅಲ್ಲಿರೋದು ವೈಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ.

ಥೇಟ್ ಸಿನಿಮಾ ಶೈಲಿಯಂತೆ ಗೂಡ್ಸ್ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುವುದು ಅಂದಿನಿಂದಲೂ ನಡೆಯುತ್ತಾ ಬಂದಿದೆಯಂತೆ - ಆರ್​ಟಿಪಿಎಸ್​ ಅಧಿಕಾರಿ ಮಾತು
ಥೇಟ್ ಸಿನಿಮಾದಂತೆ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುತ್ತಾರೆ
ಭೀಮೇಶ್​​ ಪೂಜಾರ್
| Edited By: ಸಾಧು ಶ್ರೀನಾಥ್​|

Updated on:Nov 22, 2023 | 10:56 AM

Share

ಅಲ್ಲಿ ಥೇಟ್ ಸಿನಿ ಸ್ಟೈಲ್​​ನಲ್ಲಿ ಅಕ್ರಮ ನಡೀತಿರೊ ಸುದ್ದಿ ಕೇಳಿ ಅಧಿಕಾರಿ ವರ್ಗವೇ ಬೆಚ್ಚಿ ಬಿದ್ದಿದೆ. ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡೊ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿರೊ ಆ ಚಿನ್ನದಂತಹ ವಸ್ತುವನ್ನೇ ಅಕ್ರಮ ಸಾಗಾಟ (coal theft) ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು.. ಅದು ಆರ್​ಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ.. ಹಾಗೆಯೇ ಅದರ ಜೊತೆಗೇ ಅಲ್ಲಿರೋದು ವೈಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ. ಇವೆರಡು ಇರೋದು ರಾಯಚೂರು ತಾಲ್ಲೂಕಿನ ಶಕ್ತಿ ನಗರದ ಬಳಿ (Raichur Thermal Power Station -RTPS). ರಾಜ್ಯಕ್ಕೇ ಬೇಡಿಕೆ ಇರೊ ಬಹುತೇಕ ವಿದ್ಯುತ್ ಅನ್ನ ಇವೆರಡೇ ಕೇಂದ್ರಗಳು ಪೂರೈಸುತ್ವೆ. ಆರ್​ಟಿಪಿಎಸ್​ ನಲ್ಲಿ 8 ವಿದ್ಯುತ್ ಉತ್ಪಾದನಾ ಘಟಕಗಳಿದ್ರೆ, ವೈಟಿಪಿಎಸ್​ನಲ್ಲಿ ಎರಡು ಘಟಕಗಳಿವೆ..

ಆರ್​ಟಿಪಿಎಸ್ ಗರಿಷ್ಠ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸೊ ಸಾಮರ್ಥ್ಯ ಹೊಂದಿದೆ. ಆ ಪೈಕಿ ಆರ್​ಟಿಪಿಎಸ್​ ಸದ್ಯ 1039 ಮೆ. ವ್ಯಾ. ವಿದ್ಯುತ್ ಉತ್ಪಾದಿಸುತ್ತಿದೆ. ವೈಟಿಪಿಎಸ್​​ನಲ್ಲಿ 1600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಆದ್ರೀಗ ಬರೀ 552 ಮೆ.ವ್ಯಾ. ವಿದ್ಯುತ್ ಉತ್ಪಾದಿಸಿದೆ. ಈ ಎರಡು ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಹುಮುಖ್ಯವಾಗಿ ಬೇಕಿರೋದು ಕಲ್ಲಿದ್ದಲು. ದೇಶದ ವಿವಿಧೆಡೆಯಿಂದ ಗೂಡ್ಸ್​ ರೈಲುಗಳ ಮೂಲಕ ಈ ಎರಡು ಕೇಂದ್ರಗಳಿಗೆ ನೇರವಾಗಿ ಕಲ್ಲಿದ್ದಲನ್ನ ಪೂರೈಸಲಾಗುತ್ತೆ.

ಪ್ರಸ್ತುತ ಆರ್ ಟಿಪಿಎಸ್ ನಲ್ಲಿ 1.77 ಲಕ್ಷ ಮೆಟ್ರಿನ್ ಟನ್ ಕಲ್ಲಿದ್ದಲು ಹಾಗೂ ವೈಟಪಿಎಸ್​ನಲ್ಲಿ1.67 ಲಕ್ಷ ಮೆಟ್ರಿನ್​ ಟನ್ ಕಲ್ಲಿದ್ದಿಲು ಸ್ಟಾಕ್ ಇದೆ. ಆಗಾಗ ಈ ಕೇಂದ್ರಗಳಲ್ಲಿ ಕಲ್ಲಿದ್ದಿಲು ಕೊರತೆ ಎದುರಾಗುತ್ತಲೇ ಇರತ್ತೆ. ಸರ್ಕಾರ ಕೂಡ ಕಲ್ಲಿದ್ದಿಲು ಪೂರೈಕೆ ಬಗ್ಗೆ ತಲೆ ಕೆಡಿಸಿಕೊಳ್ತಿದೆ. ಆದರೆ ಇತ್ತ, ಆರ್​ಟಪಿಎಸ್​ ಹಾಗೂ ವೈಟಿಪಿಎಸ್​ಗೆ ಸೇರಿದ ಕಲ್ಲಿದ್ದಿಲು ಹಂತಹಂತವಾಗಿ ಅಕ್ರಮ ಸಾಗಾಟವಾಗ್ತಿದೆ ಅನ್ನೊ ಗಂಭೀರ ಆರೋಪ ಕೇಳಿ ಬಂದಿದೆ. ಈ ದಂಧೆ ವರ್ಷಗಳಿಂದ ನಡೆಯುತ್ತಲೇ ಇದ್ದು ಅಧಿಕಾರಿಗಳ ವರ್ಗ ಮೌನವಹಿಸಿದೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೌದು..ಗೂಡ್ಸ್ ರೈಲುಗಳ ಮೂಲಕ ಈ ಕೇಂದ್ರಗಳಿಗೆ ಕಲ್ಲಿದ್ದಲು ಸರಬರಾಜು ಆದ ಬಳಿಕ ಆ ಗೂಡ್ಸ್ ಕ್ಯಾರಿಯರ್​ಗಳನ್ನ ಸ್ವಚ್ಛಗೊಳಿಸಿ ನಿರ್ವಹಣೆ ಮಾಡಲಾಗುತ್ತೆ..ಆ ನಿರ್ವಹಣೆಯನ್ನ ಖಾಸಗಿ ಗುತ್ತಿಗೆದಾರ ಕಂಪೆನಿ ಮಾಡತ್ತೆ..ಹೀಗೆ ನಿರ್ವಹಣೆ ಹೆಸರಿನಲ್ಲಿ ಗೂಡ್ಸ್​ ಕ್ಯಾರಿಯರ್​ಗಳಲ್ಲಿ ಉಳಿದಿರೊ ಒಳ್ಳೆ ಕ್ವಾಲಿಟಿ ಕಲ್ಲಿದ್ದಿಲನ್ನೇ ಅಕ್ರಮವಾಗಿ ಸಾಗಾಟ ಮಾಡಲಾಗ್ತಿದೆಯಂತೆ.

ಆರ್​ಟಿಪಿಎಸ್​ ಹಾಗೂ ವೈಟಿಪಿಎಸ್​​ಗೆ ಕಲ್ಲಿದ್ದಲನ್ನ ನೇರವಾಗಿ ಆಯಾ ಕೇಂದ್ರಗಳೊಳಗೆ ಹೋಗಿ ಸರಬರಾಜು ಮಾಡಲಾಗುತ್ತೆ..ನಂತರ ಹೊರಗಡೆ ವಿವಿಧ ರೈಲ್ವೆ ನಿಲ್ದಾಣಗಳ ಬಳಿ ಈ ಗೂಡ್ಸ್ ರೈಲುಗಳನ್ನ ಸ್ವಚ್ಛಗೊಳಿಸಲಾಗುತ್ತೆ..ಆದ್ರೆ ಹೀಗೆ ಸ್ವಚ್ಛ ಮಾಡೋ ವೇಳೆ ಗೂಡ್ಸ್ ಕ್ಯಾರಿಯರ್​ನಲ್ಲಿರೊ ಕಲ್ಲಿದ್ದಿಲನ್ನು ತೆಗೆದು ರೈಲ್ವೆ ನಿಲ್ಣಾಣದ ಬಳಿ ವಿವಿಧ ಕಡೆ ಡಂಪ್​ ಮಾಡಲಾಗುತ್ತೆ.

ನಂತರ ಅವುಗಳನ್ನ ಟ್ರಾಕ್ಟರ್ ಹಾಗೂ ಟಿಪ್ಪರ್​ಗಳ ಮೂಲಕ ಸ್ಥಳೀಯ ಖಾಸಗಿ ಕಂಪೆನಿಗಳಿಗೆ ಅಕ್ರಮ ಸಾಗಾಟ ಮಾಡಲಾಗ್ತಿದೆ ಅನ್ನೋದು ಆರೋಪದ ತಿರುಳು. ಈ ಬಗ್ಗೆ ಟಿವಿ9 ತಂಡ ಘಟನಾ ಸ್ಥಳಕ್ಕೆ ತೆರಳಿದ ಬಳಿಕ ಟ್ರಾಕ್ಟರ್​​ ಚಾಲಕರು ಟ್ರಾಕ್ಟರ್​ಗಳ ಮೂಲಕ ಎಸ್ಕೇಪ್ ಆದ್ರು. ಈ ಆರೋಪದ ಬಗ್ಗೆ ಆರ್​ಟಿಪಿಎಸ್​​ನ ಅಧಿಕಾರಿಯೊಬ್ರು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ಗೂಡ್ಸ್ ರೈಲು ನಿಂತಾಗ ಸ್ಥಳೀಯರು ಹೀಗೆ ಕಳ್ಳತನ ಮಾಡೋದು ನಡೆಯುತ್ತಲೇ ಇದೆ. ಆದ್ರೆ ಗುತ್ತಿಗೆದಾರರ ಕಡೆಯಿಂದ ಸಮಸ್ಯೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಆ ಬಗ್ಗೆ ಮಾಹಿತಿ ಪಡೀತಿವಿ ಅಂತ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.

ಇತ್ತ ಘಟನೆ ಬೆಳಕಿಗೆ ಬರ್ತಿದ್ದಂತೆ ಆರ್​ಟಪಿಎಸ್​ನ ಅಧಿಕಾರಿಗಳ ತಂಡ ಯರಮರಸ್ ರೈಲು ನಿಲ್ದಾಣದ ಸುತ್ತ ಪರಿಶೀಲನೆ ನಡೆಸಿದ್ರು..ಅದೆನೆ ಇರ್ಲಿ ಹೀಗೆ ಅವ್ಯಾಹತವಾಗಿ ರಾಜಾರೋಷವಾಗಿ ಕಲ್ಲಿದ್ದಿಲನ್ನ ಸ್ಟಾಕ್ ಮಾಡಿಕೊಂಡು ಅಕ್ರಮ ಸಾಗಾಟ ಮಾಡ್ತಿರೋದರ ಹಿಂದೆ ದೊಡ್ಡ ಜಾಲವೇ ಇರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಅಥವಾ ಇಂಧನ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಜರುಗಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Wed, 22 November 23

Follow Us
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು