AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೇಟ್ ಸಿನಿಮಾ ಶೈಲಿಯಂತೆ ಗೂಡ್ಸ್ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುವುದು ಅಂದಿನಿಂದಲೂ ನಡೆಯುತ್ತಾ ಬಂದಿದೆಯಂತೆ – ಆರ್​ಟಿಪಿಎಸ್​ ಅಧಿಕಾರಿ ಮಾತು

ಅಲ್ಲಿ ಥೇಟ್ ಸಿನಿ ಸ್ಟೈಲ್​​ನಲ್ಲಿ ಅಕ್ರಮ ನಡೀತಿರೊ ಸುದ್ದಿ ಕೇಳಿ ಅಧಿಕಾರಿ ವರ್ಗವೇ ಬೆಚ್ಚಿ ಬಿದ್ದಿದೆ. ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡೊ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿರೊ ಆ ಚಿನ್ನದಂತಹ ವಸ್ತುವನ್ನೇ ಅಕ್ರಮ ಸಾಗಾಟ ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು.. ಅದು ಆರ್​ಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ.. ಹಾಗೆಯೇ ಅದರ ಜೊತೆಗೇ ಅಲ್ಲಿರೋದು ವೈಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ.

ಥೇಟ್ ಸಿನಿಮಾ ಶೈಲಿಯಂತೆ ಗೂಡ್ಸ್ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುವುದು ಅಂದಿನಿಂದಲೂ ನಡೆಯುತ್ತಾ ಬಂದಿದೆಯಂತೆ - ಆರ್​ಟಿಪಿಎಸ್​ ಅಧಿಕಾರಿ ಮಾತು
ಥೇಟ್ ಸಿನಿಮಾದಂತೆ ರೈಲು ನಿಂತಾಗ ಚಿನ್ನದಂತಹ ಕಲ್ಲಿದ್ದಲು ಕದಿಯುತ್ತಾರೆ
ಭೀಮೇಶ್​​ ಪೂಜಾರ್
| Edited By: ಸಾಧು ಶ್ರೀನಾಥ್​|

Updated on:Nov 22, 2023 | 10:56 AM

Share

ಅಲ್ಲಿ ಥೇಟ್ ಸಿನಿ ಸ್ಟೈಲ್​​ನಲ್ಲಿ ಅಕ್ರಮ ನಡೀತಿರೊ ಸುದ್ದಿ ಕೇಳಿ ಅಧಿಕಾರಿ ವರ್ಗವೇ ಬೆಚ್ಚಿ ಬಿದ್ದಿದೆ. ಇಡೀ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡೊ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿರೊ ಆ ಚಿನ್ನದಂತಹ ವಸ್ತುವನ್ನೇ ಅಕ್ರಮ ಸಾಗಾಟ (coal theft) ಮಾಡಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು.. ಅದು ಆರ್​ಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ.. ಹಾಗೆಯೇ ಅದರ ಜೊತೆಗೇ ಅಲ್ಲಿರೋದು ವೈಟಿಪಿಎಸ್​ ವಿದ್ಯುತ್ ಉತ್ಪಾದನಾ ಕೇಂದ್ರ. ಇವೆರಡು ಇರೋದು ರಾಯಚೂರು ತಾಲ್ಲೂಕಿನ ಶಕ್ತಿ ನಗರದ ಬಳಿ (Raichur Thermal Power Station -RTPS). ರಾಜ್ಯಕ್ಕೇ ಬೇಡಿಕೆ ಇರೊ ಬಹುತೇಕ ವಿದ್ಯುತ್ ಅನ್ನ ಇವೆರಡೇ ಕೇಂದ್ರಗಳು ಪೂರೈಸುತ್ವೆ. ಆರ್​ಟಿಪಿಎಸ್​ ನಲ್ಲಿ 8 ವಿದ್ಯುತ್ ಉತ್ಪಾದನಾ ಘಟಕಗಳಿದ್ರೆ, ವೈಟಿಪಿಎಸ್​ನಲ್ಲಿ ಎರಡು ಘಟಕಗಳಿವೆ..

ಆರ್​ಟಿಪಿಎಸ್ ಗರಿಷ್ಠ 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸೊ ಸಾಮರ್ಥ್ಯ ಹೊಂದಿದೆ. ಆ ಪೈಕಿ ಆರ್​ಟಿಪಿಎಸ್​ ಸದ್ಯ 1039 ಮೆ. ವ್ಯಾ. ವಿದ್ಯುತ್ ಉತ್ಪಾದಿಸುತ್ತಿದೆ. ವೈಟಿಪಿಎಸ್​​ನಲ್ಲಿ 1600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಆದ್ರೀಗ ಬರೀ 552 ಮೆ.ವ್ಯಾ. ವಿದ್ಯುತ್ ಉತ್ಪಾದಿಸಿದೆ. ಈ ಎರಡು ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಹುಮುಖ್ಯವಾಗಿ ಬೇಕಿರೋದು ಕಲ್ಲಿದ್ದಲು. ದೇಶದ ವಿವಿಧೆಡೆಯಿಂದ ಗೂಡ್ಸ್​ ರೈಲುಗಳ ಮೂಲಕ ಈ ಎರಡು ಕೇಂದ್ರಗಳಿಗೆ ನೇರವಾಗಿ ಕಲ್ಲಿದ್ದಲನ್ನ ಪೂರೈಸಲಾಗುತ್ತೆ.

ಪ್ರಸ್ತುತ ಆರ್ ಟಿಪಿಎಸ್ ನಲ್ಲಿ 1.77 ಲಕ್ಷ ಮೆಟ್ರಿನ್ ಟನ್ ಕಲ್ಲಿದ್ದಲು ಹಾಗೂ ವೈಟಪಿಎಸ್​ನಲ್ಲಿ1.67 ಲಕ್ಷ ಮೆಟ್ರಿನ್​ ಟನ್ ಕಲ್ಲಿದ್ದಿಲು ಸ್ಟಾಕ್ ಇದೆ. ಆಗಾಗ ಈ ಕೇಂದ್ರಗಳಲ್ಲಿ ಕಲ್ಲಿದ್ದಿಲು ಕೊರತೆ ಎದುರಾಗುತ್ತಲೇ ಇರತ್ತೆ. ಸರ್ಕಾರ ಕೂಡ ಕಲ್ಲಿದ್ದಿಲು ಪೂರೈಕೆ ಬಗ್ಗೆ ತಲೆ ಕೆಡಿಸಿಕೊಳ್ತಿದೆ. ಆದರೆ ಇತ್ತ, ಆರ್​ಟಪಿಎಸ್​ ಹಾಗೂ ವೈಟಿಪಿಎಸ್​ಗೆ ಸೇರಿದ ಕಲ್ಲಿದ್ದಿಲು ಹಂತಹಂತವಾಗಿ ಅಕ್ರಮ ಸಾಗಾಟವಾಗ್ತಿದೆ ಅನ್ನೊ ಗಂಭೀರ ಆರೋಪ ಕೇಳಿ ಬಂದಿದೆ. ಈ ದಂಧೆ ವರ್ಷಗಳಿಂದ ನಡೆಯುತ್ತಲೇ ಇದ್ದು ಅಧಿಕಾರಿಗಳ ವರ್ಗ ಮೌನವಹಿಸಿದೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೌದು..ಗೂಡ್ಸ್ ರೈಲುಗಳ ಮೂಲಕ ಈ ಕೇಂದ್ರಗಳಿಗೆ ಕಲ್ಲಿದ್ದಲು ಸರಬರಾಜು ಆದ ಬಳಿಕ ಆ ಗೂಡ್ಸ್ ಕ್ಯಾರಿಯರ್​ಗಳನ್ನ ಸ್ವಚ್ಛಗೊಳಿಸಿ ನಿರ್ವಹಣೆ ಮಾಡಲಾಗುತ್ತೆ..ಆ ನಿರ್ವಹಣೆಯನ್ನ ಖಾಸಗಿ ಗುತ್ತಿಗೆದಾರ ಕಂಪೆನಿ ಮಾಡತ್ತೆ..ಹೀಗೆ ನಿರ್ವಹಣೆ ಹೆಸರಿನಲ್ಲಿ ಗೂಡ್ಸ್​ ಕ್ಯಾರಿಯರ್​ಗಳಲ್ಲಿ ಉಳಿದಿರೊ ಒಳ್ಳೆ ಕ್ವಾಲಿಟಿ ಕಲ್ಲಿದ್ದಿಲನ್ನೇ ಅಕ್ರಮವಾಗಿ ಸಾಗಾಟ ಮಾಡಲಾಗ್ತಿದೆಯಂತೆ.

ಆರ್​ಟಿಪಿಎಸ್​ ಹಾಗೂ ವೈಟಿಪಿಎಸ್​​ಗೆ ಕಲ್ಲಿದ್ದಲನ್ನ ನೇರವಾಗಿ ಆಯಾ ಕೇಂದ್ರಗಳೊಳಗೆ ಹೋಗಿ ಸರಬರಾಜು ಮಾಡಲಾಗುತ್ತೆ..ನಂತರ ಹೊರಗಡೆ ವಿವಿಧ ರೈಲ್ವೆ ನಿಲ್ದಾಣಗಳ ಬಳಿ ಈ ಗೂಡ್ಸ್ ರೈಲುಗಳನ್ನ ಸ್ವಚ್ಛಗೊಳಿಸಲಾಗುತ್ತೆ..ಆದ್ರೆ ಹೀಗೆ ಸ್ವಚ್ಛ ಮಾಡೋ ವೇಳೆ ಗೂಡ್ಸ್ ಕ್ಯಾರಿಯರ್​ನಲ್ಲಿರೊ ಕಲ್ಲಿದ್ದಿಲನ್ನು ತೆಗೆದು ರೈಲ್ವೆ ನಿಲ್ಣಾಣದ ಬಳಿ ವಿವಿಧ ಕಡೆ ಡಂಪ್​ ಮಾಡಲಾಗುತ್ತೆ.

ನಂತರ ಅವುಗಳನ್ನ ಟ್ರಾಕ್ಟರ್ ಹಾಗೂ ಟಿಪ್ಪರ್​ಗಳ ಮೂಲಕ ಸ್ಥಳೀಯ ಖಾಸಗಿ ಕಂಪೆನಿಗಳಿಗೆ ಅಕ್ರಮ ಸಾಗಾಟ ಮಾಡಲಾಗ್ತಿದೆ ಅನ್ನೋದು ಆರೋಪದ ತಿರುಳು. ಈ ಬಗ್ಗೆ ಟಿವಿ9 ತಂಡ ಘಟನಾ ಸ್ಥಳಕ್ಕೆ ತೆರಳಿದ ಬಳಿಕ ಟ್ರಾಕ್ಟರ್​​ ಚಾಲಕರು ಟ್ರಾಕ್ಟರ್​ಗಳ ಮೂಲಕ ಎಸ್ಕೇಪ್ ಆದ್ರು. ಈ ಆರೋಪದ ಬಗ್ಗೆ ಆರ್​ಟಿಪಿಎಸ್​​ನ ಅಧಿಕಾರಿಯೊಬ್ರು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ಗೂಡ್ಸ್ ರೈಲು ನಿಂತಾಗ ಸ್ಥಳೀಯರು ಹೀಗೆ ಕಳ್ಳತನ ಮಾಡೋದು ನಡೆಯುತ್ತಲೇ ಇದೆ. ಆದ್ರೆ ಗುತ್ತಿಗೆದಾರರ ಕಡೆಯಿಂದ ಸಮಸ್ಯೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಆ ಬಗ್ಗೆ ಮಾಹಿತಿ ಪಡೀತಿವಿ ಅಂತ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.

ಇತ್ತ ಘಟನೆ ಬೆಳಕಿಗೆ ಬರ್ತಿದ್ದಂತೆ ಆರ್​ಟಪಿಎಸ್​ನ ಅಧಿಕಾರಿಗಳ ತಂಡ ಯರಮರಸ್ ರೈಲು ನಿಲ್ದಾಣದ ಸುತ್ತ ಪರಿಶೀಲನೆ ನಡೆಸಿದ್ರು..ಅದೆನೆ ಇರ್ಲಿ ಹೀಗೆ ಅವ್ಯಾಹತವಾಗಿ ರಾಜಾರೋಷವಾಗಿ ಕಲ್ಲಿದ್ದಿಲನ್ನ ಸ್ಟಾಕ್ ಮಾಡಿಕೊಂಡು ಅಕ್ರಮ ಸಾಗಾಟ ಮಾಡ್ತಿರೋದರ ಹಿಂದೆ ದೊಡ್ಡ ಜಾಲವೇ ಇರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರ ಅಥವಾ ಇಂಧನ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಜರುಗಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 am, Wed, 22 November 23

Follow Us
Bhemesh Poojar
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ