ರಾಯಚೂರು: ಅಡ್ಡಬಂದ ಕುದುರೆಗೆ ಬೈಕ್​ ಡಿಕ್ಕಿ, ಸ್ಥಳದಲ್ಲೇ ಗಾಯಕ ಮೃತ್ಯು

ತಡ ರಾತ್ರಿ ಕಾರ್ಯಕ್ರಮವೊಂದನ್ನ ಮುಗಿಸಿಕೊಂಡು ಬಾಗೂರು ಗ್ರಾಮಕ್ಕೆ ಹೊರಟಿದ್ದ ವೇಳೆ ಜಾಲಹಳ್ಳಿ ರಸ್ತೆಗಿಳಿದಿದ್ದ ಕುದುರೆಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಅಪಘಾತ ಸಂಭವಿಸಿದೆ. ಬೈಕ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಗಾಯಕ ರಾಜು ಮೃತಪಟ್ಟಿದ್ದಾತೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು: ಅಡ್ಡಬಂದ ಕುದುರೆಗೆ  ಬೈಕ್​ ಡಿಕ್ಕಿ, ಸ್ಥಳದಲ್ಲೇ ಗಾಯಕ ಮೃತ್ಯು
ಳೀಯ ಗಾಯಕ ಹಾಗೂ ಮಿಮಿಕ್ರಿ ಆರ್ಟಿಸ್ಟ್ ರಾಜು ಬಾಗೂರು
Follow us
| Updated By: ಆಯೇಷಾ ಬಾನು

Updated on: Sep 25, 2023 | 11:38 AM

ರಾಯಚೂರು, ಸೆ.25: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸುತ್ತ ಕುದುರೆಗಳು, ಬಿಡಾಡಿ ದನಗಳು ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿದ್ದು ಇದರಿಂದ ಅಪಘಾತ ಸಂಭವಿಸಿ ವ್ಯಕ್ತಿ ಮೃತಪಟ್ಟಿದ್ದಾರೆ (Accident Death). ನಿನ್ನೆ ತಡ ರಾತ್ರಿ ರಸ್ತೆಗಿಳಿದಿದ್ದ ಕುದುರೆಗೆ ಡಿಕ್ಕಿ ಹೊಡೆದು ಸ್ಥಳೀಯ ಗಾಯಕ ಹಾಗೂ ಮಿಮಿಕ್ರಿ ಆರ್ಟಿಸ್ಟ್ ರಾಜು ಬಾಗೂರು(44) ಮೃತ ಮೃತಪಟ್ಟಿದ್ದಾರೆ.

ನಿನ್ನೆ ತಡ ರಾತ್ರಿ ಕಾರ್ಯಕ್ರಮವೊಂದನ್ನ ಮುಗಿಸಿಕೊಂಡು ಬಾಗೂರು ಗ್ರಾಮಕ್ಕೆ ಹೊರಟಿದ್ದ ವೇಳೆ ಜಾಲಹಳ್ಳಿ ರಸ್ತೆಗಿಳಿದಿದ್ದ ಕುದುರೆಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಅಪಘಾತ ಸಂಭವಿಸಿದೆ. ಬೈಕ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಗಾಯಕ ರಾಜು ಮೃತಪಟ್ಟಿದ್ದಾತೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಆಟೋ ನಡುವೆ ಅಪಘಾತ; ಆಟೋ ಚಾಲಕ ಸಾವು

ಇನ್ನು ಮತ್ತೊಂದೆಡೆ ಮೈಸೂರಿನಲ್ಲಿ ಕಾರು, ಆಟೋ ನಡುವೆ ಅಪಘಾತ ಸಂಭವಿಸಿದ್ದು ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಣಸೂರು ನಗರದ ಬೈಪಾಸ್‌ನಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ನಗರದ ಕಲ್ಕುಣಿಕೆ ನಿವಾಸಿ ಶ್ರೀನಿವಾಸ್(55) ಮೃತಪಟ್ಟಿದ್ದಾರೆ. ಹಾಗೂ ಆಟೋದಲ್ಲಿದ್ದ ಮಂಗಳಮುಖಿಯರಾದ ಲಕ್ಷ್ಮಿ ಹಾಗೂ ಎಂಜೆಲ್‌ಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಣಸೂರು ತಹಶೀಲ್ದಾರ್ ಕಚೇರಿ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಐದು ಜನ ಸಾವು

ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯ ಕೊಲೆ

ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಶಾರದನಗರದಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಗಣೇಶ್ ನಾಯ್ಕ್ ಕೊಲೆಯಾದ ದುರ್ದೈವಿ.  ಆಸ್ತಿ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದಿದ್ದು ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಗಣೇಶ್ ನಾಯ್ಕ್​ನನ್ನು ಕೊಲೆ ಮಾಡಲಾಗಿದೆ. ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ