ರಾಮನಗರ: ಸರ್ಕಾರಿ ಸಂಸ್ಥೆಯ ಬಡಾವಣೆಯ ನಿವೇಶನಕ್ಕೆ ಸಿಗುತ್ತಿಲ್ಲ ಇ-ಖಾತೆ: ಕಣ್ವ ಬಡಾವಣೆ ನಿವೇಶನದಾರರು ಅತಂತ್ರ

ಸಾಮಾನ್ಯವಾಗಿ ಬಿಲ್ಡರ್​ಗಳು, ರಿಯಲ್ ಎಸ್ಟೇಟ್ ದಂಧೆಕೋರರು ನಿರ್ಮಿಸುವ ಬಡಾವಣೆಯಲ್ಲಿ ನಿವೇಶನ ಖರೀದಿಸಿದ ಗ್ರಾಹಕರು ಸಮಸ್ಯೆಗೆ ಸಿಲುಕುವುದು ಸಾಮಾನ್ಯ. ಆದರೆ ನಗರಾಭಿವೃದ್ದಿ ಪ್ರಾಧಿಕಾರ ನಿರ್ಮಿಸಿದ ಬಡಾವಣೆಯ ನಿವೇಶನದಾರರು, ತಮ್ಮ ಜಾಗದಲ್ಲಿ ಮನೆಯನ್ನು ಕಟ್ಟಿಕೊಳ್ಳಲಾಗದೇ, ಇತ್ತ ನಿವೇಶನವನ್ನು ಮಾರಾಟ ಮಾಡಲಾಗದೇ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.

ರಾಮನಗರ: ಸರ್ಕಾರಿ ಸಂಸ್ಥೆಯ ಬಡಾವಣೆಯ ನಿವೇಶನಕ್ಕೆ ಸಿಗುತ್ತಿಲ್ಲ ಇ-ಖಾತೆ: ಕಣ್ವ ಬಡಾವಣೆ ನಿವೇಶನದಾರರು ಅತಂತ್ರ
ಹಾರಿಕೆ ಉತ್ತರ ನೀಡುತ್ತಿರುವ ರಾಮನಗರ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ
Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2023 | 2:45 PM

ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಪ್ರಾಧಿಕಾರದ ವತಿಯಿಂದ 2000ನೇ ಸಾಲಿನಲ್ಲಿ ಕಣ್ವ ಬಡಾವಣೆಯನ್ನ ನಿರ್ಮಾಣ ಮಾಡಿ ಮಾರಾಟ ಮಾಡಲಾಗಿದೆ. ಸುಮಾರು 989 ನಿವೇಶನಗಳಲ್ಲಿ 880 ಮಂದಿಗೆ 2011ರಲ್ಲಿ ಹಂಚಿಕೆ ಮಾಡಲಾಗಿದೆ. ಆದರೆ ಪ್ರಾಧಿಕಾರ ಹಂಚಿಕೆ ಮಾಡಿ ಯಡವಟ್ಟು ಮಾಡಿದ್ದು, ಬಡಾವಣೆಯ ನಿವೇಶನದಾರರಿಗೆ ಸ್ಥಳೀಯ ಸಂಸ್ತೆಯಿಂದ ಇ ಖಾತೆ ಸಿಗುತ್ತಿಲ್ಲ. ಅಲ್ಲದೆ ಖಾತೆ ಇಲ್ಲದ ಕಾರಣ ಮಾರಾಟ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಇನ್ನು ನಿವೇಶನದಾರರಿಗೆ ಖಾತೆ ಆಗದೇ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಒಂದು ಕಡೆ ಆದರೆ ಮತ್ತೊಂದು ಕಡೆ ಮೂಲಭೂತ ಸೌಕರ್ಯಗಳು ಲೇಔಟ್​ಗೆ ಇಲ್ಲದಂತೆ ಆಗಿದೆ. ಯುಜಿಡಿ, ಚರಂಡಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯವನ್ನು ಕೂಡ ಒದಗಿಸಿಲ್ಲ. ಹೀಗಾಗಿ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದರಿಂದ ಬಡಾವಣೆ ಹಾಳುಕೊಂಪೆಯಾಗಿ ಮಾರ್ಪಟ್ಟಿದೆ. ಈ ಕುರಿತು ಸಾಕಷ್ಟು ಬಾರಿ ನಿವೇಶನದಾರರು ಮನವಿ ಮಾಡಿದ್ರು ಕೂಡ ಸಂಬಂಧಪಟ್ಟವರು ಯಾರು ಕೂಡ ತಲೆ ಕೆಡಿಸಿಕೊಂಡಿಲ್ಲ. ಇನ್ನು ಈ ಬಗ್ಗೆ ರಾಮನಗರ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನ ಕೇಳಿದ್ರೆ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ:ರಾಮನಗರ: ಅಂತರ್ ಜಿಲ್ಲಾ ಮನೆ, ಸರಗಳ್ಳರ ಬಂಧನ; 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

ಒಟ್ಟಾರೆ ಲಕ್ಷಾಂತರ ರೂ. ಕಟ್ಟಿ ನಿವೇಶನ ಖರೀದಿಸಿದ ಜನರಿಗೆ ಮೂಲಸೌಕರ್ಯ ಹಾಗೂ ಇ ಖಾತೆ ಸಿಗದೇ ಪರದಾಟ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಲಕ್ಷ್ಯವಹಿಸಿ ಜನರ ಸಮಸ್ಯೆಯನ್ನ ಬಗೆಹರಿಸಬೇಕಾಗಿದೆ.

ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ