AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ; ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ

ರಂಗಮಾಧ್ಯಮ ‌ಕಲಾತಂಡ ಹಾಗೂ ‌ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ‌ನಿರ್ಮಿಸಿ ಅಭಿನಯಿಸಿದ್ದಾರೆ. ಕಳೆದ ವರ್ಷ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಎಲ್ಲಾ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ ಯುದ್ಧ ಭಾರತ ನಾಟಕವನ್ನು ಪ್ರದರ್ಶಿಸಿದ್ದರು.

ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ; ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ
ಶೋಭಾ ರಂಜೋಳಕರ್
Follow us
preethi shettigar
|

Updated on: May 17, 2021 | 9:03 AM

ಕಲಬುರಗಿ: ಹಿರಿಯ ರಂಗಕಲಾವಿದೆ, ರಂಗ ನಿರ್ದೇಶಕಿ ಹಾಗೂ ಚಿತ್ರನಟಿ ಶೋಭಾ ರಂಜೋಳಕರ್ (67) ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ತೆಲಂಗಾಣದ ಕೋಡಂಗಲ್​ನವರಾದ ಶೋಭಾ ಅವರನ್ನು ಸೇಡಂನ ರಂಜೋಳದ ಎಂಜಿನಿಯರ್ ‌ಭೀಮರಾವ ಕುಲಕರ್ಣಿ ಅವರಿಗೆ ಮದುವೆ ಮಾಡಿಕೊಡಲಾಯಿತು. ಅಂದಿನಿಂದ ತಮ್ಮ ಮನೆತನದ ಹೆಸರನ್ನು ರಂಜೋಳಕರ ಎಂದು ಕರೆಸಿಕೊಂಡರು.

ರಂಗಮಾಧ್ಯಮ ‌ಕಲಾತಂಡ ಹಾಗೂ ‌ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ‌ನಿರ್ಮಿಸಿ ಅಭಿನಯಿಸಿದ್ದಾರೆ. ಕಳೆದ ವರ್ಷ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಎಲ್ಲಾ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ ಯುದ್ಧ ಭಾರತ ನಾಟಕವನ್ನು ಪ್ರದರ್ಶಿಸಿದ್ದರು. ಡಾ.ಚಂದ್ರಶೇಖರ ‌ಕಂಬಾರರೊಂದಿಗೆ ಬೆಳದಿಂಗಳಾಗಿ ಬಾ ಸೇರಿದಂತೆ ಮಹಾದಾಸೋಹಿ ಶರಣಬಸವೇಶ್ವರ, ಗೌತಮ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಖರೋಖರ, ಅನೆಬಂತಾನೆ, ಹರಕೆ ಕುರಿ, ಕೇಳು ಜನಮೇಜಯ, ಶಾಂತತಾ ಕೋರ್ಟ ಚಾಲೂ ಆಹೆ, ಆಧುನಿಕ ದ್ರೋಣ, ಕಾಡುಕುದುರೆ, ಶರಣು ಶರಣಾರ್ಥಿ, ನಾಪತ್ತೆಯಾದ ಪ್ರೇಮಪ್ರಸಂಗ, ಮಾತನಾಡುವ ಟೊಂಗೆಗಳು, ನೆಳಲಿಯ ಪ್ರಸಂಗ, ಜೈಸಿದನಾಯಕ, ಓಕಳಿ, ಅಮೀನಪುರದ ಸಂತೆ, ಗ್ರಹಣ, ಹುಲಿಯ ‌ನೆರಳು, ಹಾಸ್ಯ ತರಂಗ, ಅಳಿಯನ ಅವಾಂತರ, ಜೀವನಚಕ್ರ, ಜೀವನ ಸಂಘರ್ಷ, ಲಕ್ಕವ್ವನ ಮಂದಿ, ಸ್ತ್ರೀಲೋಕ ಮತ್ತಿತರ ನಾಟಕಗಳಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ:

Coronavirus: ಬೆಳಗಾವಿ, ಬಾಗಲಕೋಟೆಯಲ್ಲಿ ನಿಲ್ಲದ ಶಿಕ್ಷಕರ ಸಾವು; ಬೆಂಗಳೂರಿನಲ್ಲಿ ಬಿಬಿಎಂಪಿಯ 14 ಅಧಿಕಾರಿಗಳು ನಿಧನ

Covid-19 Karnataka Update: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 41,664 ಜನರಿಗೆ ಕೊವಿಡ್ ಸೋಂಕು ದೃಢ, 349 ಜನರು ನಿಧನ

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ