AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಭಿನ್ನಮತ, ಕಿಮ್ಮನೆ ರತ್ನಾಕರ್​ ಗೆ ಅವಮಾನ?

ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹಾಕಿರುವ ಬ್ಯಾನರ್ನಲ್ಲೂ ಕಿಮ್ಮನೆ ಫೋಟೋ ಇರಲಿಲ್ಲ ಎನ್ನಲಾಗಿದೆ. ಇದ್ರಿಂದ ಜಿಲ್ಲಾ ಕಾಂಗ್ರೆಸ್ ಗುಂಪುಗಾರಿಕೆಗೆ ಕಿಮ್ಮನೆ ರತ್ನಾಕರ್ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದರು. ಡಿಕೆಶಿ ನೇತೃತ್ವದ ಕಾಂಗ್ರೆಸ್ ಸಭೆಯಲ್ಲಿ ಕಿಮ್ಮನೆ ರತ್ನಾಕರ್ ಗೆ ಅಪಮಾನ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಭಿನ್ನಮತ, ಕಿಮ್ಮನೆ ರತ್ನಾಕರ್​ ಗೆ ಅವಮಾನ?
ಕಿಮ್ಮನೆ ರತ್ನಾಕರ್ ಪಾದಯಾತ್ರೆ ಸಂದರ್ಭದ ಫೋಟೋ
Follow us
TV9 Web
| Updated By: ಆಯೇಷಾ ಬಾನು

Updated on:May 10, 2022 | 8:12 PM

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದ ಅಸಮಾಧಾನ, ಭಿನ್ನಮತ ಇದೀಗ ಜಿಲ್ಲಾ ನಾಯಕತ್ವದಲ್ಲೂ ಹೊರ ಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದ ಶಿವಮೊಗ್ಗ ಜನಧ್ವನಿ ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್‌ ಬೆಂಬಲಿಗರು ಕಿರಿಕ್ ಮಾಡಿಕೊಂಡಿದ್ದಾರೆ. ಭಾಷಣ ಮಾಡಲು  ಕಿಮ್ಮನೆ ರತ್ನಾಕರ್ಗೆ ಅವಕಾಶ ನೀಡದ ಹಿನ್ನೆಲೆ ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಅಷ್ಟಕ್ಕೂ ಆಗಿದ್ದೇನು? ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ ಬಳಿಕ ಶಿವಮೊಗ್ಗದಲ್ಲಿ ಸಮಾವೇಶ ಮಂಗಳವಾರ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ ಕಾರ್ಯಕರ್ತರು ಬಂದಿದ್ದರು. ಆದರೆ ಸಭಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ನಾಯಕರಾದ ಹರಿಪ್ರಸಾದ್, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌, ಮಂಜುನಾಥ ಗೌಡ, ಸುಂದರೇಶ್ ಇತರರು ಇದ್ದರು. ವೇದಿಕೆಯಲ್ಲಿ ಇಡೀ ಕಾರ್ಯಕ್ರಮದ ರೂವಾರಿ ಹೊತ್ತಿದ್ದ ಕಿಮ್ಮನೆ ರತ್ನಾಕರ್ ಅವರಿಗೆ ಭಾಷಣಕ್ಕೆ ಅವಕಾಶ ನೀಡದೆ ಎಲ್ಲಾ ನಾಯಕರ ಭಾಷಣ ಮುಗಿದ ಮೇಲೆ ಜನ ಎದ್ದು ಹೋದ ಮೇಲೆ ಅವಕಾಶ ನೀಡಲಾಗಿತ್ತು. ಇದರಿಂದ ಸಿಟ್ಟಾದ ಕಿಮ್ಮನೆ ವಂದನೆ ಹೇಳಿ ಕೆಳಗಿಳಿದರು. ಇದರಿಂದ ಆಕ್ರೋಶಗೊಂಡ ಕಿಮ್ಮನೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾನರ್ ರಾಜಕೀಯ? ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಹಾಕಿರುವ ಬ್ಯಾನರ್ನಲ್ಲೂ ಕಿಮ್ಮನೆ ಫೋಟೋ ಇರಲಿಲ್ಲ ಎನ್ನಲಾಗಿದೆ. ಇದ್ರಿಂದ ಜಿಲ್ಲಾ ಕಾಂಗ್ರೆಸ್ ಗುಂಪುಗಾರಿಕೆಗೆ ಕಿಮ್ಮನೆ ರತ್ನಾಕರ್ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದರು. ಡಿಕೆಶಿ ನೇತೃತ್ವದ ಕಾಂಗ್ರೆಸ್ ಸಭೆಯಲ್ಲಿ ಕಿಮ್ಮನೆ ರತ್ನಾಕರ್ ಗೆ ಅಪಮಾನ ಮಾಡಲಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮೇ 6ರಿಂದ ಇಂದಿನವರೆಗೆ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪ ಗ್ರಾಮದಿಂದ 65 ಕಿಮೀ ಪಾದಯಾತ್ರೆ ನಡೆಸಿದ್ದ ಕಿಮ್ಮನೆ ರತ್ನಾಕರ್ ಅವರನ್ನು ಅವಮಾನ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕಿಮ್ಮನೆ ರತ್ನಾಕರ್ ಅಭಿಮಾನಿಗಳ ಆಕ್ರೋಶ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣ ಕ್ಕೆ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದ ಕಿಮ್ಮನೆ ರತ್ನಾಕರ್ ಅವರ ಫೋಟೋ ಇಲ್ಲ. ಸಭೆಯಲ್ಲಿ ಕಿಮ್ಮನೆ ರತ್ನಾಕರ್ ಭಾಷಣ ಮಾಡಲು ಅವಕಾಶ ನೀಡಿಲ್ಲ. ಪಕ್ಷದ ಕಚೇರಿಯ ಬಳಿ ಕಿಮ್ಮನೆ ರತ್ನಾಕರ್ ಭಾವಚಿತ್ರವಿರುವ ಬ್ಯಾನರ್ ಕೂಡ ಹಾಕಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯ ಎದುರು ಕಿಮ್ಮನೆ ರತ್ನಾಕರ್ ಬೆಂಬಲಿಗರ ಪ್ರತಿಭಟನೆ ನಡೆಸಿದರು. ಈ ವೇಳೆ ಕಿಮ್ಮನೆ ಪರ ಘೋಷಣೆ ಕೂಗಿದ ಅಭಿಮಾನಿಗಳು ಹಾಗೂ ಎರಡು ಗುಂಪುಗಳ ನಡುವೆ ಪರಸ್ಪರ ವಾಗ್ದಾಳಿ ನಡೆಯಿತು. ಎರಡು ಗುಂಪಿನ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ಕಾಂಗ್ರೆಸ್ ಪಕ್ಷದ ಕಚೇರಿಯ ಬಳಿಯಿಂದ ಹೊರ ಕಳುಹಿಸಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸರ ಮದ್ಯ ಪ್ರವೇಶದಿಂದ ತಿಳಿಯಾದ ಪರಿಸ್ಥಿತಿ ತಿಳಿಯಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಕಿಮ್ಮನೆ ಬಣದ ಇಬ್ಬರು ನಾಯಕರ ನಡುವೆ ನಡು ರಾತ್ರಿ ಗಲಾಟೆ, ಹೊಡೆದಾಟ ನಡೆದಿದ್ದು ಸುದ್ದಿಯಲ್ಲಿರುವ ನಡುವೆ ಇದೀಗ ಮತ್ತೊಂದು ಭಿನ್ನಮತ ಸ್ಫೋಟಗೊಂಡಿದೆ. ಆದರೆ ಈ ಎಲ್ಲಾ ಘಟನೆ ಹಿಂದೆ ಯಾರ ಕೈ ಇದೆ ಎಂಬ ಚರ್ಚೆ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Tue, 10 May 22

ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ
ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಧ್ವಂಸ
Daily Devotional: ಅದೃಷ್ಟ ಒಲಿಯಲು ಏನು ಮಾಡಬೇಕು?
Daily Devotional: ಅದೃಷ್ಟ ಒಲಿಯಲು ಏನು ಮಾಡಬೇಕು?