AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನಾಗಿರೋ ಮೋರಿ, ರಸ್ತೆ ಅಗೆದು ಕಾಮಗಾರಿ, ಸ್ಮಾರ್ಟ್ ಸಿಟಿ ಹೆಸರಲ್ಲಿ ಹಣ ದುರ್ಬಳಕೆ

ಶಿವಮೊಗ್ಗ: ಶಿವಮೊಗ್ಗ ನಗರದ ತುಂಬೆಲ್ಲಾ ಬರೀ ಸ್ಮಾರ್ಟ್ ಸಿಟಿ ಕಾಮಗಾರಿಗಳೇ. ಆದ್ರೆ, ನೂರಾರು ಕೋಟಿ ರೂ ವೆಚ್ಚದಲ್ಲಿ ನಡೀತಿರೋ ಈ ಕಾಮಗಾರಿಗಳನ್ನ ನೋಡಿದ್ರೆ ಸಾರ್ವಜನಿಕರೇ ಬೆಚ್ಚಿ ಬೀಳ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಕಾಮಗಾರಿ ಮಾಡ್ಕೊಂಡು, ಜನರಿಗೆ ಟಾರ್ಚರ್ ಕೊಡ್ತಿದ್ದಾರೆ. ಇರುವ ಮೋರಿಯನ್ನೇ ಒಡೆದು, ಹೊಸ ಮೋರಿ ಕಟ್ತಿದ್ದಾರೆ. ಇರೋ ರಸ್ತೆ ಕಿತ್ತು ಹೊಸ ರಸ್ತೆ ಮಾಡ್ತಿದ್ದಾರೆ. ಚೆನ್ನಾಗಿರೋ ಪಾರ್ಕ್​ ಹಾಳು ಮಾಡಿ ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಪಾರ್ಕ್ ಕಾಮಗಾರಿಗಳು ನಡೀತಿವೆ. ಅಂದಹಾಗೆ, ಎಲ್ಲಾ ಚೆನ್ನಾಗಿದ್ದೂ ಈ ರೀತಿ […]

ಚೆನ್ನಾಗಿರೋ ಮೋರಿ, ರಸ್ತೆ ಅಗೆದು ಕಾಮಗಾರಿ, ಸ್ಮಾರ್ಟ್ ಸಿಟಿ ಹೆಸರಲ್ಲಿ ಹಣ ದುರ್ಬಳಕೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 21, 2020 | 12:47 PM

Share

ಶಿವಮೊಗ್ಗ: ಶಿವಮೊಗ್ಗ ನಗರದ ತುಂಬೆಲ್ಲಾ ಬರೀ ಸ್ಮಾರ್ಟ್ ಸಿಟಿ ಕಾಮಗಾರಿಗಳೇ. ಆದ್ರೆ, ನೂರಾರು ಕೋಟಿ ರೂ ವೆಚ್ಚದಲ್ಲಿ ನಡೀತಿರೋ ಈ ಕಾಮಗಾರಿಗಳನ್ನ ನೋಡಿದ್ರೆ ಸಾರ್ವಜನಿಕರೇ ಬೆಚ್ಚಿ ಬೀಳ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಕಾಮಗಾರಿ ಮಾಡ್ಕೊಂಡು, ಜನರಿಗೆ ಟಾರ್ಚರ್ ಕೊಡ್ತಿದ್ದಾರೆ.

ಇರುವ ಮೋರಿಯನ್ನೇ ಒಡೆದು, ಹೊಸ ಮೋರಿ ಕಟ್ತಿದ್ದಾರೆ. ಇರೋ ರಸ್ತೆ ಕಿತ್ತು ಹೊಸ ರಸ್ತೆ ಮಾಡ್ತಿದ್ದಾರೆ. ಚೆನ್ನಾಗಿರೋ ಪಾರ್ಕ್​ ಹಾಳು ಮಾಡಿ ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಪಾರ್ಕ್ ಕಾಮಗಾರಿಗಳು ನಡೀತಿವೆ. ಅಂದಹಾಗೆ, ಎಲ್ಲಾ ಚೆನ್ನಾಗಿದ್ದೂ ಈ ರೀತಿ ಕಾಮಗಾರಿ ಹೆಸ್ರಲ್ಲಿ ನಗರವನ್ನ ಹಾಳು ಗೆಡವಿ, ಹಣ ಪೋಲು ಮಾಡ್ತಿರೋದು ಶಿವಮೊಗ್ಗ ನಗರದಲ್ಲಿ.

ಸ್ಮಾರ್ಟ್ ಸಿಟಿ ಹೆಸರಿನ ಕಾಮಗಾರಿಗಳಲ್ಲಿ ಮನೆಮುಂದಿನ ಮೋರಿ, ಚರಂಡಿಗಳು, ಕುಡಿಯುವ ನೀರಿನ ಹೊಸ ಸಂಪರ್ಕ ವಿವಿಧ ಕಾಮಗಾರಿಗಳು ಅವೈಜ್ಞನಿಕವಾಗಿ ನಿರ್ಮಿಸ್ತಿದ್ದಾರೆ. ಉತ್ತಮ ಗುಣಮಟ್ಟ ಮತ್ತು ಕಟ್ಟುವ ವಿಧಾನವು ಸರಿಯಾಗಿಲ್ಲ. ಇದ್ರಿಂದ ಶಿವಮೊಗ್ಗ ಜನ ಕಂಗೆಟ್ಟು ಹೋಗಿದ್ದಾರೆ. ಈ ರೀತಿ ಎಡವಟ್ಟುಗಳನ್ನ ಮಾಡಿದ್ರೆ ನಗರ ಸ್ಮಾರ್ಟ್ ಆಗಲು ಹೇಗೆ ಸಾಧ್ಯ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ.

ಸ್ಮಾರ್ಟ್ ನಗರವನ್ನಾಗಿಸುವ ಸಲುವಾಗಿ ಮನಸ್ಸಿಗೆ ಬಂದಂತೆ ನಗರದ ತುಂಬೆಲ್ಲಾ ಮೋರಿ, ಚರಂಡಿಗಳನ್ನ ಹೊಡೆದು, ಮತ್ತೆ ಹೊಸ ಕಾಮಗಾರಿಗಳನ್ನ ಮಾಡ್ತಿದ್ದಾರೆ. ಶಿವಮೊಗ್ಗ ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ ಅವರೇ, ಸ್ಮಾರ್ಟ್ ಸಿಟಿ ಎಂಡಿ ಆಗಿದ್ದಾರೆ. ಪಾಲಿಕೆ ಆಯುಕ್ತ ಮತ್ತು ಎಂಡಿ ಎರಡರ ಜವಾಬ್ದಾರಿಯನ್ನೇ ಒಬ್ಬರೇ ನಿರ್ವಹಿಸ್ತಿರೋದು ಸದ್ಯ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆ ಮತ್ತು ಗೋಲ್ ಮಾಲ್ ನಿಂದ ಕೂಡಿವೆ. ಆದ್ರೆ, ಈ ಬಗ್ಗೆ ಖುದ್ದಾಗಿ ದೂರು ನೀಡಿದ್ರೆ ಪರಿಶೀಲಿಸೋದಾಗಿ ಆಯುಕ್ತರು ಹೇಳ್ತಿದ್ದಾರೆ.

ಒಟ್ಟಾರೆ ಶಿವಮೊಗ್ಗ ನಗರವು ಸ್ಮಾರ್ಟ್ ಆಗುತ್ತದೇ ಬಿಡುತ್ತದೆಯೋ ಗೊತ್ತಿಲ್ಲ. ಈ ಕಾಮಗಾರಿ ಮಾಡ್ತಿರೋ ಗುತ್ತಿಗೆದಾರರು ಮತ್ತು ಅಧಿಕಾರಗಳು ಮಾತ್ರ ಫುಲ್ ಸ್ಮಾರ್ಟ್ ಆಗ್ತಿದ್ದಾರೆ. ದಿನನಿತ್ಯ ಜನರು ಕಾಮಗಾರಿ ಧೂಳಿನಲ್ಲೇ ವನವಾಸ ಅನುಭವಿಸ್ತಿರೋದು ವಿಪರ್ಯಾಸ.

Published On - 12:41 pm, Fri, 21 February 20

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ