Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸಾರಕ್ಕೆ ಹುಳಿ ಹಿಂಡಿದ ಕೊರೊನಾ.. ಸೌದಿಗೆ ವಾಪಸ್ ಹೋಗದಿದ್ದಕ್ಕೆ ಗಂಡನ ಜೊತೆ ಪತ್ನಿಯ ನಿರಂತರ ಫೈಟಿಂಗ್, ಆತ್ಮಹತ್ಯೆಗೆ ಯತ್ನಿಸಿ ಪತಿ ಆಸ್ಪತ್ರೆ ಪಾಲು

ಆತ ಮದುವೆಯಾಗಿ 18 ವರ್ಷವಾಗಿತ್ತು. ಕುಟುಂಬಕ್ಕಾಗಿ ವಿದೇಶದಲ್ಲಿ ದುಡಿದು ಜೀವನ ಸವೆಸಿದ್ದ. ಆದರೆ ಲಾಕ್ಡೌನ್ ಕಾರಣ ವಾಪಸ್ ಸೌದಿಗೆ ಹೋಗಲು ಆಗಿರಲಿಲ್ಲ. ಈ ನಡುವೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಶುರುವಾಯ್ತು. ಕಡೆಗೆ ಪತ್ನಿ ಎದುರಲ್ಲೇ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಷ್ಟಕ್ಕೂ ಅವರ ದಾಂಪತ್ಯದಲ್ಲಿ ಆಗಿದ್ದಾದ್ರು ಏನು?

ಸಂಸಾರಕ್ಕೆ ಹುಳಿ ಹಿಂಡಿದ ಕೊರೊನಾ.. ಸೌದಿಗೆ ವಾಪಸ್ ಹೋಗದಿದ್ದಕ್ಕೆ ಗಂಡನ ಜೊತೆ ಪತ್ನಿಯ ನಿರಂತರ ಫೈಟಿಂಗ್, ಆತ್ಮಹತ್ಯೆಗೆ ಯತ್ನಿಸಿ ಪತಿ ಆಸ್ಪತ್ರೆ ಪಾಲು
ಮೆಗ್ಗಾನ್ ಆಸ್ಪತ್ರೆ
Follow us
ಆಯೇಷಾ ಬಾನು
|

Updated on:Mar 25, 2021 | 8:02 AM

ಶಿವಮೊಗ್ಗದ ಆರ್​ಎಂಎಲ್ ನಗರದ ನಿವಾಸಿ ಫಯಾಜ್ ಅಹ್ಮದ್ ಸೌದಿಯಲ್ಲಿ ದುಡಿದು ಕುಟುಂಬಕ್ಕೆ ಬೆನ್ನೆಲುಬಾಗಿದ್ದ. ಸುಖ ಸಂಸಾರಕ್ಕೆ 1 ಗಂಡು ಹಾಗೂ 1 ಹೆಣ್ಣು ಮಗುವಿದೆ. ಪತ್ನಿ ಜೊತೆ ಸಂಸಾರವು ಇಷ್ಟು ವರ್ಷ ಚೆನ್ನಾಗಿಯೇ ಇತ್ತು. ಆದರೆ ಪತಿರಾಯ ಕೊವಿಡ್ ಹಿನ್ನೆಲೆ ವಾಪಸ್ ಸೌದಿಗೆ ಹೋಗಲು ಆಗಿರಲಿಲ್ಲ. ಈ ಒಂದೇ ಒಂದು ಕಾರಣಕ್ಕೆ ಸುಖವಾಗಿದ್ದ ಸಂಸಾರದಲ್ಲಿ ಕಿರಿಕಿರಿ, ಭಿನ್ನಾಭಿಪ್ರಾಯ ಶುರುವಾಗಿದೆ.

ಅಷ್ಟಕ್ಕೂ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತವಾಗಿತ್ತು. ಸೌದಿಯಲ್ಲಿ ಲಾಕ್​ಡೌನ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಫಯಾಜ್ ಅಹ್ಮದ್ ಶಿವಮೊಗ್ಗದಲ್ಲೇ ಕಳೆದ ಕೆಲವು ತಿಂಗಳಿಂದ ಪತ್ನಿ ಜೊತೆ ಇದ್ದ. ಈ ನಡುವೆ ಪತಿ ಪತ್ನಿ ನಡುವೆ ಗಲಾಟೆ ಶುರುವಾಗಿದೆ. ಪತ್ನಿಯು ಪತಿ ಹೆಸರಿನಲ್ಲಿದ್ದ 2 ಸೈಟ್ ಮತ್ತು ಮನೆ ಹಾಗೂ 1 ಶಾಲೆ ಕಟ್ಟಡವು ಪತ್ನಿ ಹೆಸರಿಗೆ ವರ್ಗಾವಣೆಯಾಗಿದೆ. ಪತಿ ಆಸ್ತಿಯನ್ನ ಪತ್ನಿ ಹೆಸರಿನಲ್ಲಿ ಮಾಡಿದ್ರೂ ಪತ್ನಿಗೆ ಅದ್ಯಾಕೋ ಗಂಡನ ಮೇಲೆ ಸಿಟ್ಟು. ಗಂಡ ವಾಪಸ್ ಸೌದಿಗೆ ಹೋಗಿದ್ದರೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಪತಿ ಕೆಲವು ತಿಂಗಳನಿಂದ ಪತ್ನಿಯ ಜೊತೆಗೆ ವಾಸವಾಗಿದ್ದೇ ಯಡವಟ್ಟಾಗಿತ್ತು. ಪತ್ನಿಗೆ ಪತಿ ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲ. ಪದೇಪದೆ ಪತಿ ಜೊತೆ ಗಲಾಟೆ ಮಾಡುತ್ತಿದ್ದಳು ಕೊನೆಗೆ ಮಹಿಳಾ ಠಾಣೆಯ ಮೆಟ್ಟಿಲೂ ಸಹ ಹತ್ತಿದ್ದಳು. ಹೆಂಡತಿಯೇ ಪತಿಗೆ ವಿಷಕೊಟ್ಟು ಸಾಯೋದಕ್ಕೆ ಪ್ರಚೋದನೆ ಕೊಟ್ಟಿದ್ದಳಂತೆ. ಹೀಗಾಗಿ ಪತಿರಾಯ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗ್ತಿದೆ.

ಅಷ್ಟಕ್ಕೂ 18 ವರ್ಷಗಳ ಕಾಲ ಚೆನ್ನಾಗಿದ್ದ ಸಂಸಾರದಲ್ಲಿ ಏನಾಯ್ತೋ ಗೊತ್ತಿಲ್ಲ. ಮಕ್ಕಳು ಕೂಡ ಅಪ್ಪನ ಜತೆಯಲ್ಲಿ ಅಷ್ಟಾಗಿ ನಂಟು ಹೊಂದಿಲ್ಲವಂತೆ. ಇದೇ ಕಾರಣಕ್ಕೆ ಪತಿಯೇ ಬೇಡ ಎಂಬಂತೆ ಪತ್ನಿ ವರ್ತಿಸುತ್ತಿದ್ದಳು ಎಂಬ ಅರೋಪ ಕೇಳಿಬಂದಿದೆ. ವಿಷ ಸೇವಿಸಿದ್ದ ಫಯಾಜ್​ಗೆ ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

ಇಷ್ಟೆಲ್ಲಾ ನಡೆದಿದ್ದರೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಪತ್ನಿ ನಿರಾಕರಿಸಿದ್ದು, ಪತಿ ಮನೆಯವರು ಹಲವಾರು ಆರೋಪಗಳನ್ನ ಮಾಡುತ್ತಿದ್ದಾರೆ. ಸೂಕ್ತ ತನಿಖೆ ನಡೆಸಿ ಪತ್ನಿಗೆ ಸೂಕ್ತ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದ್ರೆ ಕುಟುಂಬಕ್ಕಾಗಿ ಇಷ್ಟು ವರ್ಷ ದುಡಿದವನ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

ಇದನ್ನೂ ಓದಿ: ಪತಿ- ಪತ್ನಿ ಜಗಳದಲ್ಲಿ ಪತಿರಾಯನ ಕಿವಿ ಕಟ್: ಬುದ್ಧಿವಾದ ಹೇಳಿದ ಪತಿಗೆ, ಪತ್ನಿ ಕುಟುಂಬದವರಿಂದ ಹಲ್ಲೆ

Published On - 7:59 am, Thu, 25 March 21

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ