ಕೊಠಡಿಗಳು ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜು ಆವರಣದಲ್ಲೇ ಪಾಠ ಕಲಿತ ವಿದ್ಯಾರ್ಥಿಗಳು!

ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇದೇ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದು ಹಲವು ಕೊಠಡಿಗಳನ್ನ ಬಳಕೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೂರಿಸಿ ಸುಮಾರು 60 ಮಕ್ಕಳಿಗೆ ಪಾಠ ಮಾಡಲಾಗಿದೆ.

ಕೊಠಡಿಗಳು ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜು ಆವರಣದಲ್ಲೇ ಪಾಠ ಕಲಿತ ವಿದ್ಯಾರ್ಥಿಗಳು!
ಕಾಲೇಜು ಆವರಣದಲ್ಲೇ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳು

Updated on: Jan 01, 2021 | 1:36 PM

ಮಂಡ್ಯ: ಜನವರಿ 1, 2021ರಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲಾಗಿದೆ. ಆದರೆ ಹತ್ತು ತಿಂಗಳ ನಂತರ ಶಾಲೆಗೆ ಬಂದ ಮಕ್ಕಳನ್ನ ಶಾಲಾ ಆವರಣದಲ್ಲೇ ಕೂರಿಸಿ ಪಾಠ ಮಾಡಿರೋ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೂರಿಸಿ ಸುಮಾರು 60 ಮಕ್ಕಳಿಗೆ ಪಾಠ ಮಾಡಲಾಗಿದೆ. ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇದೇ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದು ಹಲವು ಕೊಠಡಿಗಳನ್ನ ಬಳಕೆ ಮಾಡಿಕೊಳ್ಳಲಾಗಿತ್ತು.

ಆದ್ರೆ ಈ ರೀತಿ ಬಳಕೆ ಮಾಡಿಕೊಳ್ಳಲಾಗಿದ್ದ ಕೊಠಡಿಗಳನ್ನು ಇನ್ನೂ ಸ್ವಚ್ಚಗೊಳಿಸದ ಕಾರಣ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳನ್ನ ಕಾಲೇಜು ಆವರಣದಲ್ಲೇ‌ ಕೂರಿಸಿ ಪಾಠ ಮಾಡಿದ್ದಾರೆ. ಈ ರೀತಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮಕ್ಕಳು ಕಾಲೇಜು ಇದ್ದರೂ ಆವರಣದಲ್ಲೇ ಪಾಠ ಕಲಿಯುವಂತಾಯಿತು.

ಕೊಠಡಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ವಾಪಸ್​

Published On - 1:34 pm, Fri, 1 January 21