ಇದು ತುಂಗಾ ‘ಚೀಟ್’ ಫಂಡ್: ಗ್ರಾಹಕರಿಗೆ ಬಿತ್ತು ಪಂಗನಾಮ, ದಂಪತಿ ನಾಪತ್ತೆ

ಶಿವಮೊಗ್ಗ: ತುಂಗಾ ಚಿಟ್ ಫಂಡ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಂಕರ್​ ನಾಗ್​ ಎಂಬ ದಂಪತಿಯು ಗ್ರಾಹಕರಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶಂಕರ ಮಠ ರಸ್ತೆಯಲ್ಲಿರುವ ಚಿಟ್​ ಫಂಡ್​ಗೆ ನೂರಾರು ಜನರು 1 ರಿಂದ 10 ಲಕ್ಷದವರೆಗೆ ಚೀಟಿ ಹಣ ಕಟ್ಟುತ್ತಿದ್ದರು. ಆದ್ರೆ, ಕಳೆದ ನಾಲ್ಕು ದಿನಗಳಿಂದ ಶಂಕರ್​ ದಂಪತಿ ಕಚೇರಿ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ವಂಚನೆಯಿಂದ ಕಂಗಾಲಾಗಿರುವ ಗ್ರಾಹಕರ ಕಣ್ಣೀರು ಹಾಕುತ್ತಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದು ತುಂಗಾ ‘ಚೀಟ್’ ಫಂಡ್: ಗ್ರಾಹಕರಿಗೆ ಬಿತ್ತು ಪಂಗನಾಮ, ದಂಪತಿ ನಾಪತ್ತೆ
ಸಾಧು ಶ್ರೀನಾಥ್​

Updated on: Dec 10, 2019 | 4:53 PM

ಶಿವಮೊಗ್ಗ: ತುಂಗಾ ಚಿಟ್ ಫಂಡ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಂಕರ್​ ನಾಗ್​ ಎಂಬ ದಂಪತಿಯು ಗ್ರಾಹಕರಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಶಂಕರ ಮಠ ರಸ್ತೆಯಲ್ಲಿರುವ ಚಿಟ್​ ಫಂಡ್​ಗೆ ನೂರಾರು ಜನರು 1 ರಿಂದ 10 ಲಕ್ಷದವರೆಗೆ ಚೀಟಿ ಹಣ ಕಟ್ಟುತ್ತಿದ್ದರು. ಆದ್ರೆ, ಕಳೆದ ನಾಲ್ಕು ದಿನಗಳಿಂದ ಶಂಕರ್​ ದಂಪತಿ ಕಚೇರಿ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ವಂಚನೆಯಿಂದ ಕಂಗಾಲಾಗಿರುವ ಗ್ರಾಹಕರ ಕಣ್ಣೀರು ಹಾಕುತ್ತಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us