AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೀಡಂ ಪಾರ್ಕ್​ನಲ್ಲಿ ಸಾರಿಗೆ ನೌಕರರ ಹರ್ಷೋದ್ಗಾರ: ಮೊಬೈಲ್ ಟಾರ್ಚ್ ಆನ್ ಮಾಡಿ ಸಂತಸ ವ್ಯಕ್ತ

ಇತ್ತ, ಸಂಧಾನ ಸಕ್ಸಸ್​ ಆದ ಸುದ್ದಿ ಕೇಳುತ್ತಿದ್ದಂತೆ ಫ್ರೀಡಂಪಾರ್ಕ್​ನಲ್ಲಿ ನೆರೆದಿದ್ದ ಸಾರಿಗೆ ನೌಕರರು ಮೊಬೈಲ್ ಟಾರ್ಚ್ ಆನ್ ಮಾಡೋ ಮೂಲಕ ಹರ್ಷ ವ್ಯಕ್ತಪಡಿಸಿದರು. ಸಭೆ ಸಫಲ ಎಂಬ ವಿಚಾರ‌ ಕೇಳಿ ಆಶಾ ಭಾವನೆ ವ್ಯಕ್ತಪಡಿಸಿದರು.

ಫ್ರೀಡಂ ಪಾರ್ಕ್​ನಲ್ಲಿ ಸಾರಿಗೆ ನೌಕರರ ಹರ್ಷೋದ್ಗಾರ: ಮೊಬೈಲ್ ಟಾರ್ಚ್ ಆನ್ ಮಾಡಿ ಸಂತಸ ವ್ಯಕ್ತ
ಮೊಬೈಲ್ ಟಾರ್ಚ್ ಆನ್ ಮಾಡಿ ಸಂತೋಷ ವ್ಯಕ್ತಪಡಿಸಿದ ಸಾರಿಗೆ ನೌಕರರು
KUSHAL V
|

Updated on:Dec 13, 2020 | 7:12 PM

Share

ಬೆಂಗಳೂರು: ಇತ್ತ, ಸಂಧಾನ ಸಕ್ಸಸ್​ ಆದ ಸುದ್ದಿ ಕೇಳುತ್ತಿದ್ದಂತೆ ಫ್ರೀಡಂಪಾರ್ಕ್​ನಲ್ಲಿ ನೆರೆದಿದ್ದ ಸಾರಿಗೆ ನೌಕರರು ಮೊಬೈಲ್ ಟಾರ್ಚ್ ಆನ್ ಮಾಡೋ ಮೂಲಕ ಹರ್ಷ ವ್ಯಕ್ತಪಡಿಸಿದರು. ಸಭೆ ಸಫಲ ಎಂಬ ವಿಚಾರ‌ ಕೇಳಿ ಆಶಾ ಭಾವನೆ ವ್ಯಕ್ತಪಡಿಸಿದರು.

ಈ ನಡುವೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಸಚಿವರು ನನಗೆ ಒಂದು ಮೆಸೇಜ್ ಮಾಡಿದ್ದಾರೆ. ನಮ್ಮ ಇಲಾಖೆಗೆ ಸುಮಾರು ‌40% ನಷ್ಟ ಇರುತ್ತದೆ. ನಾವು ಸೇವೆಗೆ ಆದ್ಯತೆ ‌ನೀಡಿದ್ದೇವೆಂಬ ಕಾರಣ ನೀಡಿದ್ದೇವೆ.ಸಾರ್ವಜನಿಕರ‌ ಹಿತಾಸಕ್ತಿಗೆ ಆದ್ಯತೆ ನೀಡಿದ್ದೇವೆಂಬ ಸಂಪೂರ್ಣ ಅಂಕಿ ಅಂಶಗಳನ್ನ ಕಳಿಸಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು. 40% ನಷ್ಟ ಇಲ್ಲ, ಲಾಭ ಇಲ್ಲ. ಆದರೆ 20% ಲಾಭ ಇದೆ. ಸೇವೆಯ ಆದ್ಯತೆ ಹಿನ್ನೆಲೆ ನಷ್ಟ ಆದ್ರೂ ಸರ್ಕಾರ ನಡೆಸಲೇಬೇಕಾದ ಉದ್ದೇಶ ಹೊಂದಿದೆ ಎಂದು ಹೇಳಿದರು.

ಜೊತೆಗೆ, ಬಿಡಿಭಾಗಗಳ ಖರೀದಿಯಲ್ಲಿ ಕಮಿಷನ್ ದಂಧೆ ನಡೀತಿದೆ‌. ನಷ್ಟಕ್ಕೆ‌ ಇದೇ ಪ್ರಮುಖ ಕಾರಣ. ಎಲ್ಲಿ ಪ್ರಾಮಾಣಿಕತೆ ಇರುತ್ತದೆ ಅಲ್ಲಿ ನಷ್ಟ ಇರಲ್ಲ ಎಂದು ಹೇಳಿದರು. ವಾಹನಗಳಿಗೆ ಆಗುವ ಎಲ್ಲಾ ನಷ್ಟವನ್ನು ನೌಕರರೇ ಭರಿಸಬೇಕು. ಹೀಗೆ ಎಲ್ಲಾ ಒತ್ತಡ ಹೇರಿ ದುಡಿಸ್ತಿದ್ದಾರೆ, ದುಡಿಯೋಣ. ಆದ್ರೆ ಮೂರು‌ ಕಾಸು ಕೊಟ್ಟು ಮೂವತ್ತು ಬಾರಿ ಶಿಕ್ಷೆ ಕೊಡ್ತೀರಲ್ಲ ನಿಮ್ಮ ನೀತಿ ಸರಿನಾ‌‌? ಸಾರಿಗೆ ನೌಕರರು ಮತ್ತು ಸರ್ಕಾರಿ‌ ನೌಕರರಿಗೆ 40% ವ್ಯತ್ಯಾಸ ಇದೆ. ನಿಮ್ಮ ಕೆಲಸದ‌ ಮೇರೆಗೆ ಹೆಚ್ಚು ‌ಸಂಬಳ‌ ಕೊಡಬೇಕು. ನಿಮ್ಮಿಂದಲೇ ಕೆಲಸ‌ ನಡೀತಿರೋದು. ನಿಮ್ಮಿಂದಲೇ ರಾಜ್ಯದಲ್ಲಿ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಈ ನಡುವೆ, ಪ್ರತಿಭಟನೆ ಸಂಘಟಕರು ಸಮರ್ಥರಿರಬೇಕು. ಸಮರ್ಥವಾಗಿ ಪ್ರತಿಭಟನೆ ಮುನ್ನಡಸಬೇಕು. ಇಲ್ಲದಿದ್ದರೇ ಸರ್ಕಾರ ಜಗ್ಗೊದಿಲ್ಲ ಎಂದು ಪರೋಕ್ಷವಾಗಿ ಎಐಟಿಯುಸಿ ಮುಖಂಡ ಅನಂತ ಸುಬ್ಬರಾವ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಇತ್ತ, ಕುಂದಾನಗರಿ ಬೆಳಗಾವಿಯಲ್ಲಿ ಸಹ ಪ್ರತಿಭಟನೆಯಲ್ಲಿದ್ದ ಸಾರಿಗೆ ನೌಕರರು ಸಭೆ ಸಫಲಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಕಾತರದಲ್ಲಿದ್ದ ನೌಕರರು ಕ್ಷಣಕ್ಷಣದ ಅಪ್​ಡೇಟ್ಸ್​​ಗಾಗಿ ತಮ್ಮ ಮೊಬೈಲ್​ನಲ್ಲಿ ಟಿವಿ9 ವೀಕ್ಷಿಸುತ್ತಿದ್ದರು. ಸಂಧಾನ ಸಕ್ಸಸ್​ ಆಗ್ತಿದ್ದಂತೆ ತಮ್ಮ ಸಂತಸ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್​: ನಾಳೆಯಿಂದ ಬಸ್​ ರೈಟ್​.. ರೈಟ್​!

Published On - 6:41 pm, Sun, 13 December 20

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!