AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹೆದ್ದಾರಿಯಲ್ಲಿ ಒಂದೇ ವರ್ಷದಲ್ಲಿ 60 ಆಕ್ಸಿಡೆಂಟ್​: ಸಾಲು ಸಾಲು ಸಾವಿಂದ ಕಂಗೆಟ್ಟ ಜನತೆ

ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು. ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ […]

ಈ ಹೆದ್ದಾರಿಯಲ್ಲಿ ಒಂದೇ ವರ್ಷದಲ್ಲಿ 60 ಆಕ್ಸಿಡೆಂಟ್​: ಸಾಲು ಸಾಲು ಸಾವಿಂದ ಕಂಗೆಟ್ಟ ಜನತೆ
ಸಾಧು ಶ್ರೀನಾಥ್​
|

Updated on: Feb 03, 2020 | 7:00 PM

Share

ತುಮಕೂರು: ಆ ಜಾಗದಲ್ಲಿ ಜನ ನಿಲ್ಲೋದಕ್ಕೂ ಭಯ ಪಡ್ತಿದ್ದಾರೆ. ಯಾಕಂದ್ರೆ, ಒಂದಲ್ಲ, ಎರಡಲ್ಲ, ಸುಮಾರು 60ಕ್ಕೂ ಹೆಚ್ಚು ಅಪಘಾತಗಳು ಅಲ್ಲಿ ನಡೆದಿವೆ. 30 ಕ್ಕೂ ಹೆಚ್ಚು ಜನ ಆ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ತಿರುವಿನ ಈ ದಾರಿಯಲ್ಲಿ, ಯಾವ ಹೊತ್ತಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ದಿನಕ್ಕೊಂದು ಅಪಘಾತ ಇಲ್ಲಿ ತಪ್ಪಿದ್ದಲ್ಲ. ವಾರಕ್ಕೊಬ್ಬರಾದ್ರೂ ಜೀವ ಬಿಡ್ತಾನೆ ಇರ್ತಾರೆ. ಯಾಕಂದ್ರೆ, ಅಂತಹ ಡೆಡ್ಲಿ ಹೈವೇ ಇದು.

ಹೌದು.. ಸಾಲು ಸಾಲು ಅಪಘಾತಗಳಿಗೆ ಸಾಕ್ಷಿಯಾಗ್ತಿರೋ ಇದು ಕೆರೆಗಳ ಪಾಳ್ಯ. ತುಮಕೂರು ಜಿಲ್ಲೆ ಮಧುಗಿರಿ ಸಮೀಪದ ಈ ಕೆರೆಗಳಪಾಳ್ಯ ಗ್ರಾಮದಲ್ಲಿ, ರಾಜ್ಯ ಹೆದ್ದಾರಿ 4 ಹಾದು ಹೋಗುತ್ತೆ. ಆದ್ರೆ, ಕಳೆದೊಂದು ವರ್ಷದಿಂದ ಇಲ್ಲಿ ಸುಮಾರು 60 ಕ್ಕೂ ಹೆಚ್ಚು ಅಪಘಾತಗಳಾಗಿವೆ. 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಕೆಶಿಪ್​​​ನ ಅವೈಜ್ಙಾನಿಕೆ ರಸ್ತೆ ಕಾಮಗಾರಿಯೇ ಇದಕ್ಕೆಲ್ಲ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನೂ ಈ ವಾರದಲ್ಲೇ ಇಲ್ಲಿ ನಾಲ್ಕು ಅಪಘಾತಗಳಾಗಿದ್ದು, ಮೂವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ರಸ್ತೆ ಬದಿಯೇ ಸರ್ಕಾರಿ ಶಾಲೆ, ಹಾಲಿನ ಡೈರಿ ಇದೆ. ಹೆದ್ದಾರಿಯಲ್ಲಿ ಅತಿವೇಗದಲ್ಲಿ ವಾಹನಗಳು ತಿರುಗಾಡ್ತವೆ. ತಿರುವಿನಿಂದ ಬಂದ ವಾಹನಗಳು ಏಕಾಏಕಿ, ಪಾದಚಾರಿಗಳ ಮೇಲೆ ಹರಿಯುತ್ತಿವೆ. ಸಾಲು ಸಾಲು ಅಪಘಾತಗಳಿಂದ ಆತಂಕಗೊಂಡು ಜನ, ಮೊನ್ನೆಯಷ್ಟೇ ಪ್ರತಿಭಟನೆ ಮಾಡಿದ್ರು. ಇದೀಗ, ಸ್ಕೈ ವಾಕರ್ ಇಲ್ಲ ಬೈಪಾಸ್​​​​​​ ಮೂಲಕ ವಾಹನಗಳನ್ನ ಡೈವರ್ಟ್​​​​​​​ ಮಾಡ್ಬೇಕು ಅಂತ ಪಟ್ಟು ಹಿಡಿದಿದ್ದಾರೆ.

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ