ನನ್ನಲ್ಲಿರೋದು ಅಸಲಿ ಹುಲಿ ಉಗುರಿನ ಪೆಂಡೆಂಟ್ ಅಲ್ಲ, ಅದು ಕೃತ್ರಿಮ ಮತ್ತು ಭಕ್ತರೊಬ್ಬರು ಉಡುಗೊರೆಯಾಗಿ ನೀಡಿದ್ದು: ಧನಂಜಯ ಗುರೂಜಿ
ಜಾತ್ರೆ ಸಮಯದಲ್ಲಿ ಭಕ್ತಾದಿಗಳಿಗೆ ಊಟ, ನೀರು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ದೇವಸ್ಥಾನ ಸಮಿತಿ ವತಿಯಿಂದ ಕಲ್ಪಿಸಲಾಗುತ್ತದೆ ಹಾಗೆಯೇ, ವ್ಯಾಪಾರಿಗಳಿಗೆ ಸ್ಟಾಲ್ ಗಳನ್ನು ಹಾಕುವ ವ್ಯವಸ್ಥೆ ಕೂಡ ಮಾಡಿಕೊಡಲಾಗುವುದು ಎಂದು ಗುರೂಜಿ ಹೇಳಿದರು. ಹಾಗೆ ಸ್ಟಾಲ್ ಹಾಕಿದವರ ಪೈಕಿ ಒಬ್ಬ ವ್ಯಾಪಾರಿ ತನಗೆ ಹುಲಿ ಉಗುರಿನಂತೆ ಕಾಣುವ ಆ್ಯಂಟಿಕ್ ಪೀಸನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಗುರೂಜಿ ಹೇಳಿದರು.
ತುಮಕೂರು: ಹುಲಿ ಉಗುರು ಧರಿಸಿದ ಆರೋಪಕ್ಕೆ ಒಳಗಾಗಿರುವ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯಲ್ಲಿರುವ ಶನೈಶ್ವರ ದೇವಸ್ಥಾನದ ಧರ್ಮದರ್ಶಿ ಧನಂಜಯ ಗುರೂಜಿ (Dhananjaya Guruji) ಟಿವಿ9 ಕನ್ನಡ ವಾಹಿನಿಯ ತುಮಕೂರು ವರದಿಗಾರನಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಗುರೂಜಿ ಹೇಳುವ ಪ್ರಕಾರ ಅವರ ಬಳಿ ಇರೋದು ಅಸಲಿ ಹುಲಿ ಉಗುರಿನ ಪೆಂಡಂಟ್ ಅಲ್ಲವೇ ಅಲ್ಲ, ಅದು ಕೃತ್ರಿಮ (fake) ಆಗಿದ್ದು ಭಕ್ತರೊಬ್ಬರು (ವ್ಯಾಪಾರಿ) ಅವರಿಗೆ 2018 ರಲ್ಲಿ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಕಳೆದ 17-18 ವರ್ಷಗಳಿಂದ ಬಿದನಗೆರೆ ಶನೈಶ್ವರ ದೇವಸ್ಥಾನ ಜಾತ್ರೆಯನ್ನು ಆಯೋಜಿಲಾಗುತ್ತದೆ ಮತ್ತು ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ ಎಂದು ಹೇಳಿದ ಧನಂಜಯ ಗುರೂಜಿ, ಜಾತ್ರೆ ಸಮಯದಲ್ಲಿ ಭಕ್ತಾದಿಗಳಿಗೆ ಊಟ, ನೀರು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ದೇವಸ್ಥಾನ ಸಮಿತಿ ವತಿಯಿಂದ ಕಲ್ಪಿಸಲಾಗುತ್ತದೆ ಹಾಗೆಯೇ, ವ್ಯಾಪಾರಿಗಳಿಗೆ (vendors) ಸ್ಟಾಲ್ ಗಳನ್ನು ಹಾಕುವ ವ್ಯವಸ್ಥೆ ಕೂಡ ಮಾಡಿಕೊಡಲಾಗುವುದು ಎಂದು ಗುರೂಜಿ ಹೇಳಿದರು. ಹಾಗೆ ಸ್ಟಾಲ್ ಹಾಕಿದವರ ಪೈಕಿ ಒಬ್ಬ ವ್ಯಾಪಾರಿ ತನಗೆ ಹುಲಿ ಉಗುರಿನಂತೆ ಕಾಣುವ ಆ್ಯಂಟಿಕ್ ಪೀಸನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಗುರೂಜಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
