AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಜಾ ಮಾರಾಟಗಾರ ಎಂದು ಭಿಕ್ಷುಕನ ಮೇಲೆ ಸ್ಥಳೀಯರ ಶಂಕೆ, ಪರಿಶೀಲನೆ ನಡೆಸಿದ ಕೊರಟಗೆರೆ ಪೊಲೀಸರಿಗೆ ಶಾಕ್!

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿರುವ ಸಿದ್ದರಬೆಟ್ಟ ಬಳಿಯ ಮರೇನಾಯನಕಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದರಿ ಭಿಕ್ಷುಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಿಕ್ಷೆ ಬೇಡಿಕೊಂಡಿದ್ದಾತ. ಆತನ ಚಲನವಲನ ಮೇಲೆ ಅನುಮಾನಗೊಂಡ ಸ್ಥಳೀಯರು, ಗಾಂಜಾ ಮಾರಾಟಗಾರ ಎಂದು ಶಂಕೆ ವ್ಯಕ್ತಪಡಿಸಿದ್ದರು.

ಗಾಂಜಾ ಮಾರಾಟಗಾರ ಎಂದು ಭಿಕ್ಷುಕನ ಮೇಲೆ ಸ್ಥಳೀಯರ ಶಂಕೆ, ಪರಿಶೀಲನೆ ನಡೆಸಿದ ಕೊರಟಗೆರೆ ಪೊಲೀಸರಿಗೆ ಶಾಕ್!
ಗಾಂಜಾ ಮಾರಾಟಗಾರ ಎಂದು ಭಿಕ್ಷುಕನ ಮೇಲೆ ಸ್ಥಳೀಯರ ಶಂಕೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on: Oct 18, 2023 | 12:31 PM

ತುಮಕೂರು: ಗಾಂಜಾ ಮಾರಾಟಗಾರ (ganja seller) ಎಂದು ಭಿಕ್ಷುಕನ ಮೇಲೆ ಸ್ಥಳೀಯರು (Localites) ಶಂಕೆ ವ್ಯಕ್ತಪಡಿಸಿ, ಭಿಕ್ಷುಕನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಬಳಿಕ, ಭಿಕ್ಷುಕನ ಬಳಿಯಿದ್ದ ಗಂಟು ಮೂಟೆಯನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೇ ಒಂದು ಕ್ಷಣ ಶಾಕ್ ಆಗಿದೆ. ಏಕೆಂದರೆ ಭಿಕ್ಷುಕನ (beggar) ಬಳಿಯಿದ್ದ ಗಂಟುಮೂಟೆಯಲ್ಲಿತ್ತು ಬರೊಬ್ಬರಿ 50 ಸಾವಿರ ರೂಪಾಯಿ ನಗದು ಹಣ. 20 ಸಾವಿರ ಚಿಲ್ಲರೆ ಹಣ ಹಾಗೂ 10, 20, 50 ರೂಪಾಯಿಯ 30 ಸಾವಿರ ರೂಪಾಯಿ ನೋಟುಗಳು.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿರುವ ಸಿದ್ದರಬೆಟ್ಟ ಬಳಿಯ ಮರೇನಾಯನಕಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸದರಿ ಭಿಕ್ಷುಕನು ಮರೇನಾಯಕನಹಳ್ಳಿ, ಸಿದ್ದರಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಭಿಕ್ಷೆ ಬೇಡಿಕೊಂಡಿದ್ದಾತ. ಆತನ ಚಲನವಲನ ಮೇಲೆ ಅನುಮಾನಗೊಂಡ ಸ್ಥಳೀಯರು, ಗಾಂಜಾ ಮಾರಾಟಗಾರ ಎಂದು ಶಂಕೆ ವ್ಯಕ್ತಪಡಿಸಿದ್ದರು.

ಪತ್ನಿ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟುಬಂದಿರುವ ವ್ಯಕ್ತಿ ಆತ

ಬಳಿಕ 112 ಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ತಕ್ಷಣವೇ ಭಿಕ್ಷುಕನನ್ನ ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ಬಳಿಯಿದ್ದ ಗಂಟು ಮೂಟೆಯಲ್ಲಿ ಬರೊಬ್ಬರಿ 50 ಸಾವಿರ ಹಣ ಪತ್ತೆಯಾಗಿದೆ. ಆದರೆ ಸ್ಥಳೀಯರ ಆರೋಪಿಸಿದ್ದಂತೆ ಭಿಕ್ಷುಕನ ಬಳಿ ಗಾಂಜಾ ಪತ್ತೆಯಾಗಿಲ್ಲ. ಇದರಿಂದ ಪೊಲೀಸರು ಭಿಕ್ಷುಕನನ್ನ ಮರಳಿ ಗೂಡಿಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

Also Read: International Beggar: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಜರಿದ ಜಮಾಯತ್ ಮುಖ್ಯಸ್ಥ

ಸದರಿ ಭಿಕ್ಷುಕ ಗುರುಸಿದ್ದಪ್ಪ ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಎಂ. ಹೆಚ್. ಪಟ್ನಾ ಬಳಿಯ ಮಾದಾಪುರ ಗ್ರಾಮದ ನಿವಾಸಿಯಂತೆ. ಕಳೆದ 10 ವರ್ಷಗಳ ಹಿಂದೆ ತನ್ನ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಮನೆ ಬಿಟ್ಟುಬಂದಿದ್ದಾನೆ ಈ ಗುರುಸಿದ್ದಪ್ಪ. ಗುಬ್ಬಿ, ತುಮಕೂರು, ಕೊರಟಗೆರೆ ಭಾಗಗಳಲ್ಲಿ ಭಿಕ್ಷೆ ಬೇಡಿಕೊಂಡು ಓಡಾಡುತ್ತಿದ್ದಾನೆ. ನಿನ್ನೆ ರಾತ್ರಿ ಆತನ ಪತ್ನಿ ಹಾಗೂ ಪುತ್ರನನ್ನ ಠಾಣೆಗೆ ಕರೆಸಿ ಗುರುಸಿದ್ದಪ್ಪನನ್ನ ಮನೆಗೆ ಕಳುಹಿಸಿಕೊಟ್ಟು, ಕೊರಟಗೆರೆ ಪೊಲೀಸರು (Koratagere police) ಮಾನವೀಯತೆ ಮೆರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ