AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumkur Mayor Election: ತುಮಕೂರು ಮೇಯರ್ ಸ್ಥಾನ ಕಾಂಗ್ರೆಸ್​ಗೆ ಒಲಿಯುವ ಸಾಧ್ಯತೆ, ಮೀಸಲಾತಿ ನಿಯಮವೂ ಪೂರಕ

Tumkur Politics: ಕಾಂಗ್ರೆಸ್​ಗೆ ತನ್ನದೇ ಪಕ್ಷದ 10 ಮತಗಳ ಜೊತೆಗೆ ಇಬ್ಬರು ಪಕ್ಷೇತರರು ಮತ್ತು ಒಬ್ಬ ಎಂಎಲ್​ಸಿಯ ಮತ ಸಿಗುವ ನಿರೀಕ್ಷೆಯಿದೆ.

Tumkur Mayor Election: ತುಮಕೂರು ಮೇಯರ್ ಸ್ಥಾನ ಕಾಂಗ್ರೆಸ್​ಗೆ ಒಲಿಯುವ ಸಾಧ್ಯತೆ, ಮೀಸಲಾತಿ ನಿಯಮವೂ ಪೂರಕ
ತುಮಕೂರು ಮಹಾನಗರ ಪಾಲಿಕೆ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 09, 2022 | 9:13 AM

Share

ತುಮಕೂರು: ಮಹಾನಗರ ಪಾಲಿಕೆ ಮೇಯರ್ (Tumkur Mahanagara Palike) ಸ್ಥಾನದ ಚುನಾವಣೆಯು ಶುಕ್ರವಾರ (ಸೆಪ್ಟೆಂಬರ್ 9) ನಡೆಯಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನವು (Mayor) ಒಲಿಯುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಜೆಡಿಎಸ್​ನಲ್ಲಿ ಎಸ್​ಸಿ ಅಭ್ಯರ್ಥಿ ಇಲ್ಲದ ಕಾರಣ ಪಾಲಿಕೆಯ ಮೇಯರ್ ಸ್ಥಾನವು ಕಾಂಗ್ರೆಸ್ ತೆಕ್ಕೆಗೆ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 12, ಜೆಡಿಎಸ್​ನ 10, ಕಾಂಗ್ರೆಸ್​ನ 10 ಮತ್ತು ಮೂವರು ಪಕ್ಷೇತರ ಸದಸ್ಯರಿದ್ದರು. ಕಾಂಗ್ರೆಸ್​ಗೆ ತನ್ನದೇ ಪಕ್ಷದ 10 ಮತಗಳ ಜೊತೆಗೆ ಇಬ್ಬರು ಪಕ್ಷೇತರರು ಮತ್ತು ಒಬ್ಬ ಎಂಎಲ್​ಸಿಯ ಮತ ಸಿಗುವ ನಿರೀಕ್ಷೆಯಿದೆ.

ಕಾಂಗ್ರೆಸ್​ನಲ್ಲಿ ಮೇಯರ್ ಸ್ಥಾನಕ್ಕೆ ಅರ್ಹತೆ ಪಡೆದಿರುವ ಎಸ್​ಸಿ ಮಹಿಳೆ ವಿಭಾಗಕ್ಕೆ ಸೇರಿದ ಇಬ್ಬರು ಸದಸ್ಯರಿದ್ದಾರೆ. ಪ್ರಭಾವತಿ ಸುಧೀಶ್ವರ್ ಮತ್ತು ರೂಪಶ್ರೀ ನಡುವೆ ತೀವ್ರ ಪೈಪೋಟಿಯಿದೆ. ಪಭಾವತಿ ಪತಿ ಸುಧೀಶ್ವರ್ ಈ ಹಿಂದೆ ಮೇಯರ್ ಆಗಿದ್ದರು. ರೂಪಶ್ರೀಗೆ ಉಪಮೇಯರ್ ಆಗಿದ್ದ ಅನುಭವ ಇದೆ. ಒಂದು ವರ್ಷದ ಮೇಯರ್ ಅಧಿಕಾರ ಅವಧಿಯನ್ನು ಇಬ್ಬರ ನಡುವೆ ತಲಾ ಆರು ತಿಂಗಳು ಅಧಿಕಾರ ಹಂಚಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ ಪಕ್ಷದ ವಿರೋಧವೂ ಇಲ್ಲ ಎಂದು ಹೇಳಲಾಗಿದೆ.

ಪ್ರಭಾವತಿ ಸುಧೀಶ್ವರ ಅವರೇ ಮೊದಲ ಹಂತದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಉಪಮೇಯರ್ ಹುದ್ದೆಗೆ ಬಿಸಿಎಂ-ಎ ವರ್ಗಕ್ಕೆ ಮೀಸಲಾತಿ ಘೋಷಿಸಲಾಗಿದೆ. 23ನೇ ವಾರ್ಡ್​ನ ಜೆಡಿಎಸ್​ ಸದಸ್ಯ ತಿಗಳ ಸಮುದಾಯದ ಟಿ.ಕೆ.ನರಸಿಂಹ ಮೂರ್ತಿ ಉಪ-ಮೇಯರ್ ಆಗುವ ಸಾಧ್ಯತೆಯಿದೆ. 20ನೇ ವಾರ್ಡ್​ನ ಎ.ಶ್ರೀನಿವಾಸ್‌, 3ನೇ ವಾರ್ಡ್​ನ ಲಕ್ಷ್ಮೀನರಸಿಂಹರಾಜು ಆಕಾಂಕ್ಷಿಗಳಾಗಿದ್ದರು.

12 ಗಂಟೆಗೆ ನಾಮಪತ್ರ ಸಲ್ಲಿಕೆ

ತುಮಕೂರು ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಇಂದು (ಸೆಪ್ಟೆಂಬರ್ 9) ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮೇಯರ್-ಉಪಮೇಯರ್ ಆಯ್ಕೆಗಾಗಿ ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. ನಿಯಮಗಳಂತೆ ನಾಮಪತ್ರ ಪರಿಶೀಲನೆ, ಉಮೇದುದಾರಿಕೆ ಹಿಂಪಡೆಯುವ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕೈ ಎತ್ತುವ ಮೂಲಕ ಮತದಾನ ನಡೆಸಲಾಗುತ್ತದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Published On - 9:13 am, Fri, 9 September 22

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ