AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ರೇಟ್​ಗೆ ಮೊಬೈಲ್ ಸಿಗುತ್ತೆ ಎಂದು ಲಿಂಕ್ ಕ್ಲಿಕ್ ಮಾಡಿದ, ಮುಂದೇನಾಯ್ತು?

ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್​ಲೈನ್​ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ. ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ […]

ಕಡಿಮೆ ರೇಟ್​ಗೆ ಮೊಬೈಲ್ ಸಿಗುತ್ತೆ ಎಂದು ಲಿಂಕ್ ಕ್ಲಿಕ್ ಮಾಡಿದ, ಮುಂದೇನಾಯ್ತು?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jun 27, 2020 | 2:47 PM

Share

ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್​ಲೈನ್​ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ.

ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ ನವರಂಗಿ ನಾಟಕ ಮಾಡಿದ ಆನ್​ಲೈನ್ ಖದೀಮರು ಯಾವಾಗ ಹಣ ಕ್ರೆಡಿಟ್ ಆಯ್ತೋ ಆಗ ಟಾಟಾ ಬಾಯ್ ಬಾಯ್ ಹೇಳಿದ್ದಾರೆ.

ನಯನ್ ಕುಮಾರ್ ತನ್ನ ಸಹೋದರ ಕಳುಹಿಸಿದ ಲಿಂಕ್ ಒತ್ತಿದ್ದಾರೆ. ಅದರಲ್ಲಿ 80 ಪರ್ಸೆಂಟ್​ ಡಿಸ್ಕೌಂಟ್​ನಲ್ಲಿ ಮೊಬೈಲ್ ದೊರೆಯುತ್ತೆ ಅನ್ನೋ ಮಾಹಿತಿ ನೋಡಿದ್ದಾನೆ. ಇಷ್ಟು ಕಡಿಮೆಗೆ ಮೊಬೈಲ್ ಸಿಗುತ್ತೆ ಅಂತ ಪರ್ಚೇಸ್ ಮಾಡಿಯೇ ಬಿಟ್ಟಿದ್ದಾನೆ. ಯುಪಿಐ ಪಿನ್ ಬಳಸಿ ಯಾವಾಗ ಹಣ ಕಟ್ಟಿದ್ನೋ ಆನಂತರ ಡೊಮೈನ್ ಪರ್ಚೇಸ್ ನೋಟಿಫಿಕೇಷನ್ ಕೂಡ ಬಂದಿಲ್ಲ. ಇತ್ತ ಎಲ್ಲಿಗೆ ಹಣ ಕೊಟ್ಟಿದ್ದೇನೆ ಎನ್ನೋದು ಗೊತ್ತಾಗಿಲ್ಲ.

ಕೊನೆಗೆ ನಯನ್ ಕುಮಾರ್ ತುಮಕೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಡೀಟೇಲ್ಸ್​ ಸಮೇತ ದೂರು ಕೊಡ್ತಾರೆ. ಯುಪಿಐ ಮುಖಾಂತರ ಸ್ವ ಇಚ್ಛೆಯಿಂದ ಹಣ ಕಳುಹಿಸಿದ್ದು ಕಳ್ಳರನ್ನ ಹಿಡಿಯೋದು ಕಷ್ಟ ಅಂತ ಪೊಲೀಸರು ಕೈ ಚಲ್ತಿದ್ದಾರೆ.

Published On - 2:47 pm, Sat, 27 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ