AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ

ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಐಶ್ವರ್ಯಾ ಬಾಗಲಕೋಟೆಯ ಆಕಾಶ್‌ನನ್ನು ಮದುವೆಯಾಗಿದ್ದಾಳೆ. ಮನೆಯವರು ತನಗೆ ಬಾಲ್ಯ ವಿವಾಹ ನಿಗದಿಪಡಿಸಿದ್ದರೂ, ತನಗೆ 18 ವರ್ಷ ತುಂಬುವುದನ್ನೇ ಕಾದಿದ್ದ ಐಶ್ವರ್ಯಾ ಇದೀಗ ಆಕಾಶ್ […]

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ
ಸಾಧು ಶ್ರೀನಾಥ್​
|

Updated on:Oct 07, 2020 | 11:36 AM

Share

ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಐಶ್ವರ್ಯಾ ಬಾಗಲಕೋಟೆಯ ಆಕಾಶ್‌ನನ್ನು ಮದುವೆಯಾಗಿದ್ದಾಳೆ. ಮನೆಯವರು ತನಗೆ ಬಾಲ್ಯ ವಿವಾಹ ನಿಗದಿಪಡಿಸಿದ್ದರೂ, ತನಗೆ 18 ವರ್ಷ ತುಂಬುವುದನ್ನೇ ಕಾದಿದ್ದ ಐಶ್ವರ್ಯಾ ಇದೀಗ ಆಕಾಶ್ ಜೊತೆ ಕಾನೂನುರೀತ್ಯ ಮದುವೆಯಾಗಿದ್ದಾಳೆ.

ಎಸ್ಪಿ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯಾ ತಂದೆ-ಸಹೋದರ ಇನ್ನು ವಿಷಯ ತಿಳಿದ ಐಶ್ವರ್ಯಾ ತಂದೆ, ಮನೆಬಿಟ್ಟು ಬಂದ ಮಗಳನ್ನು ಕರೆದೊಯ್ಯಲು ಬಾಗಲಕೋಟೆಗೆ ಓಡೋಡಿ ಬಂದಿದ್ದಾರೆ. ಮಗಳನ್ನು ವಿವಾಹವಾಗಿರುವ ಪ್ರಿಯಕರ ಆಕಾಶ್​ನ ಕೈಕಾಲು ಹಿಡಿದು ಮಗಳ ಕಳುಹಿಸಿಕೊಡು ಎಂದು ಕಣ್ಣೀರು ಹಾಕಿದ್ದಾರೆ ತಂದೆ ದೇವರಾಜ್. ತಂದೆ ದೇವರಾಜ್ ಜೊತೆಗೆ ಐಶ್ವರ್ಯಾ ಸಹೋದರ ಸಹ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ ಬಾಗಲಕೋಟೆಯ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಐಶ್ವರ್ಯಾ-ಆಕಾಶ್ ಜೋಡಿ ಮದುವೆಯಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಚಿತ್ರದುರ್ಗದ ಕೋಟೆಯಲ್ಲಿ ಭೇಟಿಯಾದಾಗ ಇವರಿಬ್ಬರಲ್ಲಿ ಪ್ರೀತಿ ಅರಳಿತ್ತು. ಪೋನ್ ನಲ್ಲಿ ಆಕಾಶ್-ಐಶ್ವರ್ಯಾ ನಿರಂತರ ಸಂಪರ್ಕ ಜಾರಿಯಲ್ಲಿತ್ತು. ಆಗಾಗ ಬಾಲಕಿ ಐಶ್ವರ್ಯಾ ಇದ್ದಲ್ಲಿಗೆ ಹೋಗಿ ಭೇಟಿ ಸಹ ಮಾಡುತ್ತಿದ್ದ ಆಕಾಶ್.

ಈ ಮಧ್ಯೆ.. 17 ವರ್ಷವಿದ್ದಾಗಲೇ ಬಾಲಕಿ ಐಶ್ವರ್ಯಾಳನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿತ್ತು. ಬಾಲ್ಯ ವಿವಾಹ ಒಪ್ಪದ ಐಶ್ವರ್ಯಾ, ಸೀದಾ ಬಾಗಲಕೋಟೆಗೆ ಬಂದು ತನ್ನ ಇನಿಯನ ಜೊತೆ ಎರಡು ದಿನದ ಹಿಂದೆ ವಿವಾಹವಾಗಿದ್ದಾಳೆ.

ಕುಟುಂಬದಿಂದ ಜೀವ ಬೆದರಿಕೆ ಇದೆ: ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿರುವ ಕಾರಣ ‘ನಮಗೆ ಕುಟುಂಬದವರಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂದು ಪ್ರೇಮಿಗಳು ಎಸ್ ಪಿ ಮೊರೆ ಹೋಗಿದ್ದಾರೆ. ಆಕಾಶ್ ಹಾಗೂ ಐಶ್ವರ್ಯಾ ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.

Published On - 11:33 am, Wed, 7 October 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?