AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ

ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಐಶ್ವರ್ಯಾ ಬಾಗಲಕೋಟೆಯ ಆಕಾಶ್‌ನನ್ನು ಮದುವೆಯಾಗಿದ್ದಾಳೆ. ಮನೆಯವರು ತನಗೆ ಬಾಲ್ಯ ವಿವಾಹ ನಿಗದಿಪಡಿಸಿದ್ದರೂ, ತನಗೆ 18 ವರ್ಷ ತುಂಬುವುದನ್ನೇ ಕಾದಿದ್ದ ಐಶ್ವರ್ಯಾ ಇದೀಗ ಆಕಾಶ್ […]

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ
ಸಾಧು ಶ್ರೀನಾಥ್​
|

Updated on:Oct 07, 2020 | 11:36 AM

Share

ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಐಶ್ವರ್ಯಾ ಬಾಗಲಕೋಟೆಯ ಆಕಾಶ್‌ನನ್ನು ಮದುವೆಯಾಗಿದ್ದಾಳೆ. ಮನೆಯವರು ತನಗೆ ಬಾಲ್ಯ ವಿವಾಹ ನಿಗದಿಪಡಿಸಿದ್ದರೂ, ತನಗೆ 18 ವರ್ಷ ತುಂಬುವುದನ್ನೇ ಕಾದಿದ್ದ ಐಶ್ವರ್ಯಾ ಇದೀಗ ಆಕಾಶ್ ಜೊತೆ ಕಾನೂನುರೀತ್ಯ ಮದುವೆಯಾಗಿದ್ದಾಳೆ.

ಎಸ್ಪಿ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯಾ ತಂದೆ-ಸಹೋದರ ಇನ್ನು ವಿಷಯ ತಿಳಿದ ಐಶ್ವರ್ಯಾ ತಂದೆ, ಮನೆಬಿಟ್ಟು ಬಂದ ಮಗಳನ್ನು ಕರೆದೊಯ್ಯಲು ಬಾಗಲಕೋಟೆಗೆ ಓಡೋಡಿ ಬಂದಿದ್ದಾರೆ. ಮಗಳನ್ನು ವಿವಾಹವಾಗಿರುವ ಪ್ರಿಯಕರ ಆಕಾಶ್​ನ ಕೈಕಾಲು ಹಿಡಿದು ಮಗಳ ಕಳುಹಿಸಿಕೊಡು ಎಂದು ಕಣ್ಣೀರು ಹಾಕಿದ್ದಾರೆ ತಂದೆ ದೇವರಾಜ್. ತಂದೆ ದೇವರಾಜ್ ಜೊತೆಗೆ ಐಶ್ವರ್ಯಾ ಸಹೋದರ ಸಹ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ ಬಾಗಲಕೋಟೆಯ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಐಶ್ವರ್ಯಾ-ಆಕಾಶ್ ಜೋಡಿ ಮದುವೆಯಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಚಿತ್ರದುರ್ಗದ ಕೋಟೆಯಲ್ಲಿ ಭೇಟಿಯಾದಾಗ ಇವರಿಬ್ಬರಲ್ಲಿ ಪ್ರೀತಿ ಅರಳಿತ್ತು. ಪೋನ್ ನಲ್ಲಿ ಆಕಾಶ್-ಐಶ್ವರ್ಯಾ ನಿರಂತರ ಸಂಪರ್ಕ ಜಾರಿಯಲ್ಲಿತ್ತು. ಆಗಾಗ ಬಾಲಕಿ ಐಶ್ವರ್ಯಾ ಇದ್ದಲ್ಲಿಗೆ ಹೋಗಿ ಭೇಟಿ ಸಹ ಮಾಡುತ್ತಿದ್ದ ಆಕಾಶ್.

ಈ ಮಧ್ಯೆ.. 17 ವರ್ಷವಿದ್ದಾಗಲೇ ಬಾಲಕಿ ಐಶ್ವರ್ಯಾಳನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿತ್ತು. ಬಾಲ್ಯ ವಿವಾಹ ಒಪ್ಪದ ಐಶ್ವರ್ಯಾ, ಸೀದಾ ಬಾಗಲಕೋಟೆಗೆ ಬಂದು ತನ್ನ ಇನಿಯನ ಜೊತೆ ಎರಡು ದಿನದ ಹಿಂದೆ ವಿವಾಹವಾಗಿದ್ದಾಳೆ.

ಕುಟುಂಬದಿಂದ ಜೀವ ಬೆದರಿಕೆ ಇದೆ: ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿರುವ ಕಾರಣ ‘ನಮಗೆ ಕುಟುಂಬದವರಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂದು ಪ್ರೇಮಿಗಳು ಎಸ್ ಪಿ ಮೊರೆ ಹೋಗಿದ್ದಾರೆ. ಆಕಾಶ್ ಹಾಗೂ ಐಶ್ವರ್ಯಾ ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.

Published On - 11:33 am, Wed, 7 October 20

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್