AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರ ದಂಡ ಹಾಕೋ ಬಗ್ಗೆ ತಜ್ಞರಿಂದಲೇ ಬೇಸರ, ಇಲ್ಲಿವರೆಗೆ ವಸೂಲಿಯಾದ ಮೊತ್ತ ಎಷ್ಟು ಗೊತ್ತಾ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ನರ್ತನ ಕಡಿಮೆಯಾಗುವ ಸುಳಿವೇ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಾಗುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ನಿಟ್ಟಿನಲ್ಲಿ ಬಿಬಿಎಂಪಿ ಮಾಸ್ಕ್ ಹಾಕದವರಿಗೆ 1 ಸಾವಿರ ರೂಪಾಯಿ ದಂಡ ಹಾಕುತ್ತಿದೆ. ಆದರೆ ಬಿಬಿಎಂಪಿಯ ಈ ನಿಲುವು ಅನೇಕರಿಗೆ ಅಸಮಾಧಾನ/ ಆಕ್ರೋಶ ತಂದಿದೆ. 1 ಸಾವಿರ ದಂಡ ಹಾಕೋ ಬಗ್ಗೆ ತಜ್ಞರು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಸಾವಿರ ರೂ ದಂಡದ ಜೊತೆಗೆ ಮಾಸ್ಕ್ ನೀಡಿ: ಹೌದು ಕೊರೊನಾ […]

ಸಾವಿರ ದಂಡ ಹಾಕೋ ಬಗ್ಗೆ ತಜ್ಞರಿಂದಲೇ ಬೇಸರ, ಇಲ್ಲಿವರೆಗೆ ವಸೂಲಿಯಾದ ಮೊತ್ತ ಎಷ್ಟು ಗೊತ್ತಾ?
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on: Oct 07, 2020 | 12:18 PM

Share

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ನರ್ತನ ಕಡಿಮೆಯಾಗುವ ಸುಳಿವೇ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಾಗುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ನಿಟ್ಟಿನಲ್ಲಿ ಬಿಬಿಎಂಪಿ ಮಾಸ್ಕ್ ಹಾಕದವರಿಗೆ 1 ಸಾವಿರ ರೂಪಾಯಿ ದಂಡ ಹಾಕುತ್ತಿದೆ. ಆದರೆ ಬಿಬಿಎಂಪಿಯ ಈ ನಿಲುವು ಅನೇಕರಿಗೆ ಅಸಮಾಧಾನ/ ಆಕ್ರೋಶ ತಂದಿದೆ. 1 ಸಾವಿರ ದಂಡ ಹಾಕೋ ಬಗ್ಗೆ ತಜ್ಞರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಸಾವಿರ ರೂ ದಂಡದ ಜೊತೆಗೆ ಮಾಸ್ಕ್ ನೀಡಿ: ಹೌದು ಕೊರೊನಾ ಸಂಕಷ್ಟದಿಂದ ಹೊಡೆತ ತಿಂದ ಜನ ಮೆಲ್ಲನೆ ಸುಧಾರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಬಿಎಂಪಿ ಸಾವಿರ ರೂಪಾಯಿಗಳ ದಂಡ ವಸೂಲಿ ಮಾಡುತ್ತಿದೆ. ಹೀಗಾಗಿ ಮಾಸ್ಕ್ ಹಾಕದವರ ಬಳಿ 1 ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಜೊತೆಗೆ ಮಾಸ್ಕ್ ನೀಡಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದಂಡ ಹಾಕಿಸಿಕೊಂಡ ವ್ಯಕ್ತಿಗೆ ಸರ್ಕಾರವೇ ಮಾಸ್ಕ್ ನೀಡಬೇಕು. 10 ಮಾಸ್ಕ್​ಗಳನ್ನ ಉಚಿತವಾಗಿ ನೀಡಬೇಕು. ಆ ಮೂಲಕ ಅರಿವು ಮೂಡಿಸೋದ್ರ ಜೊತೆಗೆ ಅನುಕೂಲ ಕೂಡಾ ಆಗಲಿದೆ. ಬರೀ ದಂಡ ಹಾಕೋದ್ರಿಂದ ಅನಾನುಕೂಲವಾಗಲಿದೆ ಎಂದು ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ದಂಡದ ಜೊತೆಗೆ ಮಾಸ್ಕ್ ನೀಡಿದಾಗ ಮಾತ್ರ ದುಬಾರಿ ದಂಡ ಪ್ರಯೋಗ ಯಶಸ್ವಿಯಾಗಲಿದೆ. ಬರೀ ದಂಡ ಹಾಕೋದ್ರಿಂದ ಜನ ಸಿಟ್ಟಿಗೇಳೋ ಸಾಧ್ಯತೆ ಇದೆ. ಮಾರ್ಷಲ್​ಗಳಿಗೆ ಸರ್ಕಾರ ಮಾಸ್ಕ್​ಗಳನ್ನ ಕೊಟ್ಟು ಅರಿವು ಮೂಡಿಸಬೇಕು. ಸಾರ್ವಜನಿಕರ ಬಳಿ ದಂಡ ವಸೂಲಿ ಮಾಡುವುದು ಅರಿವು ಮೂಡಿಸೋ ಕ್ರಮವಾಗಬೇಕೇ ವಿನಃ ದುಡ್ಡು ವಸೂಲಿ ಮಾಡೋಹಾಗಾಗಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇನ್ನು ಅಕ್ಟೋಬರ್ 2 ರಿಂದ ಒಂದು ಸಾವಿರ ರೂಪಾಯಿ ದಂಡ ಜಾರಿಯಾಗಿದೆ. ಹಾಗಿದ್ರೆ ಇಲ್ಲಿಯ ವರೆಗೆ ವಸೂಲಿಯಾಗಿರುವ ದಂಡವೆಷ್ಟು ಅಂದ್ರೆ.. ಅಕ್ಟೋಬರ್ 2 ರಂದು ಅಂದ್ರೆ ಮೊದಲ ದಿನವೇ 5,65,200 ದಂಡ ವಸೂಲಿಯಾಗಿದೆ. ನಂತರ ಅ.3 ರಂದು 403767,ಅ.4 ರಂದು 4,36,067, ಅ.5 ರಂದು 4,78,000, ಅ.6 ರಂದು 5,50,000.

ಕಳೆದ ಐದು ದಿನದಲ್ಲಿ 24,33,034 ರೂಪಾಯಿ ಸಂಗ್ರಹವಾಗಿದೆ. ಜೂನ್ 6 ರಿಂದ ನಿನ್ನೆ ವರೆಗೂ ಒಟ್ಟು 2,97,14,055 ರೂಪಾಯಿ ದಂಡ ವಸೂಲಿಯಾಗಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಂದ 2 ಕೋಟಿ 97 ಲಕ್ಷ ದಂಡ ವಸೂಲಿಯಾಗಿದೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ