ಟಂಟಂ-ಲಾರಿ ಡಿಕ್ಕಿ, ಮದುವೆಗೆ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು

ಯಾದಗಿರಿ: ಟಂಟಂ ವಾಹನ ಹಾಗೂ ಲಾರಿ ಮುಖಾಮುಕಿ ಡಿಕ್ಕಿಯಾಗಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಬಳಿ ನಿನ್ನೆ ತಡ ರಾತ್ರಿ ನಡೆದಿದೆ. ನಿನ್ನೆ ತಡ ರಾತ್ರಿ ಬಳಿಚಕ್ರ ತಾಂಡದಿಂದ ಬದ್ದೇಪಲ್ಲಿ ತಾಂಡಗೆ ಟಂಟಂ ವಾಹನದಲ್ಲಿ ಮದುವೆಗೆ ಎಂದು ಹೋಗುತ್ತಿದ್ದವರ ಮೇಲೆ ಯಮರಾಯನ ಕಣ್ಣು ಬಿದ್ದಿದೆ. ಲಾರಿ ಚಾಲಕನ ಅತಿವೇಗದ ಚಾಲನೆ ಟಂಟಂ ವಾಹನದಲ್ಲಿ ಮದುವೆಗೆ ಹೋಗುತ್ತಿದ್ದ 40 ವರ್ಷದ ಠಾಕ್ರ್ಯಾ ಮತ್ತು 35 ವರ್ಷದ ಚನ್ನ್ಯಾ ಎಂಬ ಇಬ್ಬರ ಬಲಿ […]

ಟಂಟಂ-ಲಾರಿ ಡಿಕ್ಕಿ, ಮದುವೆಗೆ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು
ಸಾಧು ಶ್ರೀನಾಥ್​

Updated on: Oct 22, 2019 | 12:06 PM

ಯಾದಗಿರಿ: ಟಂಟಂ ವಾಹನ ಹಾಗೂ ಲಾರಿ ಮುಖಾಮುಕಿ ಡಿಕ್ಕಿಯಾಗಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಬಳಿ ನಿನ್ನೆ ತಡ ರಾತ್ರಿ ನಡೆದಿದೆ.

ನಿನ್ನೆ ತಡ ರಾತ್ರಿ ಬಳಿಚಕ್ರ ತಾಂಡದಿಂದ ಬದ್ದೇಪಲ್ಲಿ ತಾಂಡಗೆ ಟಂಟಂ ವಾಹನದಲ್ಲಿ ಮದುವೆಗೆ ಎಂದು ಹೋಗುತ್ತಿದ್ದವರ ಮೇಲೆ ಯಮರಾಯನ ಕಣ್ಣು ಬಿದ್ದಿದೆ. ಲಾರಿ ಚಾಲಕನ ಅತಿವೇಗದ ಚಾಲನೆ ಟಂಟಂ ವಾಹನದಲ್ಲಿ ಮದುವೆಗೆ ಹೋಗುತ್ತಿದ್ದ 40 ವರ್ಷದ ಠಾಕ್ರ್ಯಾ ಮತ್ತು 35 ವರ್ಷದ ಚನ್ನ್ಯಾ ಎಂಬ ಇಬ್ಬರ ಬಲಿ ಪಡೆದಿದೆ ಹಾಗೂ ಆರು ಮಂದಿಗೆ ಗಂಭೀರ ಗಾಯಗಳಾಗಿವೆ.

ಲಾರಿ ಚಾಲಕ ಪರಾರಿ:
ಘಟನೆ ಬಳಿಕ ಲಾರಿ ಚಾಲಕ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಯಾಳುಗಳನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಈ ಸಂಭಂದ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Published On - 10:42 am, Tue, 22 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us