ನಮ್ಮ ಕರಾವಳಿ ಬೀಚ್​​ಗಳನ್ನು ಮಾಲ್ಡೀವ್ಸ್​ಗೆ ಪರ್ಯಾಯ ಮಾಡುವ ಮೊದಲು ಸ್ಥಳೀಯರ ಅಹವಾಲು ಕೇಳಿ

ಪಡುಕೆರೆ ಬೀಚ್ ನಲ್ಲಿ ಹೋಂಸ್ಟೇ ಗಳಿಗೆ ಕಡಿವಾಣ ಹಾಕಲು ಜನ ಒತ್ತಾಯಿಸಿದ್ದಾರೆ. ಪಡುಕೆರೆ ಕಡೆಕಾರು ನಡುವೆ ಅಂದಾಜು 15 ಹೋಂಸ್ಟೇಗಳಿಗೆ. ನಮ್ಮ ಸಂಸ್ಕೃತಿ ಹಾಳಾಗುತ್ತದೆ. ಮದ್ಯಪಾನ, ಅಮಲು ಡ್ರಗ್ಸ್ ಗಾಂಜಾ ಸೇವನೆಯ ಆತಂಕವನ್ನು ಮಹಿಳೆಯರು ಹೊರಹಾಕಿದ್ದಾರೆ. ಹೋಂಸ್ಟೇ ಗಳು ಅನೈತಿಕ ಚಟುವಟಿಕೆಗಳ ತಾಣ ಅನ್ನೋದು ಗ್ರಾಮಸ್ಥರ ಸಂಶಯ.

ನಮ್ಮ ಕರಾವಳಿ ಬೀಚ್​​ಗಳನ್ನು ಮಾಲ್ಡೀವ್ಸ್​ಗೆ ಪರ್ಯಾಯ ಮಾಡುವ ಮೊದಲು ಸ್ಥಳೀಯರ ಅಹವಾಲು ಕೇಳಿ
ನಮ್ಮ ಬೀಚ್​​ ಮಾಲ್ಡೀವ್ಸ್​ಗೆ ಪರ್ಯಾಯ ಮಾಡುವ ಮೊದಲು ಸ್ಥಳೀಯರ ಅಹವಾಲು ಕೇಳಿ
Follow us
| Updated By: ಸಾಧು ಶ್ರೀನಾಥ್​

Updated on:Mar 09, 2024 | 9:05 AM

ಮಲ್ಪೆ ಸಮೀಪದ ಪ್ರವಾಸಿ ತಾಣದಲ್ಲಿ ಹೊಸ ವಿವಾದವೊಂದು ಎದ್ದಿದೆ. ಪಡುಕೆರೆ ಕಡಲ ತೀರದಲ್ಲಿ ಇರುವ ಹೋಮ್ ಸ್ಟೇಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ನೈತಿಕತೆ ಮತ್ತು ಕಾನೂನಿನ ಪ್ರಶ್ನೆ ಎತ್ತಿದ್ದಾರೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಹೋಮ್ ಸ್ಟೇ ಕಾಟೇಜ್ ಮಾಡಿದವರು ಆತಂಕಕ್ಕೊಳಗಾಗಿದ್ದಾರೆ.

ಇತ್ತೀಚೆಗೆ ಮಾಲ್ಡೀವ್ಸ್ ವಿಚಾರದಲ್ಲಿ ವಿವಾದ ಎದ್ದಾಗ ನಾವ್ಯಾಕೆ ನಮ್ಮ ಕರಾವಳಿಯ ಬೀಚ್ ಗಳ ಬಗ್ಗೆ ಗಮನಹರಿಸಲ್ಲ… ವಿದೇಶವನ್ನು ಮೀರಿಸುವ ಬೀಚ್ ನಮ್ಮಲ್ಲಿರುವಾಗ ಅದ್ಯಾಕೆ ಪ್ರವಾಸೋದ್ಯಮವನ್ನು ಅಟ್ರಾಕ್ಟ್ ಮಾಡುವಲ್ಲಿ ಹಿಂದೆ ಬಿದ್ದಿದ್ದೇವೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ವಿದೇಶಕ್ಕೆ ಹೋದದ್ದು ಸಾಕು ಬನ್ನಿ ನಮ್ಮ ಬೀಚ್ ಗಳಿಗೆ ಎಂದು ಜನಪ್ರತಿನಿಧಿಗಳು ಆಹ್ವಾನವನ್ನು ಕೂಡ ನೀಡಿದರು.

ಈ ನಡುವೆ ಸಮಸ್ಯೆಯೊಂದು ಶುರುವಾಗಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಹೋದರೆ ಯಾವ ರೀತಿಯಲ್ಲೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಉಡುಪಿಯ ಮಲ್ಪೆ ಸಮೀಪದ ಪಡುಕರೆಯಲ್ಲಿ, ಪ್ರವಾಸಿಗಳಿಗಾಗಿ ನಿರ್ಮಾಣಗೊಂಡಿರುವ ಹೋಂ ಸ್ಟೇ ಗಳಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ತಡರಾತ್ರಿ ನಂತರ ಹೋಂ ಸ್ಟೇಯಲ್ಲಿ ಉಳಿದುಕೊಂಡ ಪ್ರವಾಸಿಗರು ನಿಯಮಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಪಡುಕೆರೆ ಬೀಚ್ ನಲ್ಲಿ ಹೋಂಸ್ಟೇ ಗಳಿಗೆ ಕಡಿವಾಣ ಹಾಕಲು ಜನ ಒತ್ತಾಯಿಸಿದ್ದಾರೆ. ಪಡುಕೆರೆ ಕಡೆಕಾರು ನಡುವೆ ಅಂದಾಜು 15 ಹೋಂಸ್ಟೇಗಳಿಗೆ. ನಮ್ಮ ಸಂಸ್ಕೃತಿ ಹಾಳಾಗುತ್ತದೆ. ಮದ್ಯಪಾನ, ಅಮಲು ಡ್ರಗ್ಸ್ ಗಾಂಜಾ ಸೇವನೆಯ ಆತಂಕವನ್ನು ಮಹಿಳೆಯರು ಹೊರಹಾಕಿದ್ದಾರೆ. ಹೋಂಸ್ಟೇ ಗಳು ಅನೈತಿಕ ಚಟುವಟಿಕೆಗಳ ತಾಣ ಅನ್ನೋದು ಗ್ರಾಮಸ್ಥರ ಸಂಶಯ.

ಈ ಬೆಳವಣಿಗೆ ಹೋಂಸ್ಟೇ ಮಾಲೀಕರ ನಿದ್ದೆಗೆಡಿಸಿದೆ. ಕೆಲವರು ನೆಮ್ಮದಿಯಿಂದ ವ್ಯವಹಾರ ಮಾಡೋಕೆ ಬಿಡಲ್ಲ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಸೂಚನೆಗೆ ಅನುಗುಣವಾಗಿ ಹೋಂಸ್ಟೇ ನಡೆಸುತ್ತಿದ್ದೇವೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಮಾತ್ರ ಹೋಂಸ್ಟೇ ಇದೆ. ಎನ್ಒಸಿ ಪರ್ಮಿಷನ್ ಪಡೆದೇ ಹೋಮ್ ಸ್ಟೇ ನಡೆಸುತ್ತಿದ್ದೇವೆ ಅಂತಿದ್ದಾರೆ ಹೋಂ ಸ್ಟೇ ಮಾಲೀಕರು.

ಇದನ್ನೂ ಓದಿ:    Shivaratri Special Recipe : ಮಹಾಶಿವರಾತ್ರಿಗೆ ಸಬ್ಬಕ್ಕಿಯ ಈ ರೆಸಿಪಿಗಳನ್ನು ಮಿಸ್ ಮಾಡ್ಲೆಬೇಡಿ, ಇಲ್ಲಿದೆ ಸಿಂಪಲ್ ರೆಸಿಪಿ

ಸಾರ್ವಜನಿಕ ರಸ್ತೆ ಆಗಿರುವ ಕಾರಣ ಪೊಲೀಸ್ ಬೀಟ್ ಜಾಸ್ತಿ ಮಾಡಬೇಕೆಂಬ ಒತ್ತಾಯವಿದೆ. ಗ್ರಾಮಸ್ಥರು ಸಭೆ ನಡೆಸಿ ಶಾಸಕ ಯಶ್ ಪಾಲ್ ಸುವರ್ಣ ಮುಂದೆ ಸಮಸ್ಯೆ ತೋಡಿಕೊಂಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಗುರಿ ಒಂದೆಡೆ. ಗ್ರಾಮದಲ್ಲಿ ಯಾವುದೇ ಹೋಂ ಸ್ಟೇಗಳು ಇರಬಾರದು ಎಂಬ ಒತ್ತಾಯ ಮತ್ತೊಂದೆಡೆ. ಹೀಗಾದರೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಹೇಗೆ? ಎರಡು ಕಡೆಯವರ ಸಭೆ ನಡೆಸಿ ನಿಯಮಗಳನ್ನ ರೂಪಿಸಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:51 am, Sat, 9 March 24

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​