AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಭಯ! ಭಕ್ತರಿಗಿಲ್ಲ ತಪ್ತ ಮುದ್ರಾಧಾರಣೆ ಭಾಗ್ಯ..

ಉಡುಪಿ: ಕೃಷ್ಣನಗರಿಯಲ್ಲಿ ಪರ್ಯಾಯ, ಅಷ್ಟಮಿ ಬಿಟ್ರೆ ತಪ್ತ ಮುದ್ರಾಧಾರಣೆ ಉಡುಪಿ ಜನತೆಗೆ ಬಹುದೊಡ್ಡ ಸಂಭ್ರಮದ ಕ್ಷಣ.‌ ಈ ಮುದ್ರಾಧಾರಣೆಯಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಭಕ್ತಿಯಿಂದ ಪಾಲ್ಗೊಳ್ತಾರೆ. ಆದ್ರೆ ಈ ಬಾರಿ ಮಾತ್ರ ಭಕ್ತರಿಗೆ ಈ ಭಾಗ್ಯ ಇಲ್ಲ. ಇದಕ್ಕೆ ಕಾರಣ ಕೊರೊನಾ. ಹೌದು, ಉಡುಪಿಯಲ್ಲಿ ತಪ್ತ ಮುದ್ರಾಧಾರಣೆ ಆಚರಣೆ ಪ್ರಮುಖ ಧಾರ್ಮಿಕ ಆಚರಣೆ. ಕಾರಣ ಶ್ರೀ ಕೃಷ್ಣನ ಆಯುಧಗಳಾದ ಶಂಖ ಹಾಗೂ ಚಕ್ರವನ್ನ ಹೋಮ ಕುಂಡದಲದಲ್ಲಿರುವ ಬೆಂಕಿಯಲ್ಲಿಟ್ಟು ಪೂಜಿಸಿ ಅದಕ್ಕೆ‌ ಶಕ್ತಿ ತುಂಬಲಾಗುತ್ತೆ. ನಂತರ […]

ಕೊರೊನಾ ಭಯ! ಭಕ್ತರಿಗಿಲ್ಲ ತಪ್ತ ಮುದ್ರಾಧಾರಣೆ ಭಾಗ್ಯ..
Guru
| Edited By: |

Updated on:Jun 24, 2020 | 4:56 PM

Share

ಉಡುಪಿ: ಕೃಷ್ಣನಗರಿಯಲ್ಲಿ ಪರ್ಯಾಯ, ಅಷ್ಟಮಿ ಬಿಟ್ರೆ ತಪ್ತ ಮುದ್ರಾಧಾರಣೆ ಉಡುಪಿ ಜನತೆಗೆ ಬಹುದೊಡ್ಡ ಸಂಭ್ರಮದ ಕ್ಷಣ.‌ ಈ ಮುದ್ರಾಧಾರಣೆಯಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಭಕ್ತಿಯಿಂದ ಪಾಲ್ಗೊಳ್ತಾರೆ. ಆದ್ರೆ ಈ ಬಾರಿ ಮಾತ್ರ ಭಕ್ತರಿಗೆ ಈ ಭಾಗ್ಯ ಇಲ್ಲ. ಇದಕ್ಕೆ ಕಾರಣ ಕೊರೊನಾ.

ಹೌದು, ಉಡುಪಿಯಲ್ಲಿ ತಪ್ತ ಮುದ್ರಾಧಾರಣೆ ಆಚರಣೆ ಪ್ರಮುಖ ಧಾರ್ಮಿಕ ಆಚರಣೆ. ಕಾರಣ ಶ್ರೀ ಕೃಷ್ಣನ ಆಯುಧಗಳಾದ ಶಂಖ ಹಾಗೂ ಚಕ್ರವನ್ನ ಹೋಮ ಕುಂಡದಲದಲ್ಲಿರುವ ಬೆಂಕಿಯಲ್ಲಿಟ್ಟು ಪೂಜಿಸಿ ಅದಕ್ಕೆ‌ ಶಕ್ತಿ ತುಂಬಲಾಗುತ್ತೆ. ನಂತರ ಈ ಪವಿತ್ರ ಶಂಖ ಚಕ್ರವನ್ನು ಅಷ್ಟ ಮಠಾಧೀಶರು ಭಕ್ತರಿಗೆ ಮುದ್ರಾಧಾರಣೆ‌ ರೂಪದಲ್ಲಿ‌ ಮಾಡುತ್ತಾರೆ. ಈ ಮುದ್ರಾಧಾರಣೆ ಹಾಕಿಸಿಕೊಳ್ಳಲು ಸಾವಿರಾರು ಭಕ್ತರು‌ ಕೃಷ್ಣ ಮಠ‌ ಸೇರಿದಂತೆ ಎಲ್ಲಾ ಎಂಟು ಮಠಗಳಿಗೆ ತೆರಳುತ್ತಾರೆ.

ಕೊರೊನಾ ಭಯ, ಇನ್ನೂ ತೆರೆಯದ ಶ್ರೀಕೃಷ್ಣ ಮಠ ಆದರೆ ಇಂತಹ ಮಹತ್ವದ ಕ್ಷಣ ಈ ಬಾರಿ ಉಡುಪಿಯಲ್ಲಿ ಇರೋದಿಲ್ಲ.‌ ಈ ಬಾರಿ ಜುಲೈ ಒಂದರ ಪ್ರಥಮ ಏಕಾದಶಿಯಂದು‌ ನಡೆಯುವ ಸಾಂಪ್ರದಾಯಿಕ ಆಚರಣೆ ಮುದ್ರಾಧಾರಣೆಯನ್ನು ಯತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.‌ ಕೊರೊನಾ ಹಿನ್ನೆಲೆಯಲ್ಲಿ ‌ಇನ್ನೂ ಶ್ರೀಕೃಷ್ಣ ಮಠ‌ ತೆರೆಯಲಾಗಿಲ್ಲ.‌

ಮುದ್ರಾಧಾರಣೆ ಇದ್ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ‌ ಆಗಮಿಸುವ ಕಾರಣ ಮುದ್ರಾಧಾರಣೆಯನ್ನ ಯತಿಗಳಿಗೆ ಹಾಗೂ ಮಠದ ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮುಂದಿನ ಶುಭ ದಿನಗಳಂದು ಭಕ್ತರಿಗೆ ಮುದ್ರಾಧಾರಣೆ ಮಾಡಲಾಗುವುದು ಎಂದು ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ತಿಳಿಸಿದೆ -ಹರೀಶ್ ಪಾಲೆಚ್ಚಾರ್

Published On - 4:56 pm, Wed, 24 June 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ