AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಭಯ! ಭಕ್ತರಿಗಿಲ್ಲ ತಪ್ತ ಮುದ್ರಾಧಾರಣೆ ಭಾಗ್ಯ..

ಉಡುಪಿ: ಕೃಷ್ಣನಗರಿಯಲ್ಲಿ ಪರ್ಯಾಯ, ಅಷ್ಟಮಿ ಬಿಟ್ರೆ ತಪ್ತ ಮುದ್ರಾಧಾರಣೆ ಉಡುಪಿ ಜನತೆಗೆ ಬಹುದೊಡ್ಡ ಸಂಭ್ರಮದ ಕ್ಷಣ.‌ ಈ ಮುದ್ರಾಧಾರಣೆಯಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಭಕ್ತಿಯಿಂದ ಪಾಲ್ಗೊಳ್ತಾರೆ. ಆದ್ರೆ ಈ ಬಾರಿ ಮಾತ್ರ ಭಕ್ತರಿಗೆ ಈ ಭಾಗ್ಯ ಇಲ್ಲ. ಇದಕ್ಕೆ ಕಾರಣ ಕೊರೊನಾ. ಹೌದು, ಉಡುಪಿಯಲ್ಲಿ ತಪ್ತ ಮುದ್ರಾಧಾರಣೆ ಆಚರಣೆ ಪ್ರಮುಖ ಧಾರ್ಮಿಕ ಆಚರಣೆ. ಕಾರಣ ಶ್ರೀ ಕೃಷ್ಣನ ಆಯುಧಗಳಾದ ಶಂಖ ಹಾಗೂ ಚಕ್ರವನ್ನ ಹೋಮ ಕುಂಡದಲದಲ್ಲಿರುವ ಬೆಂಕಿಯಲ್ಲಿಟ್ಟು ಪೂಜಿಸಿ ಅದಕ್ಕೆ‌ ಶಕ್ತಿ ತುಂಬಲಾಗುತ್ತೆ. ನಂತರ […]

ಕೊರೊನಾ ಭಯ! ಭಕ್ತರಿಗಿಲ್ಲ ತಪ್ತ ಮುದ್ರಾಧಾರಣೆ ಭಾಗ್ಯ..
Guru
Guru| Edited By: ಸಾಧು ಶ್ರೀನಾಥ್​|

Updated on:Jun 24, 2020 | 4:56 PM

Share

ಉಡುಪಿ: ಕೃಷ್ಣನಗರಿಯಲ್ಲಿ ಪರ್ಯಾಯ, ಅಷ್ಟಮಿ ಬಿಟ್ರೆ ತಪ್ತ ಮುದ್ರಾಧಾರಣೆ ಉಡುಪಿ ಜನತೆಗೆ ಬಹುದೊಡ್ಡ ಸಂಭ್ರಮದ ಕ್ಷಣ.‌ ಈ ಮುದ್ರಾಧಾರಣೆಯಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಭಕ್ತಿಯಿಂದ ಪಾಲ್ಗೊಳ್ತಾರೆ. ಆದ್ರೆ ಈ ಬಾರಿ ಮಾತ್ರ ಭಕ್ತರಿಗೆ ಈ ಭಾಗ್ಯ ಇಲ್ಲ. ಇದಕ್ಕೆ ಕಾರಣ ಕೊರೊನಾ.

ಹೌದು, ಉಡುಪಿಯಲ್ಲಿ ತಪ್ತ ಮುದ್ರಾಧಾರಣೆ ಆಚರಣೆ ಪ್ರಮುಖ ಧಾರ್ಮಿಕ ಆಚರಣೆ. ಕಾರಣ ಶ್ರೀ ಕೃಷ್ಣನ ಆಯುಧಗಳಾದ ಶಂಖ ಹಾಗೂ ಚಕ್ರವನ್ನ ಹೋಮ ಕುಂಡದಲದಲ್ಲಿರುವ ಬೆಂಕಿಯಲ್ಲಿಟ್ಟು ಪೂಜಿಸಿ ಅದಕ್ಕೆ‌ ಶಕ್ತಿ ತುಂಬಲಾಗುತ್ತೆ. ನಂತರ ಈ ಪವಿತ್ರ ಶಂಖ ಚಕ್ರವನ್ನು ಅಷ್ಟ ಮಠಾಧೀಶರು ಭಕ್ತರಿಗೆ ಮುದ್ರಾಧಾರಣೆ‌ ರೂಪದಲ್ಲಿ‌ ಮಾಡುತ್ತಾರೆ. ಈ ಮುದ್ರಾಧಾರಣೆ ಹಾಕಿಸಿಕೊಳ್ಳಲು ಸಾವಿರಾರು ಭಕ್ತರು‌ ಕೃಷ್ಣ ಮಠ‌ ಸೇರಿದಂತೆ ಎಲ್ಲಾ ಎಂಟು ಮಠಗಳಿಗೆ ತೆರಳುತ್ತಾರೆ.

ಕೊರೊನಾ ಭಯ, ಇನ್ನೂ ತೆರೆಯದ ಶ್ರೀಕೃಷ್ಣ ಮಠ ಆದರೆ ಇಂತಹ ಮಹತ್ವದ ಕ್ಷಣ ಈ ಬಾರಿ ಉಡುಪಿಯಲ್ಲಿ ಇರೋದಿಲ್ಲ.‌ ಈ ಬಾರಿ ಜುಲೈ ಒಂದರ ಪ್ರಥಮ ಏಕಾದಶಿಯಂದು‌ ನಡೆಯುವ ಸಾಂಪ್ರದಾಯಿಕ ಆಚರಣೆ ಮುದ್ರಾಧಾರಣೆಯನ್ನು ಯತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.‌ ಕೊರೊನಾ ಹಿನ್ನೆಲೆಯಲ್ಲಿ ‌ಇನ್ನೂ ಶ್ರೀಕೃಷ್ಣ ಮಠ‌ ತೆರೆಯಲಾಗಿಲ್ಲ.‌

ಮುದ್ರಾಧಾರಣೆ ಇದ್ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ‌ ಆಗಮಿಸುವ ಕಾರಣ ಮುದ್ರಾಧಾರಣೆಯನ್ನ ಯತಿಗಳಿಗೆ ಹಾಗೂ ಮಠದ ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮುಂದಿನ ಶುಭ ದಿನಗಳಂದು ಭಕ್ತರಿಗೆ ಮುದ್ರಾಧಾರಣೆ ಮಾಡಲಾಗುವುದು ಎಂದು ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ತಿಳಿಸಿದೆ -ಹರೀಶ್ ಪಾಲೆಚ್ಚಾರ್

Published On - 4:56 pm, Wed, 24 June 20

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್