AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧವೆಯನ್ನು ಮದುವೆಯಾದ ನುಡಿ ನೀಡಿದ ದೈವ ನರ್ತಕ: ಸ್ವತಃ ಸ್ಪಷ್ಟನೆ ನೀಡಿದ ಬೆಳಗಾವಿ ಮೂಲದ ಮಹಿಳೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ನರ್ತಕನ ಸಹೋದರ ನಿನ್ನೆ ಸ್ಪಷ್ಟನೆ ನೀಡಿದ್ದರು, ಇದೀಗ ಮಹಿಳೆ ಸ್ಪಷ್ಟನೆ ನೀಡಿದ್ದಾರೆ.

ವಿಧವೆಯನ್ನು ಮದುವೆಯಾದ ನುಡಿ ನೀಡಿದ ದೈವ ನರ್ತಕ: ಸ್ವತಃ ಸ್ಪಷ್ಟನೆ ನೀಡಿದ ಬೆಳಗಾವಿ ಮೂಲದ ಮಹಿಳೆ
ಮಹಿಳೆಯ ಮುಂದೆ ನುಡಿ ನೀಡುತ್ತಿರುವ ದೈವ ನರ್ತಕ
TV9 Web
| Edited By: Rakesh Nayak Manchi|

Updated on:Feb 05, 2023 | 3:16 PM

Share

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿತ್ತು. ಈ ಬಗ್ಗೆ ನರ್ತಕನ ಸಹೋದರ ನಿನ್ನೆ ಸ್ಪಷ್ಟನೆ ನೀಡಿದ್ದರು. ಇದೀಗ ತಮ್ಮ ವಿರುದ್ಧದ ಆರೋಪದ ಬಗ್ಗೆ ಸ್ವತಃ ಮಹಿಳೆಯೇ ಸ್ಪಷ್ಟನೆ ನೀಡಿದ್ದಾರೆ. ನನಗು ನರ್ತಕರಿಗೂ ಯಾವುದೇ ಸಂಬಂಧವಿಲ್ಲ. ನನಗು ಅವರಿಗೂ ಮದುವೆ ಆಗಿಲ್ಲ, ನಾನು ನಮ್ಮ ಊರಲ್ಲಿ ನನ್ನ ತಾಯಿಯೊಂದಿಗೆ ಇದ್ದೇನೆ. ಯಾರೋ ಬೇಕಂತಲೆ ಈ ರೀತಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ಮಹಿಳೆ ವರ್ಷ ಹೇಳಿದ್ದಾರೆ.

ನಿನ್ನೆ (ಫೆ.4) ಸ್ಪಷ್ಟನೆ ನೀಡಿದ್ದ ನರ್ತಕ ಚಂದ್ರಹಾಸ ಸಹೋದರ ವಿನೋದ್ ನಾಯ್ಕ, ಚಂದ್ರಹಾಸ ಆಕೆಯನ್ನು ಮದುವೆ ಆಗಿಲ್ಲ. ಬೆಳಗಾವಿ ಮೂಲದ ಮಹಿಳೆ ದೈವಕ್ಕೆ ನಡೆದುಕೊಳ್ಳುವ ಭಕ್ತರಲ್ಲಿ ಒಬ್ಬಳು. ಆಕೆಗೂ ನಮ್ಮ ಸಹೋದರನಿಗೆ ಸಂಬಂಧವಿಲ್ಲ. ಆಕೆಯ ಗಂಡ ಎರಡು ವರ್ಷದ ಹಿಂದೆ ಕೊರೊನ ಸಂದರ್ಭದಲ್ಲಿ ಮೃತನಾಗಿದ್ದಾನೆ. ತನ್ನ ಕಷ್ಟ ಪರಿಹಾರಕ್ಕಾಗಿ ಇಲ್ಲಿಗೆ ದೈವದ ಆರಾಧನೆಗೆ ಬರುತ್ತಿದ್ದಳು. ಆಕೆ ಯಾರು ಎಂಬುವುದು ನಮಗೆ ಗೊತ್ತಿಲ್ಲ. ಒಂದು ವೇಳೆ ಮದುವೆ ಎನ್ನುವ ವಿಚಾರ ಬಂದರೆ ನಾವು ಒಪ್ಪುವುದಿಲ್ಲ. ಚಂದ್ರಹಾಸನಿಗೆ ಎರಡು ಮಕ್ಕಳಿದ್ದಾರೆ. ಮಗಳಿಗೆ ಮದುವೆ ವಯಸ್ಸು, ಈ ವಯಸ್ಸಿನಲ್ಲಿ ತಂದೆಗೆ ಮದುವೆ ಮಾಡಲಿಕ್ಕೆ ಆಗುತ್ತಾ? ಹೀಗೆ ಮದುವೆ ಆದರೆ ಒಪ್ಪುವುದಕ್ಕಾದರೂ ಆಗುತ್ತಾ? ಇದು ನಮ್ಮ ಏಳಿಗೆ ಸಹಿಸದೆ ಇರುವುವವರು ಮಾಡಿದ್ದಾರೆ ಎಂದು ಹೇಳಿದ್ದರು.

ವೈರಲ್ ವಿಡಿಯೋದಲ್ಲಿ ಏನಿದೆ?

ಬೆಳಗಾವಿಯಿಂದ ಅಂಕೋಲಕ್ಕೆ ತನ್ನ ವಯುಕ್ತಿಕ ಸಮಸ್ಯೆ ನಿವಾರಣೆಗೆ ಸಂಕ್ರಾಂತಿ ಎಂದು ಕಾಲಭೈರವ ದೇವರ ಬಳಿ ಮಹಿಳೆ ಬಂದಿದ್ದಳು. ಈ ವೇಳೆ ದೈವನರ್ತಕ ನುಡಿ ಹೇಳುತ್ತಾ ಈ ಬಾಲಕಿಯನ್ನ ಈ ಬಾಲಕ ಮದುಗೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ ಸತ್ಯ ಎಂದು ಪಾತ್ರಿ ನುಡಿದಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: Viral Video: ಕಾರವಾರದಲ್ಲಿ ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿ, ಕಾಂತಾರ ಸ್ಟೈಲಿನಲ್ಲಿ ನುಡಿ ನೀಡಿದ ದೈವ ಪಾತ್ರಿ

“ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತ ಪಾತ್ರಿ ವರ್ತಿಸಿದ್ದು, ವಿವಾಹಿತ ಮಹಿಳೆಯನ್ನ ವರಿಸುವ ಸಲುವಾಗಿ ದೈವದ ಹೆಸರನ್ನ ಬಳಿಸಿಕೊಂಡಿದ್ದಾನೆ” ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಇನ್ನು, ನರ್ತಕ ಪಾತ್ರಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ, ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದ್ದು ದೇವರ ಹೆಸರಿನಲ್ಲಿ ಪಾತ್ರಿ ಈ ರೀತಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Sun, 5 February 23

Follow Us
Web contact
Web contact

TV9 Kannada

Read More