AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ ನೌಕಾನೆಲೆ ನಿರ್ಮಾಣವಾಗಿ 30 ವರ್ಷ ಕಳೆದರೂ ನಿರಾಶ್ರಿತರಿಗೆ ಇದುವರೆಗೆ ಸಿಗದ ಪರಿಹಾರ

ಜಿಲ್ಲೆಯ ಜನರು ದೇಶದ ಮಹತ್ತರ ಯೋಜನೆಯಾದ ಕದಂಬ ನೌಕಾನೆಲೆಗೆ ಸುಮಾರು 30ವರ್ಷಗಳ ಹಿಂದೆ ತಮ್ಮ ಮನೆ, ಕೃಷಿ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಇವರಿಗೆ ಇಂದಿಗೂ ಸೂಕ್ತ ಪರಿಹಾರ ದೊರೆಯದೆ ಅಲೆದಾಡುತ್ತಿದ್ದಾರೆ.

ಕಾರವಾರ ನೌಕಾನೆಲೆ ನಿರ್ಮಾಣವಾಗಿ 30 ವರ್ಷ ಕಳೆದರೂ ನಿರಾಶ್ರಿತರಿಗೆ ಇದುವರೆಗೆ ಸಿಗದ ಪರಿಹಾರ
ಸಿಗದ ಪರಿಹಾರ ಹೋರಾಟಕ್ಕಿಳಿದ ನಿರಾಶ್ರಿತರು
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Jan 20, 2023 | 7:18 PM

Share

ಉತ್ತರ ಕನ್ನಡ: ಏಷಿಯಾದ ಅತೀ ದೊಡ್ಡ ನೌಕಾನೆಲೆ ಸೀಬರ್ಡ್ ಅಥವಾ ಕದಂಬ ನೌಕಾನೆಲೆ ನಿರ್ಮಾಣದ ಯೋಜನೆಗಾಗಿ ಕಾರವಾರದ ಬಿಣಗಾ, ಅರಗಾ, ಮುದುಗಾ, ಚೆಂಡ್ಯಾ, ತೋಡಾರ್, ಹಾರವಾಡ ಅಂಕೋಲಾ ಭಾಗದ ಸಾವಿರಾರು ಜನರು ತಮ್ಮ ಮನೆ, ಕೃಷಿ ಜಮೀನುಗಳನ್ನು ಬಿಟ್ಟುಕೊಟ್ಟಿದ್ದರು. ಸಾವಿರಾರು ಎಕರೆ ಪ್ರದೇಶವನ್ನು ಸೀಬರ್ಡ್ ನಿರ್ಮಾಣಕ್ಕಾಗಿ ನೀಡಿದ್ದರು. ಸರಕಾರ ಕೂಡಾ ಅಂದು ಪ್ರತೀ ಗುಂಟೆಗೆ ಕಡಿಮೆ ವೆಚ್ಚ ನಿಗದಿ ಮಾಡಿ ಜಮೀನು ಖರೀದಿಸಿತ್ತು. ಕೆಲವರು ಜಮೀನು ನೀಡಿದ್ರೂ ಮತ್ತೆ ಕೆಲವರಿಗೆ ಈ ಮೌಲ್ಯ ಸಾಕಾಗದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದ ಕೆಲವರಿಗೆ ಗುಂಟೆಗೆ 11,500ರೂ.ನಂತೆ ಪರಿಹಾರ ಕೂಡಾ ದೊರಕಿತ್ತು. ಇನ್ನು ಪರಿಹಾರ ಬಾಕಿಯಿದ್ದ ಕೆಲವರಿಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಪರಿಹಾರ ಕೂಡಾ ಕೊಡಿಸಿದ್ದರು.‌ ಆದರೆ, ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹೋದವರಿಗೆ ಉತ್ತಮ ಪರಿಹಾರ ದೊರಕಿದ ಕಾರಣ ಸುಮಾರು 100-200 ಕುಟುಂಬಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಆದೇಶ ಈ ಜನರ ಪರವಾಗಿ ಬಂದರೂ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ಥರು ಹೇಳುತ್ತಿದ್ದಾರೆ.

ಇನ್ನು ಸುಮಾರು 30 ವರ್ಷಗಳ ಹಿಂದೆ ನೌಕಾನೆಲೆಗಾಗಿ ಜಮೀನುಗಳನ್ನು ವಶಪಡಿಸಲಾಗಿತ್ತಾದರೂ ಅಂದಿನಿಂದ ಇಂದಿನವರೆಗೆ ಹಲವರಿಗೆ ಪೂರ್ಣ ಪ್ರಮಾಣದ ಪರಿಹಾರ ದೊರಕಿಲ್ಲ.‌ ಈ ಪರಿಹಾರಗಳಿಗಾಗಿ ಹಲವಾರು ಜನರು ಕಾದುಕಾದು ಸಾವನ್ನಪ್ಪಿದ್ದು, ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಸಾಕಷ್ಟು ಬಾರಿ ಭೇಟಿ ನೀಡಿ ತಮ್ಮ ಮನವಿಗಳನ್ನು ಸಲ್ಲಿಸಿದರೂ ಪರಿಹಾರ ದೊರಕುವ ಯಾವುದೇ ಕುರುಹುಗಳು ಕಾಣುತ್ತಿಲ್ಲ. ಅಧಿಕಾರಿಗಳು ಸಮಯದಲ್ಲಿ ಕೇಂದ್ರದ ಗಮನಕ್ಕೆ ತರದ ಕಾರಣವೇ ತಾವು ಇಂದಿಗೂ ಪರಿಹಾರಕ್ಕಾಗಿ ಅಲೆಡಾಡುತ್ತಿದ್ದೇವೆ. ನಮಗೆ ಪರಿಹಾರವೂ ದೊರಕಿಲ್ಲ, ಸೀಬರ್ಡ್ ನಿರ್ಮಾಣದ ವೇಳೆ ನೀಡಿದ ಮಾತಿನಂತೆ ಮಕ್ಕಳಿಗೆ ಉದ್ಯೋಗವೂ ದೊರಕಿಲ್ಲ. ಸಾಕಷ್ಟು ಸಾಲಗಳನ್ನು ಮಾಡಿಕೊಂಡು ಬೇರೆಡೆ ಜಮೀನು, ಮನೆಗಳನ್ನು ಮಾಡಿಕೊಂಡಿದ್ದೇವೆ. ಈ ಸಾಲದ ಹೊರೆ‌ ಇಂದಿಗೂ ತಲೆಯ ಸುತ್ತಲೂ ಸುತ್ತುತ್ತಿದೆ.‌ ಕೋರ್ಟ್, ಕಚೇರಿ ಅಲೆದರೂ ಪರಿಹಾರ ದೊರೆಯುವ ಯಾವುದೇ ಕುರುಹು ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಜನ.

ಇದನ್ನೂ ಓದಿ:ಮಾಜಿ ಪ್ರಧಾನಿ ಗೌಡರ ಜಿಲ್ಲೆಯಲ್ಲಿ IIT ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತದಂತೆ ಹಾಲಿ ಬಿಜೆಪಿ ಸರ್ಕಾರ! Basavaraj Bommai

ಒಟ್ಟಿನಲ್ಲಿ ಇಂದಿಗೂ ನೂರಾರು ಸೀಬರ್ಡ್ ನಿರಾಶ್ರಿತರು ತಮಗೆ ಪರಿಹಾರ ಸಿಕ್ಕಿಲ್ಲವೆಂದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ಪರಿಹಾರಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಪರಿಶೀಲಿಸಿ ಅರ್ಹರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ.

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​