AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಪ್ರತಿಭಟನೆ, ಮತ್ಸ್ಯ ಪ್ರಿಯರಿಗಿಲ್ಲ ಮೀನೂಟ

ಕಾರವಾರ: ಕರಾವಳಿಗರಿಗೆ ಮೀನು ಅನ್ನೋದು ಅಚ್ಚು ಮೆಚ್ಚಿನ ಆಹಾರ. ಪ್ರತಿದಿನ ಮೀನು ಇರಲೇ ಬೇಕು. ಆದ್ರೆ ಕರಾವಳಿ ನಗರಿ ಕಾರವಾರದಲ್ಲಿ ಮಾತ್ರ ಇದೀಗ ಮೀನಿಗೆ ಜನರು ಪರದಾಡುವಂತಾಗಿದೆ. ಕಡಲಿಗೆ ಹೋಗಿ ಖಾಲಿ ಕೈಯಲ್ಲಿ ವಾಪಸ್ ಆಗ್ತಿದ್ದಾರೆ. ಬೋಟ್​ಗಳು ಕಡಲಿಗೆ ಇಳಿದಿಲ್ಲ. ಮೀನುಗಾರರು ಕೂಡ ಕಣ್ಣಿಗೆ ಕಾಣಿಸ್ತಿಲ್ಲ. ಮಾರುಕಟ್ಟೆಯ ಬಾಗಿಲ್ ಕ್ಲೋಸ್ ಆಗಿದೆ. ಮೀನು ಖರೀದಿಗೆ ಬಂದವರು ಕೂಡ ಖಾಲಿ ಕೈನಲ್ಲಿ ವಾಪಸ್ ಆಗ್ತಿದ್ದಾರೆ. ಯಾಕಂದ್ರೆ, ಇಲ್ಲಿ ಎಲ್ಲವೂ ಬಂದ್.. ಬಂದ್.. ಬಂದ್. ಇದು ಉತ್ತರ ಕನ್ನಡ ಜಿಲ್ಲೆಯ […]

ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಪ್ರತಿಭಟನೆ, ಮತ್ಸ್ಯ ಪ್ರಿಯರಿಗಿಲ್ಲ ಮೀನೂಟ
ಸಾಧು ಶ್ರೀನಾಥ್​
|

Updated on:Jan 20, 2020 | 3:29 PM

Share

ಕಾರವಾರ: ಕರಾವಳಿಗರಿಗೆ ಮೀನು ಅನ್ನೋದು ಅಚ್ಚು ಮೆಚ್ಚಿನ ಆಹಾರ. ಪ್ರತಿದಿನ ಮೀನು ಇರಲೇ ಬೇಕು. ಆದ್ರೆ ಕರಾವಳಿ ನಗರಿ ಕಾರವಾರದಲ್ಲಿ ಮಾತ್ರ ಇದೀಗ ಮೀನಿಗೆ ಜನರು ಪರದಾಡುವಂತಾಗಿದೆ. ಕಡಲಿಗೆ ಹೋಗಿ ಖಾಲಿ ಕೈಯಲ್ಲಿ ವಾಪಸ್ ಆಗ್ತಿದ್ದಾರೆ.

ಬೋಟ್​ಗಳು ಕಡಲಿಗೆ ಇಳಿದಿಲ್ಲ. ಮೀನುಗಾರರು ಕೂಡ ಕಣ್ಣಿಗೆ ಕಾಣಿಸ್ತಿಲ್ಲ. ಮಾರುಕಟ್ಟೆಯ ಬಾಗಿಲ್ ಕ್ಲೋಸ್ ಆಗಿದೆ. ಮೀನು ಖರೀದಿಗೆ ಬಂದವರು ಕೂಡ ಖಾಲಿ ಕೈನಲ್ಲಿ ವಾಪಸ್ ಆಗ್ತಿದ್ದಾರೆ. ಯಾಕಂದ್ರೆ, ಇಲ್ಲಿ ಎಲ್ಲವೂ ಬಂದ್.. ಬಂದ್.. ಬಂದ್.

ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ. ಇಲ್ಲಿನ ಮೀನುಗಾರರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕಡಲಿನ ಕಡೆ ಮುಖನೂ ಮಾಡ್ತಿಲ್ಲ. ವ್ಯಾಪಾರನೂ ನಡೀತಿಲ್ಲ. ಎಲ್ಲ ಕಡೆ ಬಿಕೋ ಎನ್ನುತ್ತಿದೆ. ಯಾಕಂದ್ರೆ, ವಾಣಿಜ್ಯ ಬಂದರು ವಿಸ್ತರಣೆಯನ್ನ ವಿರೋಧಿಸಿ ಮೀನುಗಾರರು ಹೋರಾಟ ನಡೆಸ್ತಿದ್ದಾರೆ.

ಅಂದ್ಹಾಗೆ, ಕರಾವಳಿ ಭಾಗದಲ್ಲಿ ಮೀನು ಅನ್ನೋದು ಅತೀ ಮುಖ್ಯ ಆಹಾರ. ಪ್ರತಿದಿನ ತಮ್ಮ ಊಟದಲ್ಲಿ ಮೀನು ಇರಲೇ ಬೇಕು ಎನ್ನುವವರೇ ಇಲ್ಲಿ ಜಾಸ್ತಿ. ಆದ್ರೆ, ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಪ್ರತಿಭಟನೆಗೆ ಇಳಿದಿರೋದ್ರಿಂದ ಮೀನುಗಾರರು, ಮೀನು ಮಾರಾಟವನ್ನ ನಿಲ್ಲಿಸಿದ್ದಾರೆ. ಇದ್ರಿಂದ ಫಿಶ್ ಪ್ರಿಯರು, ಕಡಲಿಗೆ ಬಂದು ಬರೀ ಕೈನಲ್ಲಿ ವಾಪಸ್ ಹೋಗ್ತಿದ್ದಾರೆ.

ಇನ್ನು, ಸಾಗರಮಾಲ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆ ಮಾಡಿದರೆ ಮೀನುಗಾರಿಕೆಗೆ ಸಮಸ್ಯೆ ಆಗಲಿದೆ. ಜೊತೆಗೆ ಕಾರವಾರಕ್ಕೆ ಇರುವ ಏಕೈಕ ಕಡಲ ತೀರ ಟಾಗೋರ್ ಕಡಲ ತೀರಕ್ಕೆ ಸಹ ಹಾನಿಯಾಗಲಿದೆ ಅನ್ನೋದು ಮೀನುಗಾರರ ಆಗ್ರಹ. ಅದಕ್ಕಾಗಿಯೇ ಕಳೆದ ಸೋಮವಾರದಿಂದ ಹೋರಾಟ ಮಾಡ್ತಿರೋ ಮೀನುಗಾರರು, ಮೀನುಗಾರಿಕೆಯನ್ನೂ ಬಂದ್ ಮಾಡಿದ್ದಾರೆ. ನೂರಾರು ಬೋಟ್​ಗಳು ಸಹ ಲಂಗರು ಹಾಕಿ ನಿಂತಿದೆ.

ಒಟ್ನಲ್ಲಿ, ಕಳೆದ ಒಂದು ವಾರದಿಂದ ಮೀನು ಮಾರುಕಟ್ಟೆ ಸ್ಥಗತಿವಾಗಿದೆ. ಇದ್ರ ಎಫೆಕ್ಟ್ ಮತ್ಸ್ಯ ಪ್ರಿಯರಿಗೆ ತಟ್ಟಿದೆ. ಅಲ್ದೆ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೆ ಅನ್ನೋ ನಿರೀಕ್ಷೆಯಲ್ಲಿ ಮೀನುಗಾರರು ಇದ್ದಾರೆ.

Published On - 3:10 pm, Mon, 20 January 20

ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು