ಶಿರಸಿಯಲ್ಲಿ ಹಣ್ಣು ಮಾರುವ ಮೋಹಿನಿ ಗೌಡರನ್ನು ಭೇಟಿಯಾದ ಪ್ರಧಾನಿ ಮೋದಿ; ಈ ಮಹಿಳೆಯ ಸಾಧನೆ ಏನು?

Narendra Modi Meets Fruit Seller Mohini Gowda: ನರೇಂದ್ರ ಮೋದಿ ತಮ್ಮ ಭಾಷಣ ಮತ್ತು ಭೇಟಿಗಳಲ್ಲಿ ಸಾಕಷ್ಟು ಅಚ್ಚರಿ ಮೂಡಿಸುತ್ತಾರೆ. ಭಾನುವಾರ ಶಿರಸಿಗೆ ಬರುವ ಹಾದಿಯಲ್ಲಿ ಪ್ರಧಾನಿಗಳು ಅಂಕೋಲದಲ್ಲಿ ಮೋಹಿನಿ ಗೌಡ ಎಂಬ ಹಣ್ಣು ಮಾರುವ ಮಹಿಳೆಯನ್ನು ಭೇಟಿಯಾಗಿ ಅಭಿನಂದಿಸಿದರು. ಮೋಹಿನಿ ಗೌಡ ಅಂಕೋಲ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುವ ಮಹಿಳೆ. ಈಕೆಯ ವಿಶೇಷತೆ ಎಂದರೆ ರಸ್ತೆಯಲ್ಲಿ ಯಾರಾದರೂ ಹಣ್ಣಿನ ಸಿಪ್ಪೆಯನ್ನು ಬಿಸಾಡಿದರೆ ಅದನ್ನು ಹೆಕ್ಕಿ ಕಸದ ಬುಟ್ಟಿಗೆ ಎಸೆಯುತ್ತಾರೆ. ಈ ಮೂಲಕ ಸ್ವಚ್ಛ ಭಾರತ ಯೋಜನೆಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಮೋಹಿನಿ ಗೌಡರನ್ನು ಭೇಟಿ ಮಾಡಿರುವುದು ಮಹತ್ವ ಪಡೆದಿದೆ.

ಶಿರಸಿಯಲ್ಲಿ ಹಣ್ಣು ಮಾರುವ ಮೋಹಿನಿ ಗೌಡರನ್ನು ಭೇಟಿಯಾದ ಪ್ರಧಾನಿ ಮೋದಿ; ಈ ಮಹಿಳೆಯ ಸಾಧನೆ ಏನು?
ಮೋಹಿನಿ ಗೌಡರನ್ನು ಭೇಟಿಯಾದ ನರೇಂದ್ರ ಮೋದಿ
Follow us
|

Updated on: Apr 29, 2024 | 3:29 PM

ಬೆಂಗಳೂರು, ಏಪ್ರಿಲ್ 29: ಎಲೆಮರೆ ಕಾಯಿಯಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರಶಂಸಿಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸದಾ ಮುಂದಿರುತ್ತಾರೆ. ಅವರ ಮನ್ ಕೀ ಬಾತ್​ನಲ್ಲಿ ಇಂಥ ಬಹಳ ಪ್ರತಿಭೆಗಳ ಹೆಸರು ಪ್ರಸ್ತಾಪಿಸಿ ಜಗತ್ತು ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ನೈಜ ಪ್ರತಿಭೆಗಳಿಗೆ ಪದ್ಮಪ್ರಶಸ್ತಿ ಸಿಕ್ಕಿವೆ. ಭಾಷಣಕ್ಕೆ ಯಾವುದಾದರೂ ಪ್ರದೇಶಕ್ಕೆ ಹೋದಾಗ ಮೋದಿ ಅವರು ಸಾಧ್ಯವಾದಾಗೆಲ್ಲ ಸ್ಥಳೀಯ ಪ್ರತಿಭೆಯನ್ನು ಗುರುತಿಸುತ್ತಾರೆ. ನಿನ್ನೆ ಭಾನುವಾರ ಪ್ರಧಾನಿಗಳು ಶಿರಸಿಗೆ (Sirsi, Uttara Kannada) ಹೋದಾಗ ಅಲ್ಲಿ ಹಣ್ಣು ಮಾರುವ ಮಹಿಳೆಯೊಬ್ಬರನ್ನು ಭೇಟಿ ಮಾಡಿದ್ದಾರೆ. ಭಾನುವಾರ ಮೋದಿ ಅವರು ಶಿರಸಿಯೂ ಸೇರಿ ನಾಲ್ಕು ಕಡೆ ರ‍್ಯಾಲಿ ನಡೆಸಿದ್ದರು. ಈ ವೇಳೆ ಹೆಲಿಪ್ಯಾಡ್​ನಿಂದ ಸಮಾವೇಶ ಸ್ಥಳಕ್ಕೆ ಹೋಗುವಾಗ ಅವರು ಮೊದಲು ಭೇಟಿಯಾಗಿದ್ದು ಮೋಹಿನಿ ಗೌಡ (Mohini Gowda) ಎಂಬ ಈ ಮಹಿಳೆಯನ್ನೇ.

ಯಾರು ಈ ಮೋಹಿನಿ ಗೌಡ?

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಂಕೋಲದಲ್ಲಿ ಮುಖ್ಯ ಬಸ್ ನಿಲ್ದಾಣದಲ್ಲಿ ಮೋಹಿನಿ ಗೌಡ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಜನರು ಹಣ್ಣು ತಿಂದು ರಸ್ತೆಯಲ್ಲಿ ಬಿಸಾಡುವ ಸಿಪ್ಪೆಯನ್ನು ಮೋಹಿನಿ ಅವರು ಹೆಕ್ಕಿ ಡಸ್ಟ್ ಬಿನ್​ಗೆ ಎಸೆಯುತ್ತಾರೆ.

ಇದನ್ನೂ ಓದಿ: ಬಾಗಲಕೋಟೆ ಯುವಕನಿಂದ ಮೋದಿಗೆ ರಕ್ತದಿಂದ ಬಿಡಿಸಿದ ಭಾವಚಿತ್ರ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಯೋಜನೆಗೆ ಮೋಹಿನಿ ಗೌಡ ತರಹದವರು ಎಲೆಮರೆ ಕಾಯಿಯ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇಂತಹವರು ಬೆಳಕಿಗೆ ಬಂದರೆ ಸಮಾಜದ ಇತರರಿಗೆ ಪ್ರೇರೇಪಣೆ ಸಿಕ್ಕಂತಾಗುತ್ತದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಮೋಹಿನಿ ಗೌಡರನ್ನು ಭೇಟಿ ಮಾಡಿದ್ದು ಮಹತ್ವದ ಸಂಗತಿ.

ನರೇಂದ್ರ ಮೋದಿ ರಾಜ್ಯ ಭೇಟಿ…

ಮೇ 7ರಂದು ರಾಜ್ಯದ ಅಂತಿಮ 14 ಕ್ಷೇತ್ರಗಳಿಗೆ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆ ಬೆಳಗಾವಿ, ದಾವಣಗೆರೆ, ಹೊಸಪೇಟೆ ಮತ್ತು ಶಿರಸಿಯಲ್ಲಿ ಮೋದಿ ಅವರು ಚುನಾವಣಾ ರ‍್ಯಾಲಿ ನಡೆಸಿದ್ದರು. ಇವತ್ತು ಸೋಮವಾರ ಬಾಗಲಕೋಟೆಯಲ್ಲಿ ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಲೂಟಿಕೋರ ಸರ್ಕಾರ ಎಂದು ಪ್ರಧಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ನಿರ್ವಹಿಸುತ್ತಿಲ್ಲ, ವಸೂಲಿ ಗ್ಯಾಂಗ್​ ನಡೆಸುತ್ತಿದ್ದಾರೆ: ಮೋದಿ

ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ ಮೇ 7ರಂದು ನಡೆಯುವ ಮತದಾನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸುವಂತೆ ಕರೆ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ