AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿ ಜನರೊಂದಿಗೆ ಆತ್ಮೀಯ ಒಡನಾಟ, ಮಂಗನಿಗೂ ತಿಥಿ ಕಾರ್ಯ ಮಾಡಿದರು

ಹಾಸನ: ಹಾಸನ ಜಿಲ್ಲೆ ಹೊಂಗೆರೆಯಲ್ಲಿ ಮಂಗನಿಗೂ ತಿಥಿ ಕಾರ್ಯ ನೆರವೇರಿಸಿದ ಪ್ರಸಂಗ ನಡೆದಿದೆ. ಕಳೆದ ಅಕ್ಟೋಬರ್ 14 ರಂದು ಗ್ರಾಮದಲ್ಲಿದ್ದ ಮಂಗ ಮೃತಪಟ್ಟಿತ್ತು. ಅಂದು ಸ್ಥಳೀಯರು ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಿದ್ದರು. ಮೃತಪಟ್ಟ ಮಂಗ ಊರ ಜನರೊಂದಿಗೆ ಆತ್ಮೀಯ ಒಡನಾಟವನ್ನಿಟ್ಟಿಕೊಂಡಿತ್ತು. ಆ ಆತ್ಮೀಯ ಬಾಂಧವ್ಯದಿಂದಲೇ ಇಂದು ಮಂಗನ 11 ನೇ ದಿನದ ತಿಥಿ ಕಾರ್ಯವನ್ನು ಜನರು ನೆರವೇರಿಸಿದ್ದಾರೆ. ಊರಿನ ಜನರೊಂದಿಗೆ ಹೊಂಗೆರೆ, ಹೂವಿನಹಳ್ಳಿ, ಹಲಸಿನಹಳ್ಳಿ, ದಡದಹಳ್ಳಿ , ಬಂಡಿಹಳ್ಳಿ ಸುತ್ತಮುತ್ತಲ ಗ್ರಾಮದ ಜನರು ತಿಥಿಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮನುಷ್ಯರಿಗೆ […]

ಹಳ್ಳಿ ಜನರೊಂದಿಗೆ ಆತ್ಮೀಯ ಒಡನಾಟ, ಮಂಗನಿಗೂ ತಿಥಿ ಕಾರ್ಯ ಮಾಡಿದರು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 26, 2019 | 1:13 PM

Share

ಹಾಸನ: ಹಾಸನ ಜಿಲ್ಲೆ ಹೊಂಗೆರೆಯಲ್ಲಿ ಮಂಗನಿಗೂ ತಿಥಿ ಕಾರ್ಯ ನೆರವೇರಿಸಿದ ಪ್ರಸಂಗ ನಡೆದಿದೆ. ಕಳೆದ ಅಕ್ಟೋಬರ್ 14 ರಂದು ಗ್ರಾಮದಲ್ಲಿದ್ದ ಮಂಗ ಮೃತಪಟ್ಟಿತ್ತು. ಅಂದು ಸ್ಥಳೀಯರು ವಿಧಿ ವಿಧಾನದಂತೆ ಅಂತ್ಯಕ್ರಿಯೆ ಮಾಡಿದ್ದರು. ಮೃತಪಟ್ಟ ಮಂಗ ಊರ ಜನರೊಂದಿಗೆ ಆತ್ಮೀಯ ಒಡನಾಟವನ್ನಿಟ್ಟಿಕೊಂಡಿತ್ತು. ಆ ಆತ್ಮೀಯ ಬಾಂಧವ್ಯದಿಂದಲೇ ಇಂದು ಮಂಗನ 11 ನೇ ದಿನದ ತಿಥಿ ಕಾರ್ಯವನ್ನು ಜನರು ನೆರವೇರಿಸಿದ್ದಾರೆ.

ಊರಿನ ಜನರೊಂದಿಗೆ ಹೊಂಗೆರೆ, ಹೂವಿನಹಳ್ಳಿ, ಹಲಸಿನಹಳ್ಳಿ, ದಡದಹಳ್ಳಿ , ಬಂಡಿಹಳ್ಳಿ ಸುತ್ತಮುತ್ತಲ ಗ್ರಾಮದ ಜನರು ತಿಥಿಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮನುಷ್ಯರಿಗೆ ಕಾರ್ಯ ನೆರವೇರಿಸುವಂತೆ ಎಡೆಇಟ್ಟು ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಗಿದೆ.

Published On - 1:08 pm, Sat, 26 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು