AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಜಾವರು ಶ್ರೀಗಳು ನಡೆದು ಬಂದ ಹಾದಿ

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ವಿಶ್ವೇಶತೀರ್ಥ ಶ್ರೀಗಳು(88) ಇಂದು ಇಹಲೋಕ ತ್ಯಜಿಸಿದ್ದಾರೆ. ಪೇಜಾವರು ಶ್ರೀಗಳು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ಇಲ್ಲಿದೆ. 1931ರಲ್ಲಿ ರಾಮಕುಂಜದಲ್ಲಿ ಜನನ: 1931ರ ಏಪ್ರಿಲ್ 27ರಂದು ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಹ್ಮಣ್ಯ ಬಳಿಯ ರಾಮಕುಂಜ ಗ್ರಾಮದಲ್ಲಿ ಪೇಜಾವರ ಶ್ರೀಗಳು ಜನಿಸಿದ್ದರು. ನಾರಾಯಣಾಚಾರ್ಯ, ಕಮಲಮ್ಮ ದಂಪತಿಯ 2ನೇ ಪುತ್ರರಾಗಿದ್ದ ಇವರ ಪೂರ್ವಾಶ್ರಮದ ಹೆಸರು ವೆಂಕಟರಮಣ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಪೇಜಾವರ ಮಠದಲ್ಲಿ […]

ಪೇಜಾವರು ಶ್ರೀಗಳು ನಡೆದು ಬಂದ ಹಾದಿ
Follow us
ಸಾಧು ಶ್ರೀನಾಥ್​
|

Updated on: Dec 29, 2019 | 11:24 AM

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ವಿಶ್ವೇಶತೀರ್ಥ ಶ್ರೀಗಳು(88) ಇಂದು ಇಹಲೋಕ ತ್ಯಜಿಸಿದ್ದಾರೆ. ಪೇಜಾವರು ಶ್ರೀಗಳು ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ಇಲ್ಲಿದೆ.

1931ರಲ್ಲಿ ರಾಮಕುಂಜದಲ್ಲಿ ಜನನ: 1931ರ ಏಪ್ರಿಲ್ 27ರಂದು ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಹ್ಮಣ್ಯ ಬಳಿಯ ರಾಮಕುಂಜ ಗ್ರಾಮದಲ್ಲಿ ಪೇಜಾವರ ಶ್ರೀಗಳು ಜನಿಸಿದ್ದರು. ನಾರಾಯಣಾಚಾರ್ಯ, ಕಮಲಮ್ಮ ದಂಪತಿಯ 2ನೇ ಪುತ್ರರಾಗಿದ್ದ ಇವರ ಪೂರ್ವಾಶ್ರಮದ ಹೆಸರು ವೆಂಕಟರಮಣ. ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದರು.

ಪೇಜಾವರ ಮಠದಲ್ಲಿ ಪರ್ಯಾಯ: ಉಪನಯನಕ್ಕೂ ಮುಂಚೆ ಪೋಷಕರು ವೆಂಕಟರಮಣರನ್ನ ಉಡುಪಿಗೆ ಕರೆತಂದಿದ್ದರು. ಬಾಲಕ ವೆಂಕಟರಮಣ ಬಂದ ವೇಳೆ ಪೇಜಾವರ ಮಠದಲ್ಲಿ ಪರ್ಯಾಯ ನಡೆಯುತ್ತಿತ್ತು. ಬಾಲಕ ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಗಮನಿಸಿದ ಸ್ವಾಮೀಜಿಯನ್ನು ನಾನು ಹೀಗೆ ಕೃಷ್ಣನನ್ನು ಪೂಜಿಸಬಹುದೆ ಎಂದು ಕೇಳಿದರು. ಪೋಷಕರು ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ಬಾಲಕ ವೆಂಕಟರಮಣ ಭಕ್ತಿಯಿಂದ ಮಠದ ಸ್ವಾಮಿಗಳಿಗೆ ನಮಸ್ಕರಿಸಿದರು. ಈ ವೇಳೆ ಬಾಲಕ ವೆಂಕಟರಮಣನ ಮುಗ್ಧ ಮುಖ, ಭಕ್ತಿ ಭಾವ, ಚುರುಕುತನವನ್ನು ಸ್ವಾಮೀಜಿ ಗಮನಿಸಿದರು. ಸ್ವಾಮಿಗಳಿಗೆ ಆಕಸ್ಮಿಕವಾಗಿ ನೀನು ನನ್ನಂತೆ ಸ್ವಾಮಿಯಾಗುತ್ತೀಯಾ ಎಂದಿದ್ದರು. ಆಗ ಬಾಲಕ ವೆಂಕಟರಮಣ ಸ್ವಲ್ಪವೂ ತಡಮಾಡದೇ ಹೌದು ಎಂದು ಉತ್ತರಿಸಿದರಂತೆ.

ಉಡುಪಿ ಮಠದಲ್ಲಿ ಕೈಗೊಂಡಿದ್ದ ಪರ್ಯಾಯದ ಅವಧಿ ಮುಗಿಯಿತು. ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟರು. ಶ್ರೀ ವಿಶ್ವಮಾನ್ಯ ತೀರ್ಥರು ಪಯಣದ ಹಾದಿಯಲ್ಲಿ ಹಂಪಿ ತಲುಪಿದರು. ವ್ಯಾಸತೀರ್ಥರ ತಪೋಭೂಮಿಯಾದ ಹಂಪಿಯಲ್ಲಿ ಶ್ರೀಗಳ ನಿರ್ಧಾರ ಗಟ್ಟಿಗೊಂಡಿತು. ಶ್ರೀ ವಿಶ್ವಮಾನ್ಯ ತೀರ್ಥರು ವೆಂಕಟರಮಣನನ್ನು ಹಂಪಿಗೆ ಕರೆಸಿಕೊಂಡರು. ಕರೆ ಬಂದ ಕೂಡಲೇ ವೆಂಕಟರಮಣ ಹಿರಿಯರ ಜತೆ ಹಂಪಿಗೆ ತೆರಳಿದರು.

1938ರಲ್ಲಿ ಶ್ರೀಗಳಿಗೆ ದೀಕ್ಷೆ: 1938ರ ಡಿಸೆಂಬರ್ 3ರಂದು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣ ಸನ್ನಿಧಿಯಲ್ಲಿ ಶ್ರೀಗಳಿಗೆ ದೀಕ್ಷೆ ನಡೆಯಿತು. ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾದ್ರು. ಪೇಜಾವರ ಮಠದ ಪರಂಪರೆಯ 32ನೇ ಯತಿಯಾಗಿ ಶ್ರೀಗಳು ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ್ದರು. ಶ್ರೀ ವಿದ್ಯಾಮಾನ್ಯ ತೀರ್ಥರ ಬಳಿ ಶ್ರೀಗಳ ಹೆಚ್ಚಿನ ವ್ಯಾಸಂಗ ಮಾಡಿದ್ದರು. ಬಳಿಕ ಭಂಡಾರಕೇರಿಯ ಗುರುಕುಲದಲ್ಲಿ ಅಧ್ಯಯನ ನಡೆಸಿದರು. 1952ರ ಜ.18ರಂದು ಮೊದಲ ಪಱಯ ಪೀಠಾರೋಹಣ ಮತ್ತು 1956 ಜುಲೈ 28ರಂದು ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪನೆ ಮಾಡಿದ್ದರು.

ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ