ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ, ಜಮೀನುಗಳಿಗೆ ನುಗ್ಗಿ ಕಾಫಿ, ಭತ್ತ ಮತ್ತು ಮೆಣಸು ಬೆಳೆ ಸರ್ವನಾಶ

ಈ ಭಾಗಕ್ಕೆ ಸೌರವ್ ಕುಮಾರ್ ಹೆಸರಿನ ಒಬ್ಬ ದಕ್ಷ ಅರಣ್ಯಾಧಿಕಾರಿ ಬಂದಿರೋದು ಗೊತ್ತಾಗಿದೆ, ಅವರ ಬಗ್ಗೆ ಹೆಚ್ಚು ಕೇಳಿದ್ದೇವೆ, ಈಗ ಅವರೇ ನಮ್ಮ ನೆರವಿಗೆ ಬರಬೇಕು ಎಂದು ಹೇಳುವ ಸಾಮಾಜಿಕ ಕಾರ್ಯಕರ್ತ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ, ಜಮೀನುಗಳಿಗೆ ನುಗ್ಗಿ ಕಾಫಿ, ಭತ್ತ ಮತ್ತು ಮೆಣಸು ಬೆಳೆ ಸರ್ವನಾಶ
|

Updated on: Jan 11, 2024 | 1:18 PM

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ (wild elephants) ಹಾವಳಿ ನಿಲ್ಲುವ ಲಕ್ಷಣಗಳಿಲ್ಲ. ಸಕಲೇಶಪುರದ (Sakleshpur) ಯಡೇಹಳ್ಳಿ ಹೆಸರಿನ ಊರಲ್ಲಿ ಇಬ್ಬರು ರೈತರ ಜಮೀನು ಮತ್ತು ಗದ್ದೆಗಳನ್ನು ಕಾಡಾನೆಗಳ ಹಿಂಡೊಂದು ಸಂಪೂರ್ಣವಾಗಿ ನಾಶಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಈ ಭಾಗದ ಸಾಮಾಜಿಕ ಕಾರ್ಯಕರ್ತೊಬ್ಬರು ಹೇಳುವ ಪ್ರಕಾರ ಗ್ರಾಮದ ಕಾಫಿತೋಟವೊಂದರಲ್ಲಿ ಬೀಡುಬಿಟ್ಟಿರುವ ಆನೆಗಳು ಕಳೆದ ರಾತ್ರಿ ರುದ್ರಪ್ಪ ಹೆಸರಿನ ರೈತನ ಜಮೀನು ಮತ್ತು ತೋಟಕ್ಕೆ ನುಗ್ಗಿ ಸುಮಾರು 5,000 ಮೆಣಸು ಗಿಡ ಮತ್ತು ಕಾಫಿ ಗಿಡಗಳನ್ನು ತುಳಿದು ಹಾಳು ಮಾಡುವ ಜೊತೆಗೆ ನೀರಿನ ಪೈಪ್, ಡ್ರಮ್ ಗಳನ್ನು ತುಳಿದು ಒಡೆದು ಹಾಕಿವೆ. ಬಾಳೆತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಸಹ ಹಾಳು ಮಾಡಿವೆ ಎಂದು ಅವರು ಹೇಳುತ್ತಾರೆ. ರುದ್ರಪ್ಪ ಜಮೀನು ಪಕ್ಕದಲ್ಲಿರುವ ಸಾಗರ್ ಎನ್ನುವ ರೈತನ ಭತ್ತದ ಗದ್ದೆಗೂ ದಾಳಿಯಿಟ್ಟರುವ ಆನೆಗಳು ಭತ್ತದ ಬೆಳೆಯನ್ನು ಒಂದೇಒಂದು ಕಾಳು ಕೈಗೆ ಹತ್ತದ ಹಾಗೆ ತುಳಿದು ಧ್ವಂಸಗೊಳಿಸಿವೆ ಎಂದು ಅವರು ಹೇಳಿದರು. ಈ ಭಾಗಕ್ಕೆ ಸೌರವ್ ಕುಮಾರ್ (Sourav Kumar) ಹೆಸರಿನ ಒಬ್ಬ ದಕ್ಷ ಅಧಿಕಾರಿ ಬಂದಿರೋದು ಗೊತ್ತಾಗಿದೆ, ಅವರ ಬಗ್ಗೆ ಹೆಚ್ಚು ಕೇಳಿದ್ದೇವೆ, ಈಗ ಅವರೇ ನಮ್ಮ ನೆರವಿಗೆ ಬರಬೇಕು ಎಂದು ಹೇಳುವ ಸಾಮಾಜಿಕ ಕಾರ್ಯಕರ್ತ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು