AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yadgir Jatre | ದುರ್ಗಾದೇವಿ ಪಲ್ಲಕ್ಕಿ ಉತ್ಸವ: ಹೊರ ರಾಜ್ಯದ ಭಕ್ತರೇ ಹೆಚ್ಚು, ದೇವಿಗೆ ಕೋಳಿ-ಹುಂಜಗಳನ್ನು ಅರ್ಪಿಸುತ್ತಾರೆ

ಗಡ್ಡೆ ದುರ್ಗಾದೇವಿಗೆ ಬಂದಿದ್ದ ನೂರಾರು ಭಕ್ತರು ಕೋಳಿ ಮತ್ತು ಹುಂಜಗಳನ್ನ ಪಲ್ಲಕಿ ಮೇಲೆ ಎಸೆದು ಹರಕೆಯನ್ನು ತೀರಿಸುತ್ತಾರೆ. ಇನ್ನು ದೇವಿ ಬಳಿ ಏನೇ ಬೇಡಿಕೊಂಡರು ಅದು ಈಡೇರುತ್ತದೆ. ದೇವಿಗೆ ಕೋಳಿ ಮತ್ತು ಹುಂಜಗಳು ಇಷ್ಟ. ಇದರಿಂದ ಭಕ್ತರು ದೇವಿಗೆ ಕೋಳಿ ಮತ್ತು ಹುಂಜಗಳನ್ನು ಅರ್ಪಿಸುತ್ತಾರೆ.

Yadgir Jatre | ದುರ್ಗಾದೇವಿ ಪಲ್ಲಕ್ಕಿ ಉತ್ಸವ: ಹೊರ ರಾಜ್ಯದ ಭಕ್ತರೇ ಹೆಚ್ಚು, ದೇವಿಗೆ ಕೋಳಿ-ಹುಂಜಗಳನ್ನು ಅರ್ಪಿಸುತ್ತಾರೆ
ದುರ್ಗದೇವಿ ಪಲ್ಲಕ್ಕಿ ಉತ್ಸವ
Follow us
sandhya thejappa
| Updated By: ಆಯೇಷಾ ಬಾನು

Updated on: Feb 19, 2021 | 12:22 PM

ಯಾದಗಿರಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯ ವಡಗೇರ ತಾಲೂಕಿನ ಗೋನಾಳ ಗ್ರಾಮದ ಗಡ್ಡೆ ದುರ್ಗದೇವಿ ಪಲ್ಲಿಕಿ ಉತ್ಸವ ಅದ್ದೂರಿಯಾಗಿ ಜರುಗಿತ್ತು. ಇನ್ನು ಬೆಳಗ್ಗೆ ದೇವಿ ಪಲ್ಲಕಿಯನ್ನ ಕೃಷ್ಣ ನದಿಗೆ ಗಂಗಾಸ್ನಾನಕ್ಕೆ ಮೆರವಣಿಗೆ ಮೂಲಕ ತೆಗುದುಕೊಂಡು ಹೋಗಲಾಗುತ್ತದೆ. ಗಂಗಸ್ನಾನ ಬಳಿಕ ದೇವಿಯ ಪಲ್ಲಕಿಯನ್ನು ದೇವಸ್ಥಾನಕ್ಕೆ ತರುವಾಗ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಇನ್ನು ದೇವಸ್ಥಾನ ಮುಂದೆ ಕೆಂಡವನ್ನು ಕಾಯಿಸಲಾಗಿರುತ್ತದೆ. ಕೆಂಡದ ಮೇಲೆ ಪೂಜಾರಿ ಹಾಗೂ ಪಲ್ಲಕಿಯ ಸಮೇತ ದೇವಾಲಯವನ್ನು ಪ್ರವೇಶ ಮಾಡಲಾಗುತ್ತದೆ.

ಕೋಳಿ ಹುಂಜಗಳ ಜಾತ್ರೆಯೆಂದೇ ಪ್ರಸಿದ್ಧ ಗಡ್ಡೆ ದುರ್ಗಾದೇವಿಗೆ ಬಂದಿದ್ದ ನೂರಾರು ಭಕ್ತರು ಕೋಳಿ ಮತ್ತು ಹುಂಜಗಳನ್ನ ಪಲ್ಲಕಿ ಮೇಲೆ ಎಸೆದು ಹರಕೆಯನ್ನು ತೀರಿಸುತ್ತಾರೆ. ಇನ್ನು ದೇವಿ ಬಳಿ ಏನೇ ಬೇಡಿಕೊಂಡರು ಅದು ಈಡೇರುತ್ತದೆ. ದೇವಿಗೆ ಕೋಳಿ ಮತ್ತು ಹುಂಜಗಳು ಇಷ್ಟ. ಇದರಿಂದ ಭಕ್ತರು ದೇವಿಗೆ ಕೋಳಿ ಮತ್ತು ಹುಂಜಗಳನ್ನು ಅರ್ಪಿಸುತ್ತಾರೆ. ಶಕ್ತಿ ದೇವತೆ ಗಡ್ಡೆ ದುರ್ಗಾದೇವಿ ದರ್ಶನ ಪಡೆಯಲು ರಾಜ್ಯ ಸೇರಿದಂತೆ ನೆರೆ ರಾಜ್ಯದ ನೂರಾರು ಭಕ್ತರು ಬರುತ್ತಾರೆ.

ಇನ್ನು ಗಡ್ಡೆ ದುರ್ಗಾದೇವಿ ಜಾತ್ರೆ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಈ ಜಾತ್ರೆ ಪಲ್ಲಕಿ ಮೆರವಣಿಗೆ ವೇಳೆ ಸಾವಿರಾರು ಮಂದಿ ಭಕ್ತರು ಬಂದು ಸೇರುತ್ತಾರೆ. ಇನ್ನು ಪಲ್ಲಕ್ಕಿ ಕೃಷ್ಣ ನದಿಗೆ ಗಂಗಾ ಸ್ನಾನಕ್ಕೆ ತೆಗೆದುಕೊಂಡು ಹೋಗಿ ವಾಪಸ್ ಬರುವಾಗ ದೇವಿ ದೇಗುಲದ ಮುಂದೆ ಕೆಂಡವನ್ನ ಹಾಕಿರುತ್ತಾರೆ. ಪಲ್ಲಕ್ಕಿ ಹೊತ್ತು ಸಾಗುವವರು ಹಾಗೂ ಭಕ್ತರು ಈ ಕೆಂಡವನ್ನ ತುಳಿದು ದಾಟಬೇಕು. ಪಲ್ಲಕ್ಕಿ ಹಿಂದೆ ಕೆಂಡ ತುಳಿದು ಸಾಗಿದರೆ ಒಳ್ಳೆದಾಗುತ್ತೆ ಅಂತಾ ಭಕ್ತರ ಅಚಲವಾದ ನಂಬಿಕೆಯಾಗಿದೆ.

ಜಾತ್ರೆಯಲ್ಲಿ ಕೆಂಡ ಸೇವೆ

ಕೋಳಿ ಮತ್ತು ಹುಂಜಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆಯನ್ನು ತೀರಿಸುತ್ತಾರೆ.

ಹೊರ ರಾಜ್ಯದ ಭಕ್ತರೆ ಹೆಚ್ಚು ಗಡ್ಡೆ ದುರ್ಗಾದೇವಿ ಜಾತ್ರೆ ವೇಳೆ ರಾಜ್ಯ ಸೇರಿದಂತೆ ಅನ್ಯ ರಾಜ್ಯದ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಅದರಲ್ಲಿ ವಿಶೇಷವಾಗಿ ಜಿಲ್ಲೆಯ ಗಡಿ ಹಂಚಿಕೊಂಡಿರುವ ತೆಲಂಗಾಣದಿಂದ ಸಾಕಷ್ಟು ಭಕ್ತರು ಬರುತ್ತಾರೆ. ಅದೇ ರೀತಿ ಆಂಧ್ರ ಮತ್ತು ಮಹಾರಾಷ್ಟ್ರದಿಂದಲೂ ಸಾಕಷ್ಟು ಮಂದಿ ಭಕ್ತರು ಬರುತ್ತಾರೆ.

ಗಡ್ಡೆ ದುರ್ಗಾದೇವಿ ನಂಬಿದ ಭಕ್ತರ ಕಷ್ಟಗಳನ್ನ ದೂರ ಮಾಡಿ ಜೀವನದಲ್ಲಿ ಸುಖ ಶಾಂತಿಯನ್ನ ನೀಡುತ್ತಾಳೆ. ನಾನು ಹತ್ತಾರು ವರ್ಷಗಳಿಂದ ಜಾತ್ರಾ ಮಹೋತ್ಸವದಲ್ಲಿ ಬಂದು ಭಾಗವಹಿಸಿದ್ದೇನೆ. ಇನ್ನು ರಾಜ್ಯ ಸೇರಿದಂತೆ ಅನ್ಯ ರಾಜ್ಯದಿಂದ ಸಾಕಷ್ಟು ಮಂದಿ ಭಕ್ತರು ಬರುತ್ತಾರೆ ಎಂದು ದೇವಿ ಭಕ್ತ ಸಾಯಿಬಣ್ಣ ಹೇಳಿದರು.

ಪಲ್ಲಕ್ಕಿ ಮೇಲೆ ಹುಂಜವನ್ನು ಎಸೆಯಲು ತಯಾರಾಗಿರುವ ಭಕ್ತ

ಉತ್ಸವದ ವೇಳೆ ಭಾಗಿಯಾಗಿರುವ ಸಾವಿರಾರು ಭಕ್ತರು

ಭಕ್ತರು ಬೇಡಿಕೊಂಡು ಹರಕೆಯನ್ನ ತಾಯಿ ಈಡೇರಿಸುತ್ತಾಳೆ. ಇನ್ನು ಸಾಕಷ್ಟು ಭಕ್ತರ ಅಮ್ಮನ ಬಳಿ ಹುಂಜ ಹಾಗೂ ಕೋಳಿ ಅರ್ಪಿಸುವುದಾಗಿ ಬೇಡಿಕೊಂಡಿರುತ್ತಾರೆ. ಹೀಗಾಗಿ ಸಾಕಷ್ಟು ಮಂದಿ ಭಕ್ತರು ಹರಕೆಯನ್ನ ತೀರಿಸುತ್ತಾರೆ ಎಂದು ದೇವಿ ಅರ್ಚಕ ಮಹದೇವ ತಿಳಿಸಿದರು.

ಇದನ್ನೂ ಓದಿ: Rajamarthanda Trailer: ಅಪ್ಪನ ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ ಮುದ್ದು ಕಂದ ಜೂ.ಚಿರು

ಇದನ್ನೂ ಓದಿ: Pogaru: ಇಂದಿನಿಂದ ಶುರುವಾಗುತ್ತೆ ಪೊಗರು ಅಸಲಿ ಹವಾ.. ಕನ್ನಡ, ತೆಲುಗು, ತಮಿಳಿನಲ್ಲಿ ಚಿತ್ರ ತೆರೆ

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!