AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ ರೈತರಲ್ಲಿ ಹೆಚ್ಚಿದ ಆತಂಕ; ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು

ಉಷಾ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಸಾವಿರಾರು ಲಕ್ಷಕ್ಕೂ ಅಧಿಕ ಕ್ವೀಂಟಲ್ ಮೆಣಸಿನಕಾಯಿಯನ್ನು ಸ್ಟೋರ್ ಮಾಡಬಹುದಾಗಿದೆ. ಒಂದು ಕ್ವೀಂಟಲ್​ಗೆ ವರ್ಷಕ್ಕೆ ಕೋಲ್ಡ್ ಸ್ಟೋರೇಜ್​ನಲ್ಲಿ ಮೆಣಸಿನಕಾಯಿ ಶೇಖರಿಸುವುದಕ್ಕೆ ರೈತರಿಂದ ಬರೋಬ್ಬರಿ ಎರಡು ಸಾವಿರ ರೂಪಾರಿ ಪಡೆಯಲಾಗುತ್ತದೆ.

ಯಾದಗಿರಿ ರೈತರಲ್ಲಿ ಹೆಚ್ಚಿದ ಆತಂಕ; ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು
ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು
TV9 Web
| Edited By: |

Updated on: Jun 27, 2021 | 1:19 PM

Share

ಯಾದಗಿರಿ: ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ರೈತರು ಈ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಕಂಗಾಲಾಗಿದ್ದಾರೆ. ಸದ್ಯ ಯಾದಗಿರಿ ಭಾಗದ ರೈತರು ಕೂಡ ಇಂತಹದ್ದೇ ಒಂದು ಸಮಸ್ಯೆಗೆ ಗುರಿಯಾಗಿದ್ದಾರೆ. ಜಿಲ್ಲೆಯ ರೈತರು ಮೆಣಸಿನಕಾಯಿಯನ್ನು ಹೇರಳವಾಗಿ ಬೆಳೆದಿದ್ದಾರೆ. ಮೆಣಸಿನಕಾಯಿ ರಾಶಿಯಾದ ಕೂಡಲೆ ಸರಿಯಾದ ಬೆಲೆ ಸಿಕ್ಕಿಲ್ಲ. ಹೀಗಾಗಿ ಬೆಲೆ ಬಂದ ಮೇಲೆ ಮಾರಾಟ ಮಾಡಬೇಕು ಎಂದು ಜಿಲ್ಲೆಯ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಮೆಣಸಿನಕಾಯಿ ಶೇಖರಿಸಿಟ್ಟಿದ್ದರು. ಆದರೆ ಕಾದು ಕುಳಿತಿದ್ದ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು ಶೇಖರಿಸಿಟ್ಟಿದ್ದ ಸಾವಿರಾರು ಚೀಲ ಮೆಣಸಿನಕಾಯಿ ಸಂಪೂರ್ಣ ಹಾಳಾಗಿ ಹೋಗಿದೆ. ಇದೆ ಕಾರಣದಿಂದ ಜಿಲ್ಲೆಯಲ್ಲಿ ರೈತರು ಮತ್ತು ಕೋಲ್ಡ್ ಸ್ಟೋರೇಜ್ ಮಾಲೀಕರ ಮಧ್ಯ ಜಟಾಪಟಿ ನಡೆದಿದೆ.

ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಸಾವಿರಾರು ರೈತರು ಈ ಬಾರಿ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಅದರಂತೆ ಫಸಲು ಕೂಡ ಚೆನ್ನಾಗಿ ಬಂದಿದೆ. ಎಕರೆಗೆ ಸುಮಾರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಎಕರೆಗೆ 10 ಕ್ವೀಂಟಲ್ ನಷ್ಟು ಮೆಣಸಿನಕಾಯಿನ್ನು ಬೆಳೆದಿದ್ದಾರೆ. ಆದರೆ ಮೆಣಸಿನಕಾಯಿ ರಾಶಿಯಾದ ಬಳಿಕ ಸರಿಯಾದ ರೇಟ್ ಸಿಗದೆ ರೈತರು ಕಂಗಲಾಗಿದ್ದು, ಪ್ರತಿ ಕ್ವಿಂಟಲ್​ಗೆ 25 ರಿಂದ 30 ಸಾವಿರ ರೂಪಾಯಿ ಮಾರಾಟವಾಗಬೇಕಿದ್ದ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗಲ್ಲಿಲ್ಲ ಎಂದು ಶೇಖರಿಸಿಡಲು ನಿರ್ಧರಿಸಿದ್ದಾರೆ.

ರೈತರು ಜಿಲ್ಲೆಯಲ್ಲಿರುವ ಏಕೈಕ ಕೋಲ್ಡ್ ಸ್ಟೋರೇಜ್ ಗೋಡೌನ್ ಆಗಿರುವ ಕಲಬುರಗಿ ಮೂಲದ ಉಷಾ ಕೋಲ್ಡ್ ಸ್ಟೋರೇಜ್​ನಲ್ಲಿ ಮೆಣಸಿನಕಾಯಿ ಇಟ್ಟಿದ್ದಾರೆ. ಜಿಲ್ಲೆಯ ನೂರಾರು ರೈತರು ಸಾವಿರಾರು ಕ್ವಿಂಟಲ್ ನಷ್ಟು ಒಣ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್​ನಲ್ಲಿಟ್ಟರೆ ಹಾಳಾಗಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಇಟ್ಟಿದ್ದರು. ಆದರೆ ಅದು ಹಾಳಾಗಿದೆ. ಹೀಗಾಗಿ ಮೆಣಸಿನಕಾಯಿ ಹಾಳಾಗುವುದಕ್ಕೆ ಗೋಡೌನ್ ಮಾಲೀಕ ಬೆಜಾವಾಬ್ದಾರಿತನವೇ ಕಾರಣ ಎಂದು ಮೆಣಸಿನಕಾಯಿ ಬೆಳೆದ ರೈತ ಸಿದ್ದಣ್ಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಉಷಾ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಸಾವಿರಾರು ಲಕ್ಷಕ್ಕೂ ಅಧಿಕ ಕ್ವಿಂಟಲ್ ಮೆಣಸಿನಕಾಯಿಯನ್ನು ಸ್ಟೋರ್ ಮಾಡಬಹುದಾಗಿದೆ. ಒಂದು ಕ್ವಿಂಟಲ್​ಗೆ ವರ್ಷಕ್ಕೆ ಕೋಲ್ಡ್ ಸ್ಟೋರೇಜ್​ನಲ್ಲಿ ಮೆಣಸಿನಕಾಯಿ ಶೇಖರಿಸುವುದಕ್ಕೆ ರೈತರಿಂದ ಬರೋಬ್ಬರಿ ಎರಡು ಸಾವಿರ ರೂಪಾರಿ ಪಡೆಯಲಾಗುತ್ತದೆ. ಮನೆಯಲ್ಲಿ ಮತ್ತು ಮಾಮೂಲಿ ಗೋಡೌನ್​ನಲ್ಲಿ ಮೆಣಸಿನಕಾಯಿ ಸ್ಟೋರ್ ಮಾಡಿದರೆ ಕೆಲವೇ ದಿನಗಳಲ್ಲಿ ಸಂಪೂರ್ಣ ಹಾಳಾಗಿ ಹೋಗುತ್ತದೆ. ಹೀಗಾಗಿ ಒಣ ಮೆಣಸಿನಕಾಯಿ ಕೆಡಬಾರದು ಅಂದರೆ ಸದಾ ಕೋಲ್ಡ್ ಇರುವ ಸ್ಥಳದಲ್ಲಿ ಸ್ಟೋರ್ ಮಾಡಬೇಕು. ಇದೆ ಕಾರಣದಿಂದ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈ ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ಸ್ಟಾಕ್ ಮಾಡಿದ್ದಾರೆ.

ಆದರೆ ರೈತರು ಇಟ್ಟ ಮೆಣಸಿನಕಾಯಿಗೆ ಕೋಲ್ಡ್ ಕಮ್ಮಿಯಾಗಿದ್ದಕ್ಕೆ ಗೋಡೌನ್​ನಲ್ಲಿ ಇಟ್ಟ ಕೆಲವೇ ದಿನಗಳಲ್ಲಿ ಸಾವಿರಾರು ಕ್ವಿಂಟಲ್ ಹಾಳಾಗಿ ಹೋಗಿದೆ. ಇದರಲ್ಲೂ ಆಂಧ್ರ ಮೂಲದ ರೈತರೊಬ್ಬರು ಇಟ್ಟ ಬರೋಬ್ಬರಿ 2 ಸಾವಿರ ಮೆಣಸಿನಕಾಯಿ ಚೀಲಗಳು ಯಾರು ಖರೀದಿ ಮಾಡದ ಸ್ಥಿತಿಗೆ ಬಂದಿದೆ. ಸಂಪೂರ್ಣವಾಗಿ ಬೂದು ಬಂದಿದ್ದು, ಕೆಂಪು ಬಣ್ಣದ ಮೆಣಸಿನಕಾಯಿ ಈಗ ಕಪ್ಪು ಬಣ್ಣ ಪಡೆದುಕೊಂಡಿದೆ. ಈ ಒಬ್ಬ ರೈತ ಅಷ್ಟೇ ಅಲ್ಲದೆ ಇನ್ನು ನೂರಾರು ರೈತರ ಸಾವಿರಾರು ಕ್ವಿಂಟಲ್ ಮೆಣಸಿನಕಾಯಿ ಬೆಳೆ ಕೋಲ್ಡ್ ಕಡಿಮೆಯಾಗಿದ್ದಕ್ಕೆ ಸಂಪೂರ್ಣ ಹಾಳಾಗಿ ಹೋಗಿದೆ.

ಖರೀದಿ ಮಾಡಲು ಬಂದ ವ್ಯಾಪರಸ್ಥರು ಮೆಣಸಿನಕಾಯಿ ಸ್ಥಿತಿ ನೋಡಿ ವಾಪಸ್ ಹೋಗಿದ್ದಾರೆ. ಇನ್ನು ಕೋಲ್ಡ್ ಸ್ಟೋರೇಜ್ ಗೋಡೌನ್​ನಲ್ಲಿ ದಿನದ 24 ಗಂಟೆ ಎಸಿ ಆನ್ ಆಗಿರಬೇಕು ಯಾವುದೆ ಕಾರಣಕ್ಕೂ ಸ್ವಲ್ಪ ಹೊತ್ತು ಸಹ ಬಂದ್ ಆಗಬಾರದು ಆದರೆ ಗೋಡೌನ್ ಒಳಗೆ ಹೋಗಿ ನೋಡಿದರೆ ಎಸಿಯಿಂದ ನೀರು ಹೊರ ಬಿದ್ದು ಮೆಣಸಿನಕಾಯಿ ಬೆಳೆ ಹಾಳಾಗಿದ್ದು, ಕಂಡು ಬರುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ಗೋಡೌನ್​ನ ಮ್ಯಾನೇಜರ್​ ರಫೀಕ್ಅವರನ್ನು ಕೇಳಿದರೆ ರೈತರು ಸ್ಟಾಕ್ ಮಾಡುವಾಗ ಮೆಣಸಿಕಾಯಿಗೆ ನೀರು ಹೊಡೆದುಕೊಂಡು ಬಂದಿದ್ದಾರೆ. ಇದೆ ಕಾರಣದಿಂದ ಹೀಗೆ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೀಜಕ್ಕಾಗಿ ಮುಂದುವರಿದ ರೈತರ ಪರದಾಟ; ತೋಟಗಾರಿಕೆ ಇಲಾಖೆ ಕಚೇರಿಗೆ ನುಗ್ಗಿ ಆಕ್ರೋಶ

ಲಾಕ್​ಡೌನ್​ ಎಫೆಕ್ಟ್: ಐದು ಎಕರೆ ಹಸಿ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ ಹಾವೇರಿ ರೈತ

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ