ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್

ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಮತ್ತಿಕೆರೆ ಡೆವಿಲ್ಸ್​ ಅರೆಸ್ಟ್​: ಯಶವಂತಪುರ ಠಾಣಾ ಪೊಲೀಸರು ಪ್ರಾಂಕ್ ಮಾಡುತ್ತಿದ್ದ 7 ಜನ ಯುವಕರನ್ನ ವಶಕ್ಕೆ ಪಡೆದಿದ್ದಾರೆ.ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ದೆವ್ವಗಳು ಆರ್​ಟಿ ನಗರದಿಂದ ಬಂದವು: ಮನೋರಂಜನೆಗಾಗಿ […]

ಆರ್​ಟಿ ನಗರದಿಂದ ಬಂದ ದೆವ್ವಗಳು.. ಮತ್ತಿಕೆರೆಯಲ್ಲಿ ಹುಚ್ಚಾಟ: ಆತಂಕ, ಅರೆಸ್ಟ್
ಸಾಧು ಶ್ರೀನಾಥ್​

Updated on: Nov 11, 2019 | 2:59 PM

ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ.

ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ.

ಮತ್ತಿಕೆರೆ ಡೆವಿಲ್ಸ್​ ಅರೆಸ್ಟ್​:
ಯಶವಂತಪುರ ಠಾಣಾ ಪೊಲೀಸರು ಪ್ರಾಂಕ್ ಮಾಡುತ್ತಿದ್ದ 7 ಜನ ಯುವಕರನ್ನ ವಶಕ್ಕೆ ಪಡೆದಿದ್ದಾರೆ.ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮೆರಾ, ಸಾಮಗ್ರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ದೆವ್ವಗಳು ಆರ್​ಟಿ ನಗರದಿಂದ ಬಂದವು:
ಮನೋರಂಜನೆಗಾಗಿ ಪ್ರಾಂಕ್ ಮಾಡ್ತಿದ್ದ ಯುವಕರು, ಕೂಕೀ ಪೀಡಿಯಾ ಎಂಬ ಯೂಟ್ಯೂಬ್ ಪೇಜ್ ಹೊಂದಿದ್ದರು. ಹೀಗಾಗಿ ಇಂತಹ ಸಾಹಸಕ್ಕೆ ಮುಂದಾಗಿದ್ದರು. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಪ್ರಾಂಕ್ ಮಾಡಿ ತೆರಳಿದ್ದರು. ಆದರೆ ಓರ್ವ ಯುವಕ ಮಾತ್ರ ಸ್ಥಳದಲ್ಲಿ ಬಿಟ್ಟಿದ್ದ ಸ್ಪೀಕರ್ ಹುಡುಕುತ್ತಿದ್ದ ಈ ವೇಳೆ ಪೊಲೀಸರು ಅವನನ್ನು ವಶಕ್ಕೆ ಪಡೆದು ಇನ್ನುಳಿದ 7 ಜನರನ್ನ ಕರೆಸಿಕೊಂಡಿದ್ದಾರೆ. ಶಾನ್ ಮಲಿಕ್ , ನವೀದ್, ಸಜಿಲ್ ಮಹಮದ್, ಮಹಮದ್ ಅಕ್ಯೂಬ್, ಸಾಕೀಬ್, ಸೈಯದ್ ನಬೀಲ್ ಹಾಗೂ ಯೂಸುಫ್ ಅಹಮದ್ ಬಂಧಿತರು ಇವರು ಇಂಜಿನಿಯರಿಂಗ್, ಬಿಬಿಎಂ ವಿದ್ಯಾರ್ಥಿಗಳಾಗಿದ್ದಾರೆ.

Published On - 2:42 pm, Mon, 11 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us