AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತಿಕ್ಕಿದ್ದೇ ತಡ.. ಆಪ್ಪಿಕೊಂಡೇ ಬಿಡ್ತು 10 ತಿಂಗಳ ಮಗುವಿಗೂ ಕೊರೊನಾ!

ಹಾಸನ: ಜಗತ್ತೇ ನಡುಗಿಸಿರುವ ಕೊರೊನಾವೈರಸ್‌ ಹೆಮ್ಮಾರಿಗೆ ಚಿಕ್ಕವರು ದೊಡ್ಡವರು ಅನ್ನೋ ಬೇಧ ಭಾವವೇ ಇಲ್ಲ. ಸಿಕ್ಕಿದ್ದೇ ಛಾನ್ಸ್‌ ಅಂತಾ ಸಿಕ್ಕ ಸಿಕ್ಕಲ್ಲಿ ನುಗ್ತಾ ಇದೆ. ಎದುರಿಗೆ ಕಂಡವರೆನ್ನೆಲ್ಲಾ ಅಪ್ಪಿಕೊಳ್ತಾ ಇದೆ. ಹೀಗೆ ಅಪ್ಪಿಕೊಂಡವರ ಸಾಲಿಗೆ ಈಗ 10 ತಿಂಗಳ ಕಂದಮ್ಮ ಸೇರಿಕೊಂಡಿದೆ. ಮುತ್ತಿಕ್ಕಿದ್ದೇ ತಡ ಆಪ್ಪಿಕೊಂಡೇ ಬಿಡ್ತು ಕೊರೊನಾ! ಹೌದು, ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ ವಿನಾಯಕ ಬಡಾವಣೆಯಲ್ಲಿ 10 ತಿಂಗಳ ಮಗೂಗು ಕೊರೊನಾ ಸೋಂಕು ತಗುಲಿದೆ. ಮಗುವಿನ ಸಂಬಂಧಿ ಕೊರೊನಾ ಸೋಂಕಿತ ಪಿ. 5479 ಅರಕಲಗೂಡು […]

ಮುತ್ತಿಕ್ಕಿದ್ದೇ ತಡ.. ಆಪ್ಪಿಕೊಂಡೇ ಬಿಡ್ತು 10 ತಿಂಗಳ ಮಗುವಿಗೂ ಕೊರೊನಾ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 12, 2020 | 8:02 PM

Share

ಹಾಸನ: ಜಗತ್ತೇ ನಡುಗಿಸಿರುವ ಕೊರೊನಾವೈರಸ್‌ ಹೆಮ್ಮಾರಿಗೆ ಚಿಕ್ಕವರು ದೊಡ್ಡವರು ಅನ್ನೋ ಬೇಧ ಭಾವವೇ ಇಲ್ಲ. ಸಿಕ್ಕಿದ್ದೇ ಛಾನ್ಸ್‌ ಅಂತಾ ಸಿಕ್ಕ ಸಿಕ್ಕಲ್ಲಿ ನುಗ್ತಾ ಇದೆ. ಎದುರಿಗೆ ಕಂಡವರೆನ್ನೆಲ್ಲಾ ಅಪ್ಪಿಕೊಳ್ತಾ ಇದೆ. ಹೀಗೆ ಅಪ್ಪಿಕೊಂಡವರ ಸಾಲಿಗೆ ಈಗ 10 ತಿಂಗಳ ಕಂದಮ್ಮ ಸೇರಿಕೊಂಡಿದೆ.

ಮುತ್ತಿಕ್ಕಿದ್ದೇ ತಡ ಆಪ್ಪಿಕೊಂಡೇ ಬಿಡ್ತು ಕೊರೊನಾ! ಹೌದು, ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದ ವಿನಾಯಕ ಬಡಾವಣೆಯಲ್ಲಿ 10 ತಿಂಗಳ ಮಗೂಗು ಕೊರೊನಾ ಸೋಂಕು ತಗುಲಿದೆ. ಮಗುವಿನ ಸಂಬಂಧಿ ಕೊರೊನಾ ಸೋಂಕಿತ ಪಿ. 5479 ಅರಕಲಗೂಡು ತಾಲೂಕಿನ ಗೌರಿಕೊಪ್ಪಲು ಗ್ರಾಮದವನು. ಈತ ಅರಕಲಗೂಡಿನ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ. ಆಗ ಮನೆಯಲ್ಲಿದ್ದ 10 ತಿಂಗಳ ಮುದ್ದಾದ ಮಗುವನ್ನು ಎತ್ತಿ ಮುದ್ದಾಡಿದ್ದಾನೆ. ಅಷ್ಟೇ ಅವನಿಂದ ಮಗೂಗು ವಕ್ಕಸಿಕೊಂಡಿದೆ ಕೊರೊನಾ.

ಒಟ್ಟು ಐದು ಜನರಿಗೆ ಕೊರೊನಾ ಹಂಚಿದ ಭೂಪ! ಇದು ಇಷ್ಟಕ್ಕೆ ಮುಗಿದಿಲ್ಲ. ಈ ಸೋಂಕಿತನಿಂದ ಇತರ ಐದು ಜನರಿಗೂ ಕೊರೊನಾ ಹರಡಿದೆ. ಸೋಂಕಿತ 5479ನ ಇಬ್ಬರು ಮಕ್ಕಳ ಜೊತೆಗೆ, ಅರಕಲಗೂಡಿನ ವಿನಾಯಕ ಬಡಾವಣೆಯ ಭೇಟಿ ಕೊಟ್ಟಿದ್ದ ಮನೆಯ ಹಿರಿಯ 60 ವರ್ಷದ ವ್ಯಕ್ತಿಯೂ ಸೇರಿ ಒಟ್ಟು ಐದು ಜನರಿಗೆ ಕೋವಿಡ್‌-19 ಹಬ್ಪಿರೋದು ಕನ್‌ಫರ್ಮ್‌ ಆಗಿದೆ.

ಪರೀಕ್ಷೆಯಲ್ಲಿ ಸೋಂಕು ಹರಡಿರೋದು ದೃಢವಾಗುತ್ತಲೆ ವಿನಾಯಕ ಬಡಾವಣೆಯ ಮೊದಲನೇ ಕ್ರಾಸ್‌ನ್ನ ಸೀಲ್‌ಡೌನ್‌ ಮಾಡಲಾಗಿದೆ. ಮನೆ ಸೇರಿದಂತೆ ಸುತ್ತಮುತ್ತಲೂ ಕೆಮಿಕಲ್ಸ್‌ ಬಳಸಿ ಸ್ಯಾನಿಟೈಸ್‌ ಮಾಡಲಾಗಿದೆ.

Follow Us
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
ಕೈ ಕೊಟ್ಟ ಮುಂಗಾರು:ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಹಿಡಿದು ಎಳೆದೊಯ್ದ ಪಿಎಸ್​​ಐ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ