AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಜ್ ಕಾರು ಮಾರುವ ಉದ್ಯಮಿಗಳೇ ಎಚ್ಚರ! ಖತರ್ನಾಕ್ ಜೋಡಿಯಿಂದ ಆಗುತ್ತೆ ವಂಚನೆ

ಬೆಂಗಳೂರು: ಉದ್ಯಮಿಗಳಿಗೆ ವಂಚಿಸುತ್ತಿದ್ದ ವಂಚಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೇರಳ ಮೂಲದ ಅಮ್ಜದ್, ಖುಷಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲು. ಉದ್ಯಮಿಗಳನ್ನೆ ಟಾರ್ಗೆಟ್ ಮಾಡಿ ಮಕ್ಮಲ್ ಟೋಪಿ ಹಾಕ್ತಿದ್ದ ಅಂತರರಾಜ್ಯ ವಂಚಕರಿವರು. ಆರ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದರು. ಬೆಂಗಳೂರಿನ ಉದ್ಯಮಿ ಶಾಜೀ ಜಾರ್ಜ್ ಥಾಮಸ್​ಗೆ ₹48 ಲಕ್ಷದ ಬೆಂಜ್ ಕಾರು ಖರೀದಿಸೋದಾಗಿ ವಂಚಿಸಿದ್ರು. ನಂತರ ಬೆಂಜ್ ಕಾರು ಖರೀದಿಸಿ 2 ತಿಂಗಳಾದ್ರೂ ಹಣ ನೀಡದೆ ಶಾಜೀಗೆ ಜೀವ ಬೆದರಿಕೆ ಹಾಕಿದ್ರು. […]

ಬೆಂಜ್ ಕಾರು ಮಾರುವ ಉದ್ಯಮಿಗಳೇ ಎಚ್ಚರ! ಖತರ್ನಾಕ್ ಜೋಡಿಯಿಂದ ಆಗುತ್ತೆ ವಂಚನೆ
ಆಯೇಷಾ ಬಾನು
|

Updated on:Jun 13, 2020 | 3:46 PM

Share

ಬೆಂಗಳೂರು: ಉದ್ಯಮಿಗಳಿಗೆ ವಂಚಿಸುತ್ತಿದ್ದ ವಂಚಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೇರಳ ಮೂಲದ ಅಮ್ಜದ್, ಖುಷಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ FIR ದಾಖಲು. ಉದ್ಯಮಿಗಳನ್ನೆ ಟಾರ್ಗೆಟ್ ಮಾಡಿ ಮಕ್ಮಲ್ ಟೋಪಿ ಹಾಕ್ತಿದ್ದ ಅಂತರರಾಜ್ಯ ವಂಚಕರಿವರು.

ಆರ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದರು. ಬೆಂಗಳೂರಿನ ಉದ್ಯಮಿ ಶಾಜೀ ಜಾರ್ಜ್ ಥಾಮಸ್​ಗೆ ₹48 ಲಕ್ಷದ ಬೆಂಜ್ ಕಾರು ಖರೀದಿಸೋದಾಗಿ ವಂಚಿಸಿದ್ರು. ನಂತರ ಬೆಂಜ್ ಕಾರು ಖರೀದಿಸಿ 2 ತಿಂಗಳಾದ್ರೂ ಹಣ ನೀಡದೆ ಶಾಜೀಗೆ ಜೀವ ಬೆದರಿಕೆ ಹಾಕಿದ್ರು.

ಅಷ್ಟೆ ಅಲ್ಲದೆ ಈ ಕಿಡಿಗೇಡಿಗಳು ಕಾರನ್ನ 18 ಲಕ್ಷ ವೆಚ್ಚವಾಗುವಷ್ಟು ಹಾಳು ಮಾಡಿದ್ದಾರೆ. ಕೇರಳ ಸೇರಿದಂತೆ ರಾಜ್ಯದ ಹಲವೆಡೆ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ವಂಚನೆಗೆ ಒಳಗಾದ ಶಾಜೀ ಜಾರ್ಜ್ ಥಾಮಸ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ ವಂಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Published On - 7:02 am, Sat, 13 June 20