AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಬ್ಲಿಘಿಗಳೇ ಕಂಟಕ: ಸಿಎಂ ಸ್ವಕ್ಷೇತ್ರದಲ್ಲಿ ದಿಢೀರನೆ ಕಾಣಿಸಿಕೊಂಡ 7 ಸೋಂಕಿತರು

ಶಿವಮೊಗ್ಗ: ಹಸಿರು ಅಂದ್ರೆ ಶಿವಮೊಗ್ಗ, ಶಿವಮೊಗ್ಗ ಅಂದ್ರೆ ಹಸಿರು. ಇದು ನಮ್ಮ ಜಿಲ್ಲೆ-ನಮ್ಮ ಹೆಮ್ಮೆ ಎಂದು ನಿನ್ನೆಯಷ್ಟೇ ಜಿಲ್ಲೆಯ ಬಗ್ಗೆ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಶಿವಮೊಗ್ಗದಲ್ಲೇ ಇದ್ದುಕೊಂಡು ಜಿಲ್ಲೆಯನ್ನು ಹಸಿರಾಗಿಸಲು ಈಶ್ವರಪ್ಪ ಶ್ರಮಹಾಕಿದ್ದರು. ಅತ್ತ ಸಿಎಂ ಯಡಿಯೂರಪ್ಪ ನಾಡಿನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಕಣ್ತಪ್ಪಿಸಿ ಖುದ್ದು ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ದಿಢೀರನೆ ಸೋಂಕಿತರು ಕಾಣಿಸಿಕೊಂಡಿದ್ದಾರೆ, ಇದಕ್ಕೆ ತಬ್ಲಿಘಿಗಳ ನಂಟೇ ಕಾರಣವಾಗಿದೆ. ಶಿಕಾರಿಪುರಕ್ಕೂ ಕಿಲ್ಲರ್ ವೈರಸ್ ಎಂಟ್ರಿ: ಗ್ರೀನ್ ಜೋನ್​ನಲ್ಲಿದ್ದ ಶಿವಮೊಗ್ಗ ಜಿಲ್ಲೆಗೂ ಕೊರೊನಾ ವಕ್ಕರಿಸಿದೆ. ಸಿಎಂ ಯಡಿಯೂರಪ್ಪ […]

ತಬ್ಲಿಘಿಗಳೇ ಕಂಟಕ: ಸಿಎಂ ಸ್ವಕ್ಷೇತ್ರದಲ್ಲಿ ದಿಢೀರನೆ ಕಾಣಿಸಿಕೊಂಡ 7 ಸೋಂಕಿತರು
ಸಾಧು ಶ್ರೀನಾಥ್​
|

Updated on:May 10, 2020 | 2:20 PM

Share

ಶಿವಮೊಗ್ಗ: ಹಸಿರು ಅಂದ್ರೆ ಶಿವಮೊಗ್ಗ, ಶಿವಮೊಗ್ಗ ಅಂದ್ರೆ ಹಸಿರು. ಇದು ನಮ್ಮ ಜಿಲ್ಲೆ-ನಮ್ಮ ಹೆಮ್ಮೆ ಎಂದು ನಿನ್ನೆಯಷ್ಟೇ ಜಿಲ್ಲೆಯ ಬಗ್ಗೆ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಶಿವಮೊಗ್ಗದಲ್ಲೇ ಇದ್ದುಕೊಂಡು ಜಿಲ್ಲೆಯನ್ನು ಹಸಿರಾಗಿಸಲು ಈಶ್ವರಪ್ಪ ಶ್ರಮಹಾಕಿದ್ದರು. ಅತ್ತ ಸಿಎಂ ಯಡಿಯೂರಪ್ಪ ನಾಡಿನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಕಣ್ತಪ್ಪಿಸಿ ಖುದ್ದು ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ದಿಢೀರನೆ ಸೋಂಕಿತರು ಕಾಣಿಸಿಕೊಂಡಿದ್ದಾರೆ, ಇದಕ್ಕೆ ತಬ್ಲಿಘಿಗಳ ನಂಟೇ ಕಾರಣವಾಗಿದೆ.

ಶಿಕಾರಿಪುರಕ್ಕೂ ಕಿಲ್ಲರ್ ವೈರಸ್ ಎಂಟ್ರಿ: ಗ್ರೀನ್ ಜೋನ್​ನಲ್ಲಿದ್ದ ಶಿವಮೊಗ್ಗ ಜಿಲ್ಲೆಗೂ ಕೊರೊನಾ ವಕ್ಕರಿಸಿದೆ. ಸಿಎಂ ಯಡಿಯೂರಪ್ಪ ತವರು ಶಿಕಾರಿಪುರಕ್ಕೂ ಕಿಲ್ಲರ್ ವೈರಸ್ ನುಗ್ಗಿದೆ. ಜಿಲ್ಲೆಯಲ್ಲಿ ಪತ್ತೆಯಾದ 8 ಕೊರೊನಾ ಪಾಸಿಟಿವ್ ಕೇಸ್​ಗಳ ಪೈಕಿ 7 ಜನ ಶಿಕಾರಿಪುರದವರಾಗಿದ್ದಾರೆ. ಮತ್ತೊಬ್ಬ ತೀರ್ಥಹಳ್ಳಿಯವರಾಗಿದ್ದಾರೆ. ಒಂದೇ ಒಂದು ಕೇಸ್​ ಇಲ್ಲದ ಜಿಲ್ಲೆಗೆ ಇದೀಗ ಹೆಮ್ಮಾರಿ ವಕ್ಕರಿಸಿದೆ.

ನಿನ್ನೆಯಷ್ಟೇ ಶಿವಮೊಗ್ಗಕ್ಕೆ ಬಂದಿದ್ದ ತಬ್ಲಿಘಿಗಳು: 9 ಮಂದಿ ತಬ್ಲಿಘಿಗಳ ಟ್ರಾವೆಲ್ ಹಿಸ್ಟರಿ ಶಿವಮೊಗ್ಗವನ್ನೇ ಬೆಚ್ಚಿ ಬೀಳಿಸಿದೆ. ಇವರು ಮಾರ್ಚ್ 5 ರಂದು ದಾವಣಗೆರೆಯಿಂದ ರೈಲಿನಲ್ಲಿ ಗುಜರಾತ್​ಗೆ ಪ್ರಯಾಣ ಮಾಡಿದ್ದರು. ಅಹಮದಾಬಾದ್​ನ ತಬ್ಲಿಘ್ ಜಮಾತ್​ನಲ್ಲಿ ಭಾಗವಹಿಸಿದ್ರು. ಜಮಾತ್​ನಲ್ಲಿ ಭಾಗವಹಿಸಿದ ಬಳಿಕ ಮಸೀದಿಯಲ್ಲಿ ಆಶ್ರಯ ಪಡೆದಿದ್ರು. ಅಹಮದಾಬಾದ್​ನಿಂದ ನಿನ್ನೆ ಶಿವಮೊಗ್ಗಕ್ಕೆ 9 ಬಂದಿದ್ದರು.

ಲಾಕ್​ಡೌನ್​ ಹಿನ್ನೆಲೆಯಲ್ಲಿ 9 ಜನರನ್ನ ಗುಜರಾತ್ ಸರ್ಕಾರ ಕ್ವಾರಂಟೈನ್ ಮಾಡಿತ್ತು. ಗುಜರಾತ್ ಸರ್ಕಾರದ ಅನುಮತಿ ಮೇರೆಗೆ ಶಿವಮೊಗ್ಗಕ್ಕೆ ತಬ್ಲಿಘಿಗಳು ನಿನ್ನೆ ವಾಪಸ್ ಬಂದರು. ಮುಂಬೈ, ಬೆಳಗಾವಿ ಗಡಿ ಮೂಲಕ ಇವರು ಆಗಮಿಸಿದ್ದರು. ಖಾಸಗಿ ಬಸ್ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ಇವರಿಗೆ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು.

Published On - 2:18 pm, Sun, 10 May 20

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?