ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..

ದಕ್ಷಿಣ ಕನ್ನಡ: ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ. ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ: ಅಂದ್ಹಾಗೆ, ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಜಗತ್ತು ತೆರೆದುಕೊಂಡಿದೆ. 80 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ ಕೇಂದ್ರ ಸಚಿವ ಕಿರಣ್​ ರಿಜ್ಜು ಚಾಲನೆ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನ […]

ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..
ಸಾಧು ಶ್ರೀನಾಥ್​

Updated on: Jan 04, 2020 | 10:51 AM

ದಕ್ಷಿಣ ಕನ್ನಡ: ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ.

ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ:
ಅಂದ್ಹಾಗೆ, ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಜಗತ್ತು ತೆರೆದುಕೊಂಡಿದೆ. 80 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ ಕೇಂದ್ರ ಸಚಿವ ಕಿರಣ್​ ರಿಜ್ಜು ಚಾಲನೆ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನ ಭರ್ಜರಿಯಾಗಿ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಅಂದ್ರೆ, 150 ಕ್ಕೂ ಹೆಚ್ಚು ಕಲಾತಂಡಗಳಲ್ಲಿ 5 ಸಾವಿರ ಕಲಾವಿದರು ಭಾಗಿಯಾಗಿದ್ರು. ಸಾಂಸ್ಕೃತಿಕ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು. ಈ ಮೆರವಣಿಗೆಯಲ್ಲಿ ದೇಶದ ಅತಿದೊಡ್ಡ ಮನುಷ್ಯ, ಬೃಹತ್ ಗಾತ್ರದ ಸುಲ್ತಾನ್ ಹೋರಿ, ಕೊರಗರ ಡೋಲು ಸೇರಿದಂತೆ ವಿವಿಧ ಬಗೆಯ ತಂಡಗಳು ಮಿಂಚಿದ್ವು.

ಇನ್ನು, ಈ ಅಥ್ಲೆಟಿಕ್ಸ್​ಗೆ ದೇಶದ ವಿವಿಧ ರಾಜ್ಯಗಳ 275 ಯೂನಿವರ್ಸಿಟಿಗಳಿಂದ ಕ್ರೀಡಾಪಟುಗಳು ಗಳು ಭಾಗವಹಿಸಿದ್ದಾರೆ. ಏನಿಲ್ಲ ಅಂದ್ರೂ 4,000 ಕ್ರೀಡಾಪಟುಗಳು, 1000 ಕ್ರೀಡಾ ತರಬೇತುದಾರರು, ನೂರಾರು ತೀರ್ಪುಗಾರರಿದ್ದಾರೆ. ಇನ್ನು, ನಿನ್ನೆ ನಡೆದ ರನ್ನಿಂಗ್ ರೇಸ್ ಅಂತೂ ರೋಮಾಂಚನಕಾರಿಯಾಗಿತ್ತು. ಸದ್ಯ ಈ ಕ್ರೀಡಾಕೂಟದಲ್ಲಿ ಕಲಾತಂಡಗಳ ಅದ್ಧೂರಿತನ ಮೇಳೈಸಿದ್ದು, ಕಲಾರಸಿಕರಿಗೆ ಇದು ಸಿಹಿಯೂಟದಂತಾಗಿದೆ. ಈಗ ನಡೆಯುತ್ತಿರುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕ್ರೀಡಾಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Published On - 8:43 am, Sat, 4 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us