AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಚೇನಹಳ್ಳಿ ಮಹಿಳೆಯ ಕಷ್ಟ ಕಂಡು ಮಮ್ಮಲ ಮರುಗಿದ ತಹಸೀಲ್ದಾರ್ ರೂಪಾ ಕೂಡಲೇ ನೆರವಿಗೆ ಧಾವಿಸಿದರು

ಅಂಚೇನಹಳ್ಳಿ ಮಹಿಳೆಯ ಕಷ್ಟ ಕಂಡು ಮಮ್ಮಲ ಮರುಗಿದ ತಹಸೀಲ್ದಾರ್ ರೂಪಾ ಕೂಡಲೇ ನೆರವಿಗೆ ಧಾವಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2022 | 11:02 PM

Share

ಪರಿಹಾರ ಅರಸಿ ಕಚೇರಿಗಳಿಗೆ ಅವರು ಅಲೆದಾಡಿದರೂ ಮಹಿಳೆಯ ಮೊರೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ತೀವ್ರ ಸ್ವರೂಪದ ಹತಾಷೆಗೊಳಗಾದ ಅವರು ತಮ್ಮ ತೋಟದಲ್ಲಿ ಊಟ ನೀರು ಬಿಟ್ಟು ಕೂತಿದ್ದು ರೂಪಾ ಅವರ ಕಿವಿಗೆ ಬಿದ್ದಾಗ ಅವರೊಳಗಿನ ಮಾತೃಹೃದಯ ಮಿಡಿಯಲಾರಂಭಿಸಿದೆ.

ಮಂಡ್ಯ: ರವಿವಾರವಷ್ಟೇ ಇಡೀ ಪ್ರಪಂಚ ಅಮ್ಮಂದಿರ ದಿನವನ್ನು (Mother Day) ಆಚರಿಸಿತು. ಈ ವಿಡಿಯೋನಲ್ಲಿ ನಿಮಗೆ ಇಬ್ಬರು ಮಹಿಳೆಯರು ಕಾಣುತ್ತಿದ್ದಾರೆ. ಒಬ್ಬರು ಅಸಹಾಯಕತೆಯಿಂದ ಕಣ್ಣೀರು ಸುರಿಸುತ್ತಿರುವ ವಯಸ್ಸಾದ ಮಹಿಳೆ (elderly woman) ಇನ್ನೊಬ್ಬರು ಅವರು ಸಂಕಷ್ಟ ಅರ್ಥ ಮಾಡಿಕೊಂಡು ಊಟ ಮಾಡಿಸುತ್ತಿರುವ ಯುವ ಮಹಿಳೆ. ಅವರಿಬ್ಬರ ನಡುವಿನ ಪ್ರೀತಿ, ವಾತ್ಸಲ್ಯ (love and affection) ನೋಡುತ್ತಿದ್ದರೆ, ತಾಯಿ ಮತ್ತು ಮಗಳ ನಡುವೆ ಇದಕ್ಕಿಂತ ಜಾಸ್ತಿ ಮಮತೆ, ಕಕ್ಕುಲಾತಿ ಇರಲಾರದು ಅನಿಸುಬಿಡುತ್ತದೆ. ಆದರೆ ವಾಸ್ತವ ಸಂಗತಿಯೆಂದರೆ ಇದು ಅಮ್ಮ-ಮಗಳ ಜೋಡಿ ಅಲ್ಲ. ಅವರ ನಡುವೆ ಬಹಳ ದೂರದ ಸಂಬಂಧವೂ ಇಲ್ಲ. ಅಸಲಿಗೆ ಅವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾ ಅಂತಲೂ ನಮಗೆ ಗೊತ್ತಿಲ್ಲ.

ಹಿರಿಯ ಮಹಿಳೆಗೆ ಊಟ ಮಾಡಿಸುತ್ತಾ ಸಂತೈಸುತ್ತಿರುವವರು ಕೆ ಆರ್ ಪೇಟೆಯ ತಹಸಿಲ್ದಾರ್ ಎಮ್ ವಿ ರೂಪಾ. ತಾಲ್ಲೂಕಿನ ಅಂಚೇನಹಳ್ಳಿಯ ನಿವಾಸಿಯಾಗಿರುವ ಹಿರಿ ಮಹಿಳೆಯ ತೋಟದಲ್ಲಿದ್ದ ತೆಂಗಿನ ಮರಗಳು ಅಕಾಲಿಕ ಮಳೆ ಮತ್ತು ಜೋರು ಗಾಳಿಯಿಂದ ಬುಡಸಮೇತ ಕಿತ್ತು ಉರುಳಿವೆ. ಮಹಿಳೆಗೆ ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಟಿವಿ9 ಕನ್ನಡ ಚ್ಯಾನೆಲ್ ನಲ್ಲಿ ಈ ಬಗ್ಗೆ ಒಂದು ವರದಿ ಸಹ ಬಿತ್ತರಗೊಂಡಿತ್ತು.

ಪರಿಹಾರ ಅರಸಿ ಕಚೇರಿಗಳಿಗೆ ಅವರು ಅಲೆದಾಡಿದರೂ ಮಹಿಳೆಯ ಮೊರೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಂಡಿಲ್ಲ. ಹಾಗಾಗಿ ತೀವ್ರ ಸ್ವರೂಪದ ಹತಾಷೆಗೊಳಗಾದ ಅವರು ತಮ್ಮ ತೋಟದಲ್ಲಿ ಊಟ ನೀರು ಬಿಟ್ಟು ಕೂತಿದ್ದು ರೂಪಾ ಅವರ ಕಿವಿಗೆ ಬಿದ್ದಾಗ ಅವರೊಳಗಿನ ಮಾತೃಹೃದಯ ಮಿಡಿಯಲಾರಂಭಿಸಿದೆ.

ಕೂಡಲೇ ಅವರು ಅಲ್ಲಿಗೆ ಧಾವಿಸಿ, ಹಿರಿಯ ಮಹಿಳೆಯನ್ನು ಸಂತೈಸಿದ್ದಾರೆ. ಅವರಿಗೆ ತಮ್ಮ ಕೈಯಾರೆ ಊಟ ಮಾಡಿಸಿದ್ದಾರೆ, ನೀರು ಕುಡಿಸಿದ್ದಾರೆ ಮತ್ತು ಆದಷ್ಟು ಬೇಗ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

ತಹಸೀಲ್ದಾರ್ ರೂಪಾ ಅವರು ಸರಳತೆ, ಮಾನವೀಯ ಕಳಕಳಿ ಕಂಡು ಅಂಚೇನಹಳ್ಳಿಯ ಜನ ಮಾತ್ರ ಅಲ್ಲ ನಾವು ಕೂಡ ಆಶ್ಚರ್ಯಚಕಿತರಾಗಿದ್ದೇವೆ ಮಾರಾಯ್ರೇ.

ಇದನ್ನೂ ಓದಿ:     ಪಕ್ಷದ ಬ್ಯಾನರ್ ನಂತಿದೆ ಎಂದು ಸರ್ಕಾರ ಕೊಟ್ಟ ಸೀರೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಕ್ಕೆ ನಷ್ಟ ಎಷ್ಟು ಗೊತ್ತಾ!?